ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ಮೃತ ವೃದ್ಧೆಯ ಶವ ಹೊತ್ತೊಯ್ದ ಬಿಬಿಎಂಪಿ ಸಿಬ್ಬಂದಿ

Jul 1, 2020, 2:40 PM IST

ಬೆಂಗಳೂರು (ಜು. 01): ಶವ ಸಂಸ್ಕಾರದಲ್ಲಿ ನಿರ್ಲಕ್ಷ್ಯ ವಹಿಸಿರುವ ಘಟನೆ ನಡೆದಿದೆ. ಮೃತ ವೃದ್ಧೆಯ ಶವವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಬಿಬಿಎಂಪಿ ಸಿಬ್ಬಂದಿ ಕರೆದೊಯ್ದಿದ್ದಾರೆ. ನಾಗರಬಾವಿಯ ಮಾಳಗಾಳದಲ್ಲಿ ಶಂಕಿತೆ ಸಾವನ್ನಪ್ಪಿದ್ದರು. ಮೃತ ವೃದ್ಧೆಯ ಶವವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ಕರೆದೊಯ್ದಿದ್ದಾರೆ. ಈ ದೃಶ್ಯ ಕಂಡು ಜನತೆ ಬೆಚ್ಚಿ ಬಿದ್ದಿದೆ. ಎಂಥಾ ಬೇಜವಾಬ್ದಾರಿ ಇದು? ಯಾಕಿಷ್ಟು ಅಸಡ್ಡೆ ಮಾಡಲಾಗುತ್ತಿದೆ? ಸಂಬಂಧಪಟ್ಟ ಅಧಿಕಾರಿಗಳೇ ಮೈ ಚಳಿ ಬಿಟ್ಟು ಕೆಲಸ ಮಾಡಿ. ದಯವಿಟ್ಟು ಈ ರೀತಿಯಾಗಿ ಕೆಲಸ ಮಾಡಬೇಡಿ..!

ಶವಸಂಸ್ಕಾರದಲ್ಲಿ ಎಡವಟ್ಟು: BBMP ಬೇಜವಾಬ್ದಾರಿ ಬಟಾಬಯಲು..!