ಸತ್ಯ ಬಾಯ್ಬಿಟ್ಟ ಸಲೂನ್ ಮಾಲೀಕನಿಗೆ ಚೈತ್ರಾ ಕುಂದಾಪುರ ಗ್ಯಾಂಗ್ ಧಮ್ಕಿ!

Sep 14, 2023, 11:19 PM IST

ಚೈತ್ರಾ ಕುಂದಾಪುರ ಗ್ಯಾಂಗ್ ಹೆಣೆದ ನಾಟಕದಲ್ಲಿ ಉದ್ಯಮಿಗೋವಿಂದ ಬಾಬು 5 ಕೋಟಿ ಕಳೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಚೈತ್ರಾ ಗ್ಯಾಂಗ್ ಜೈಲು ಸೇರಿದೆ. ಈ ಕುರಿತ ಸತ್ಯ ಬಾಯ್ಬಿಟ್ಟ ಸಲೂನ್ ಮಾಲೀಕನಿಗೆ ಇದೀಗ ಚೈತ್ರಾ ಗ್ಯಾಂಗ್ ದಮ್ಕಿ ಹಾಕಿದೆ. ಇತ್ತ ಚೈತ್ರಾ ಕುಂದಾಪುರ  ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ. ಇಂದಿರಾ ಕ್ಯಾಂಟೀನ್ ಬಿಲ್ ಬಾಕಿ ಇರುವ ಕಾರಣ ಈ ಷಡ್ಯಂತ್ರ ಮಾಡಲಾಗಿದೆ ಎಂದು ಚೈತ್ರಾ ಹೇಳಿದ್ದಾರೆ. ಇಷ್ಟೇ ಅಲ್ಲ, ಸ್ವಾಮೀಜಿ ಸಿಕ್ಕಿ ಹಾಕಿಕೊಂಡರೆ ಎಲ್ಲಾ ಸತ್ಯ ಹೊರಗೆಬರಲಿದೆ ಎಂದಿದ್ದಾರೆ. ಈ ವಂಚನೆ ಪ್ರಕರಣದೊಳಗೆ ಹಲವು ಕತೆಗಳನ್ನು ಹೆಣೆಯಲಾಗಿದೆ. ಹಲವು ಪಾತ್ರಧಾರಿಗಳನ್ನು ಸೃಷ್ಟಿಸಿ ಬಹುದೊಡ್ಡ ವಂಚನೆ  ಮಾಡಲಾಗಿದೆ.