Percentage Politics: 'ಪರ್ಸೆಂಟೇಜ್ ಪಿತಾಮಹರೇ ಕಾಂಗ್ರೆಸ್‌ನವರು, ಅವರಿಗೇನ್ರಿ ನೈತಿಕತೆ ಇದೆ.'?

Dec 16, 2021, 3:17 PM IST

ಬೆಂಗಳೂರು (ಡಿ. 16): ಪ್ರಧಾನ ಮಂತ್ರಿಗಳಿಗೆ (PM Modi) ರಾಜ್ಯದ ಗುತ್ತಿಗೆದಾರರ ಸಂಘವು ಅಧಿಕೃತವಾಗಿ ದಾಖಲೆಗಳ ಸಮೇತ ರಾಜ್ಯದ ವಿವಿಧ ಇಲಾಖೆಗಳಲ್ಲಿ 40 ಪರ್ಸೆಂಟ್‌ (Percentage Politics) ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ದೂರಿದೆ. ಆದರೆ ಪ್ರಧಾನಮಂತ್ರಿ ಸ್ಪಂದಿಸಿಲ್ಲ. ಈ ಬಗ್ಗೆ ಗುತ್ತಿಗೆದಾರರು ಹೋರಾಟ ಮುಂದುವರೆಸಿದ್ದಾರೆ. ಇದಕ್ಕೆ ಪೂರಕವಾಗಿ ಕಾಂಗ್ರೆಸ್ ಕೂಡಾ ಪ್ರತಿಭಟಿಸುತ್ತಿದೆ. 

'ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ಗಿಲ್ಲ, ಯಾಕೆಂದರೆ ಅವರು ಅದರಲ್ಲೇ ಮುಳುಗಿ, ಅದರಲ್ಲೇ ಬದುಕ್ತಾ ಇದಾರೆ. ಕಾಂಗ್ರೆಸ್ ಅಧ್ಯಕ್ಷರ ಮನೆ ಮೇಲೆ ಐಟಿ ದಾಳಿ ನಡೆದು ಜೈಲಿಗೂ ಹೋಗಿ ಬಂದಿಲ್ವೇನ್ರಿ.? ಪರ್ಸೆಂಟೇಜ್ ಆರೋಪವನ್ನು ನಾನು ಅಲ್ಲಗಳೆಯುತ್ತಿಲ್ಲ, ವ್ಯವಸ್ಥೆಯೊಳಗೆ ಇದೆ. ಪರ್ಸಂಟೇಜ್ ಪಿತಾಮಹರೇ ಕಾಂಗ್ರೆಸ್‌ನವರು. ಆಡಳಿತದಲ್ಲಿ ಪಾರದರ್ಶಕತೆ ತರಲು ಇದು ಸರಿಯಾದ ಸಮಯ' ಎಂದು ಸಿ ಟಿ ರವಿ ಹೇಳಿದ್ದಾರೆ.