ಬೆಂಕಿ ಕಿರಾತಕರ ಬೇಟೆಗೆ ಅಖಾಡಕ್ಕಿಳಿದ ಕರ್ನಾಟಕದ ಖಡಕ್ ಕಾಪ್‌ ರವಿಕುಮಾರ್..!

Aug 24, 2020, 1:29 PM IST

ಬೆಂಗಳೂರು (ಆ. 24): ಡಿಜೆ ಹಳ್ಳಿ, ಕೆ ಜಿ ಹಳ್ಳಿ ಕಿರಾತಕರನ್ನು ಹೆಡೆಮುರಿ ಕಟ್ಟಿ ದಕ್ಷತೆ ಮೆರೆದಿದ್ದಾರೆ ಡಿಸಿಪಿ ರವಿಕುಮಾರ್. ಕೆಜಿ ಹಳ್ಳಿ, ಡಿಜೆ ಹಳ್ಳಿಯಲ್ಲಿ ಬೆಂಕಿ ಇಟ್ಟವರನ್ನು ಬಲೆಗೆ ಬೀಳಿಸುವುದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಇಂತವರಿಗೆ ತಕ್ಕ ಪಾಠ ಕಲಿಸಲು ಗಟ್ಟಿ ಗುಂಡಿಗೆ ಖಡಕ್ ಆಫೀಸರ್ ಬೇಕಿತ್ತು. ಆಗ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದೇ ಡಿಸಿಪಿ ರವಿ ಕುಮಾರ್. ಗಲಭೆಕೋರರು ಎಲ್ಲಿಯೂ ತಪ್ಪಿಸಿಕೊಳ್ಳದಿರಲು ಸಖತ್ ಪ್ಲಾನ್ ಮಾಡಿದ್ದರು.  3 ದಿನಗಳ ಕಾಲ ನಡೆದ ಆಪರೇಷನ್ ರೋಚಕವಾಗಿತ್ತು. ಆಪರೇಷನ್ ಸಾರಥ್ಯ ವಹಿಸಿದ್ದವರು ಡಿಸಿಪಿ ರವಿ ಕುಮಾರ್. ಗಲಭೆ ನಂತರ ಇವರಿಗೆ ಸವಾಲಾಗಿದ್ದು ಗಲಭೆಕೋರರನ್ನು ಪತ್ತೆ ಹಚ್ಚುವುದು. ಆ ಕೆಲಸವನ್ನು ರವಿಕುಮಾರ್ ಹಾಗೂ ಅವರ ತಂಡ ಸಮರ್ಥವಾಗಿ ನಿಭಾಯಿಸಿದೆ. ಮಿಡ್‌ನೈಟ್‌ ಆಪರೇಷನ್‌ನ ರೋಚಕ ಕಹಾನಿ ಇಲ್ಲಿದೆ ನೋಡಿ..!

ಬೆಂಗಳೂರು ಗಲಭೆ ತನಿಖೆಯ ದಾರಿ ತಪ್ಪಿಸಲು ಪೋಷಕರ ಪ್ಲಾನ್!