ಕೊರೋನಾ ಕಮಾಂಡರ್‌ವೊಬ್ಬರ ಜೀವ ಉಳಿಸಲಾಗದೇ ಕೈಚೆಲ್ಲಿದ ಬಿಬಿಎಂಪಿ..!

ಕೊರೋನಾ ಕಮಾಂಡರ್‌ವೊಬ್ಬರ ಜೀವ ಉಳಿಸಲಾಗದೇ ಕೈಚೆಲ್ಲಿದ ಬಿಬಿಎಂಪಿ..!

Suvarna News   | Asianet News
Published : Jul 16, 2020, 12:04 PM IST

ಶಿವನಗರದ ಬಿಬಿಎಂಪಿ ವರ್ಕ್ ಇನ್ಸ್‌ಪೆಕ್ಟರ್ ಇದೀಗ ಬಿಬಿಎಂಪಿ ನಿರ್ಲಕ್ಷ್ಯ ವ್ಯವಸ್ಥೆಗೆ ಬಲಿಯಾಗಿದ್ದಾರೆ. ಬಿಬಿಎಂಪಿ ಅಧಿಕಾರಿ ಒಂದುವರೆ ತಿಂಗಳುಗಳ ಕಾಲ ರೈಲ್ವೇ ಸ್ಟೇಷನ್‌ನಲ್ಲಿ ಕ್ವಾರಂಟೈನ್ ಡ್ಯೂಟಿ ಮಾಡಿದ್ದಾರೆ. ಮಳೆಯಲ್ಲೇ ನೆನೆದುಕೊಂಡು ಎರಡು ದಿನ ಕೆಲಸ ನಿರ್ವಹಿಸಿದ್ದಾರೆ. ಆದರೆ ಈ ಕೊರೋನಾ ಕಮಾಂಡರ್ ಜೀವ ಉಳಿಸಲಾಗದೇ ಬಿಬಿಎಂಪಿ ಕೈಚೆಲ್ಲಿದೆ.

ಬೆಂಗಳೂರು(ಜು.16): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಅಬ್ಬರ ಜೋರಾಗಿದೆ. ಇದೇ ವೇಳೆ ಬಿಬಿಎಂಪಿಯ ದಿವ್ಯನಿರ್ಲಕ್ಷ್ಯ ಮತ್ತೊಮ್ಮೆ ಬಟಾಬಯಲಾಗಿದೆ. ಡೋಂಟ್ ಕೇರ್, ಕೇರ್ ಲೆಸ್ ಬಿಬಿಎಂಪಿ ಕಥೆಯನ್ನು ಸುವರ್ಣ ನ್ಯೂಸ್ ನಿಮ್ಮ ಮುಂದೆ ಬಿಚ್ಚಿಟ್ಟಿದೆ ನೋಡಿ.

ಹೌದು, ಶಿವನಗರದ ಬಿಬಿಎಂಪಿ ವರ್ಕ್ ಇನ್ಸ್‌ಪೆಕ್ಟರ್ ಇದೀಗ ಬಿಬಿಎಂಪಿ ನಿರ್ಲಕ್ಷ್ಯ ವ್ಯವಸ್ಥೆಗೆ ಬಲಿಯಾಗಿದ್ದಾರೆ. ಬಿಬಿಎಂಪಿ ಅಧಿಕಾರಿ ಒಂದುವರೆ ತಿಂಗಳುಗಳ ಕಾಲ ರೈಲ್ವೇ ಸ್ಟೇಷನ್‌ನಲ್ಲಿ ಕ್ವಾರಂಟೈನ್ ಡ್ಯೂಟಿ ಮಾಡಿದ್ದಾರೆ. ಮಳೆಯಲ್ಲೇ ನೆನೆದುಕೊಂಡು ಎರಡು ದಿನ ಕೆಲಸ ನಿರ್ವಹಿಸಿದ್ದಾರೆ. ಆದರೆ ಈ ಕೊರೋನಾ ಕಮಾಂಡರ್ ಜೀವ ಉಳಿಸಲಾಗದೇ ಬಿಬಿಎಂಪಿ ಕೈಚೆಲ್ಲಿದೆ.

ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಆ ಅಧಿಕಾರಿಗೆ ಸೂಕ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗಲೇ ಇಲ್ಲ. ಈ ಕುರಿತಂತೆ ಆಸ್ಪತ್ರೆಯ ಬಳಿ ನಿಂತು ಆ ಅಧಿಕಾರಿ ಲಾಯರ್ ಬಳಿ ಫೋನ್‌ ಮೂಲಕ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ. ಸರ್ಕಾರಿ, ಖಾಸಗಿ ಆಸ್ಪತ್ರೆ ಅಲೆದು ಅಲೆದು ಸುಸ್ತಾಗಿ ಅ ಅಧಿಕಾರಿ ಕೊನೆಯುಸಿರೆಳೆದಿದ್ದಾರೆ. ಬಿಬಿಎಂಪಿ ಉನ್ನತ ಅಧಿಕಾರಿಗಳು, ಅಷ್ಟದಿಕ್ಪಾಲಕ ಸಚಿವರೇ ಈ ಸ್ಟೋರಿ ನೋಡಿ, ಸಾಧ್ಯವಾದ್ರೆ ಒಂದು ಹನಿ ಕಣ್ಣೀರು ಹಾಕಿ...
 

23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!