2 ವಾರಗಳಲ್ಲಿ 2 ಸಭೆ, ಅತೃಪ್ತಿಯ ಮೂಲ ಇಲ್ಲಿದೆ!

May 29, 2020, 11:35 AM IST

ಬೆಂಗಳೂರು (ಮೇ. 29): ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಕಳೆದ 15 ದಿನಗಳಿಂದ ಸಭೆ ಮೇಲೆ ಸಭೆ ನಡೆಯುತ್ತಿದೆ. ಉಮೇಶ್ ಕತ್ತಿ, ಯತ್ನಾಳ್ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ.  ಕೆಲವರಿಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಹಾಗೂ ರಾಜ್ಯಸಭಾ ಟಿಕೆಟ್ ವಿಚಾರದ್ಲೂ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಸಿಎಂ ವಿರುದ್ಧ ಶಾಸಕರು ಮುನಿಸಿಕೊಂಡಿದ್ದಾರೆ. ಸಿಎಂ ಯಡಿಯೂರಪ್ಪನವರಿಗೆ ಕೊರೊನಾ ಎದುರಿಸುವ ಸವಾಲು ಒಂದು ಕಡೆಯಾದರೆ ಈ ಭಿನ್ನಮತವನ್ನು ತಣ್ಣಗಾಗಿಸುವ ಸವಾಲು ಇನ್ನೊಂದು ಕಡೆ. ಹಾಗಾದರೆ ಅತೃಪ್ತಿ ಮೂಲವೇನು? ಹೇಗೆ ನಿಭಾಯಿಸ್ತಾರೆ ಸಿಎಂ? ಇಲ್ಲಿದೆ ನೋಡಿ..! 

ಆಪರೇಷನ್ ಯಡಿಯೂರಪ್ಪ: ಬಿಜೆಪಿ ಅತೃಪ್ತ ಶಾಸಕರ 4 ಬೇಡಿಕೆಗಳಿವು!