ಹೈಪ್ರೊಫೈಲ್ ವಂಚಕ ಯುವರಾಜ್ ಸ್ವಾಮಿ ವಿರುದ್ಧ ಚಾರ್ಜ್‌ಶೀಟ್; ಬೆಚ್ಚಿ ಬೀಳಿಸುವ ವಿವರ ಇದರಲ್ಲಿದೆ!

Aug 13, 2021, 1:40 PM IST

ಬೆಂಗಳೂರು (ಆ. 13): ಹೈಪ್ರೊಫೈಲ್ ವಂಚಕ ಯುವರಾಜ್ ಸ್ವಾಮಿ ವಿರುದ್ಧ ಚಾರ್ಜ್‌ಶೀಟ್ ದಾಖಲಾಗಿದೆ. ಗಣ್ಯರೊಂದಿಗಿನ ಆತ್ಮೀಯತೆಯಿಂದ ಕೋಟಿ ಕೋಟಿ ಹಣ ಲಪಟಾಯಿಸಿರುವ ಆರೋಪ ಕೇಳಿ ಬಂದಿತ್ತು.

ರಾಜೀನಾಮೆ ಬೆದರಿಕೆಗೆ ಬಗ್ಗದ ಸಿಎಂ, ಖಾತೆ ಬದಲಾವಣೆಗೆ ಒಲವು ತೋರದ ಹೈಕಮಾಂಡ್, ಆನಂದ್ ಮುಂದಿನ ನಡೆ.?

ಈ ಕಳ್ಳಸ್ವಾಮಿಯ ವಿರುದ್ಧ ಹಲವರು ದೂರು ನೀಡಿದ್ದರು. ಅದನ್ನು ಆಧರಿಸಿ ಇಂದು 300 ಪುಟಗಳ ಚಾರ್ಟ್‌ಶೀಟ್ ಸಲ್ಲಿಕೆಯಾಗಿದೆ. ಚಾರ್ಜ್‌ಶೀಟ್ ಪ್ರತಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ಸಚಿವ ಮುರುಗೇಶ್ ನಿರಾಣಿ, ಮಧ್ವರಾಜ್, ಉಮೇಶ್ ಕತ್ತಿ ಬಯೋಡೇಟಾ, ಲೆಟರ್ ಹೆಡ್, ಸಿಕ್ಕಿದೆ. ಶ್ರೀರಾಮುಲು ಅವರಿಗೆ ಸೇರಿದ ಕೆಲ ದಾಖಲೆಗಳು ಸಿಕ್ಕಿದ್ದವು. ಈ ಎಲ್ಲಾ ಅಂಶಗಳು ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ.