ಒಳ್ಳೇದಲ್ಲ ಕುಡಿತ, ದುರಂತ ಕಾದಿದೆ ಖಚಿತ; ಸರ್ಕಾರಕ್ಕೆ ಮನಃಶಾಸ್ತ್ರಜ್ಞ ಸದಾನಂದ್ ರಾವ್ ಮನವಿ!

May 4, 2020, 7:19 PM IST

ಬೆಂಗಳೂರು(ಮೇ.04): ಕೊರೋನಾ ವೈರಸ್ ಭೀತಿ ಹಾಗೂ ಲಾಕ್‌ಡೌನ್ ನಡುವೆ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಈ ಕುರಿತು ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಇದೀಗ ಮನಃಶಾಸ್ತ್ರಜ್ಞ ಸದಾನಂದ್ ರಾವ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಮದ್ಯ ಖರೀದಿಸುವವರೆಗ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯ. ಕುಡಿದ ಬಳಿಕ ಯಾವ ನಿಯಮವೂ ಪಾಲಿಸುವ ಸ್ಥಿತಿಯಲ್ಲಿ ಯಾವ ಕುಡುಕನೂ ಇರೋಲ್ಲ. ಅವನು ಸಂಪೂರ್ಣ ಮಾನಸಿಕ ಸ್ವಾಸ್ಥ್ಯ ಕಳೆದುಕೊಳ್ಳುತ್ತಾನೆ. ಇದು ಕೊರೋನಾ ಮಾತ್ರವಲ್ಲ ಇತರೆ ಸಮಸ್ಯೆಗಳಿಗೂ ಕಾರಣವಾಗಲಿದೆ. ಹೀಗಾಗಿ ಸರ್ಕಾರ ಮದ್ಯ ಮಾರಾಟ ನಿರ್ಧಾರವನ್ನು ಪುನರ್ ಪರೀಶಿಲಸಬೇಕು ಎಂದು ಮನಃಶಾಸ್ತ್ರಜ್ಞ ಕೆ.ಸಿ. ಸದಾನಂದ್ ರಾವ್ ಮನವಿ ಮಾಡಿದ್ದಾರೆ.