ಡಿಕೆಶಿ ನಮ್ಮ ಬೆನ್ನಿಗೆ ನಿಂತು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ: ಅಖಂಡ ಶ್ರೀನಿವಾಸಮೂರ್ತಿ

Nov 21, 2020, 3:37 PM IST

ಬೆಂಗಳೂರು (ನ. 21): ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಇಂದು ಡಿಕೆಶಿ ಮನೆಗೆ ಭೇಟಿ ಕೊಟ್ಟಿದ್ದು ಚರ್ಚೆ ನಡೆಸಿದ್ದಾರೆ. 

'ಡಿಕೆ ಶಿವಕುಮಾರ್ ನನ್ನ ಬೆನ್ನಿಗೆ ನಿಲ್ಲುತ್ತಾರೆಂದು ಭರವಸೆ ಮೂಡಿದೆ. ಪಕ್ಷ ಕೂಡಾ ಜೊತೆಗೆ ನಿಲ್ಲಲಿದೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದೇನೆ' ಎಂದು ಅಖಂಡ ಶ್ರೀನಿವಾಸ ಮೂರ್ತಿ ಹೇಳಿದ್ದಾರೆ. 

ಗೇಮ್ ಪ್ರಿಯರೇ ಗಮನಿಸಿ, ಆನ್‌ಲೈನ್‌ ಗೇಮ್‌ಗೂ ಬೀಳಲಿದೆ ಬ್ರೇಕ್?

ಡಿಕೆಶಿ ಕೂಡಾ ಈ ಬಗ್ಗೆ ಮಾತನಾಡಿದ್ದು, ಅಖಂಡ ಅವರು ನಮ್ಮನ್ನು ಭೇಟಿ ಮಾಡಿದ್ದಾರೆ. ನೋವನ್ನು ಹೇಳಿಕೊಂಡಿದ್ದಾರೆ. ಈ ಬಗ್ಗೆ ನಾವು ಚರ್ಚಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.