ಗಲಭೆಗೆ ಸಂಬಂಧಿಸಿದಂತೆ ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ಕಮಿಷನರ್ ಕಚೇರಿಗೆ ಕರೆಸಲಾಗಿತ್ತು. ಗಲಭೆ ದಿನ ಏನಾಯಿತು? ರಾಜಕೀಯ ದ್ವೇಷ ಏನಾದರೂ ಇರಬಹುದಾ? ಎನ್ನುವುದ ಬಗ್ಗೆ ವಿಚಾರಿಸುತ್ತಿರುವಾಗ ಅಖಂಡ ಕಣ್ಣೀರು ಹಾಕಿದ್ದಾರೆ. 'ನನ್ನ ಜೀವನದಲ್ಲಿ ಇದೊಂದು ದೊಡ್ಡ ಶಾಕ್! ನನ್ನ ಮನೆಯನ್ನು ಭಸ್ಮ ಮಾಡಿದ್ದು ಅಷ್ಟೊಂದು ನೋವು ತಂದಿಲ್ಲ. ಆದರೆ ನನ್ನ ಮೇಲೆ ಷಡ್ಯಂತ್ರ ಮಾಡಿದ್ರಲ್ಲಾ, ಅದು ಬೇಸರ ತಂದಿತು. ಇದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಹಿತಶತ್ರುಗಳೇ ಇಂತಹ ಕೆಲಸ ಮಾಡಿದ್ದಾರೆ' ಎಂದು ಅಳಲು ತೋಡಿಕೊಂಡಿದ್ದಾರೆ.
ಬೆಂಗಳೂರು (ಆ. 19): ಗಲಭೆಗೆ ಸಂಬಂಧಿಸಿದಂತೆ ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ಕಮಿಷನರ್ ಕಚೇರಿಗೆ ಕರೆಸಲಾಗಿತ್ತು. ಗಲಭೆ ದಿನ ಏನಾಯಿತು? ರಾಜಕೀಯ ದ್ವೇಷ ಏನಾದರೂ ಇರಬಹುದಾ? ಎನ್ನುವುದ ಬಗ್ಗೆ ವಿಚಾರಿಸುತ್ತಿರುವಾಗ ಅಖಂಡ ಕಣ್ಣೀರು ಹಾಕಿದ್ದಾರೆ. 'ನನ್ನ ಜೀವನದಲ್ಲಿ ಇದೊಂದು ದೊಡ್ಡ ಶಾಕ್! ನನ್ನ ಮನೆಯನ್ನು ಭಸ್ಮ ಮಾಡಿದ್ದು ಅಷ್ಟೊಂದು ನೋವು ತಂದಿಲ್ಲ. ಆದರೆ ನನ್ನ ಮೇಲೆ ಷಡ್ಯಂತ್ರ ಮಾಡಿದ್ರಲ್ಲಾ, ಅದು ಬೇಸರ ತಂದಿತು. ಇದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಹಿತಶತ್ರುಗಳೇ ಇಂತಹ ಕೆಲಸ ಮಾಡಿದ್ದಾರೆ' ಎಂದು ಅಳಲು ತೋಡಿಕೊಂಡಿದ್ದಾರೆ.