ಮುಖ್ಯಮಂತ್ರಿಗಳೇ ಗಮನಿಸಿ, ನೂತನ ಸಚಿವರಿಂದಲೇ ಕೊರೊನಾ ರೂಲ್ಸ್ ಬ್ರೇಕ್

Aug 7, 2021, 3:00 PM IST

ಬೆಂಗಳೂರು (ಆ. 07): 3 ನೇ ಅಲೆ ಶುರುವಾಗುವ ಭೀತಿಯಲ್ಲಿ ಇಂದಿನಿಂದ 8 ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ವಿಧಿಸಲಾಗಿದೆ. ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸಿಎಂ ಸೂಚಿಸಿದ್ದಾರೆ. ಆದರೆ ನೂತನ ಸಚಿವರಿಂದಲೇ ನಿಯಮ ಉಲ್ಲಂಘನೆಯಾಗಿದೆ. ನೂತನ ಸಚಿವರಾಗಿ ಕ್ಷೇತ್ರಕ್ಕೆ ಆಗಮಿಸಿದ ಸಚಿವರಿಗೆ ಅದ್ಧೂರಿ ಸ್ವಾಗತ ನೆಪದಲ್ಲಿ ರೂಲ್ಸ್ ಬ್ರೇಕ್ ಆಗಿದೆ. ಶಶಿಕಲಾ ಜೊಲ್ಲೆ, ಬಿಸಿ ಪಾಟೀಲ್ ಕ್ಷೇತ್ರದಲ್ಲಿ ಅದ್ಧೂರಿ ಮೆರವಣಿಗೆ ನಡೆದಿದೆ. 

8 ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಅವಧಿ ಹೆಚ್ಚಳ, ಆ. 16 ರವರೆಗೆ ಹೊಸ ನಿರ್ಬಂಧ