ಮೊದಲ ಭಾರಿಗೆ ತಲೆ ಎತ್ತಿ ನಿಂತ ವಜ್ರಮುನಿ ಕಂಚಿನ ಪುತ್ಥಳಿ!

ಮೊದಲ ಭಾರಿಗೆ ತಲೆ ಎತ್ತಿ ನಿಂತ ವಜ್ರಮುನಿ ಕಂಚಿನ ಪುತ್ಥಳಿ!

Published : Nov 27, 2023, 09:59 AM IST

ವಜ್ರಮುನಿ.. ಈ ಹೆಸ್ರು ಕೇಳಿದ್ರೆ ಒಂದ್ ಕಾಲದಲ್ಲಿ ಹೆಂಗಳೆಯರು ಮಕ್ಕಳು ಭಯ ಪಡುತ್ತಿದ್ರು. ಇವರ ವಾಯ್ಸ್ ಕೇಳಿದ್ರೇನೆ ಬೆವತು ಬಿಡ್ತಿದ್ರು. ಯಾಕಂದ್ರೆ ಅಂತಹ ಕೃರತ್ವದ ಪಾತ್ರಗಳನ್ನ ಮಾಡಿ ತೆರೆ ಮೇಲೆ ಮೆರೆದವರು ವಜ್ರಮುನಿ. ಕಂಚಿನ ಕಂಠ, ತೀಕ್ಷ್ಣ ನೋಟ, ತಮ್ಮ ನಟನೆಯಿಂದಲೇ ನಟಭಯಂಕರ ಎಂಬ ಬಿರುದ್ದು ಪಡೆದವರು ವಜ್ರಮುನಿ.


ಸ್ಯಾಂಡಲ್‌ವುಡ್‌ನಲ್ಲಿ ಹೀರೋಗಳನ್ನ ಯಾವಾಗ್ಲೂ ಮೆಚ್ಚಿ ಮೆರೆಸಿ ಆರಾಧಿಸಲಾಗುತ್ತೆ. ನಾಯಕಿಯರ ನೆನಪು ಮಾಡಿಕೊಳ್ತಾರೆ. ಆದ್ರೆ ನಾಯಕ ಪಾತ್ರಕ್ಕೆ ಸರಿಸಾಟಿಯಾಗಿ ನಿಲ್ಲೋ ಖಳನಾಯಕರನ್ನೂ ನಾವು ಸ್ಮರಿಸೋದೆ ಇಲ್ಲ. ಆದ್ರೆ ಈಗ ಅಣ್ಣಾವ್ರ ಕಾಲದ ಅದ್ಭುತ, ಅಮೋಘ, ನಟ ಭಯಂಕರ ವಜ್ರಮುನಿ(Vajramuni) ಅವರ ನೆನೆಪಲ್ಲಿ ಫಸ್ಟ್ ದಿ ಫಸ್ಟ್ ಟೈಂ ಕಂಚಿನ ಪ್ರತಿಮೆ ತಲೆ ಎತ್ತಿ ನಿಂತಿದೆ. ಬೆಂಗಳೂರಿನ(bengaluru) ನಾಗರಭಾವಿಯಲ್ಲಿ ಹ್ಯಾಟ್ರಿಕ್ ಹೀರೋ ಡಾಕ್ಟರ್ ಶಿವರಾಜ್ ಕುಮಾರ್( Shivaraj Kumar) ವಜ್ರಮುನಿ ಕಂಚಿನ ಪುತ್ಥಳಿಯನ್ನ(Bronze statue) ಅನಾವರಣ ಮಾಡಿದ್ದಾರೆ. ವಜ್ರಮುನಿ. ನಟ ಭೈರವ, ನಟ ಭಯಂಕರ ಅಂತ  ವಜ್ರಮುನಿಗೆ ಬಿಟ್ರೆ ಇನ್ಯಾವ ನಟನಿಗೂ ಕರೆಯೋಕೆ ಆಗುತ್ತೆ ಹೇಳಿ. ತೆರೆ ಮೇಲೆ ಅವರ ರೋಷಾವೇಶ, ಪ್ರಚಂಡ ಅಭಿನಯ, ರಭಸವಾದ ಸಂಭಾಷಣೆಗೆ ಮಾರು ಹೋಗದವರೇ ಇಲ್ಲ ಕೆಂಗಣ್ಣಿನ ಮುಖದ ಕ್ರೂರನೋಟಗಳಲ್ಲಿ ತಮ್ಮನ್ನು ತಾವೇ ಮೀರಿಸುವಂತಿದ್ದ ಅಪ್ರತಿಮ ಕಲಾವಿದ ವಜ್ರಮುನಿ. ಕಲಾವಿದರಿಗೆ ಸಾವಿಲ್ಲ. ಅವರು ತಮ್ಮ ಪಾತ್ರಗಳಿಂದ ಯಾವಾಗ್ಲು ನಮ್ಮಗಳ ಮಧ್ಯೆ ಇದ್ದೇ ಇರ್ತಾರೆ. ಹಾಗೆ ಇಂದಿಗೂ ವಜ್ರಮುನಿ ವಿಜೃಂಭಿಸುತ್ತಾರೆ ಅಂದ್ರೆ ಅದಕ್ಕೆ ಕಾರಣ ಅವರು ಮಾಡಿದ್ದ ಖಳನಟನ ಪಾತ್ರಗಳು. ಸಂಪತ್ತಿಗೆ ಸವಾಲ್ ಚಿತ್ರದ ಸಾಹುಕಾರನ ಪಾತ್ರವಿರಲಿ, ಬದುಕು ಬಂಗಾರವಾಯ್ತು ಚಿತ್ರದ ಒಕ್ಕಣ್ಣ ಗೌಡನಾಗಲಿ, ಮಯೂರದ ಚಾರಿತ್ರಿಕ ಪಾತ್ರವಿರಲಿ, ಕಳ್ಳ ಕುಳ್ಳ, ದಾರಿ ತಪ್ಪಿದ ಮಗ, ಶಂಕರ್ ಗುರು ಅಂತಹ ಡಾನ್ ಪಾತ್ರಗಳಾಗಲಿ ವಜ್ರಮುನಿಯವರಿಗೆ ಲೀಲಾಜಾಲವಾಗಿತ್ತು.

ಇದನ್ನೂ ವೀಕ್ಷಿಸಿ:  ಅಭಿಮಾನಿ ಮದುವೆಯಲ್ಲಿ ರಿಯಲ್ ಸ್ಟಾರ್..! ಅಭಿಮಾನಿಗಳನ್ನ ಎಷ್ಟು ಪ್ರೀತಿಸ್ತಾರೆ ನೋಡಿ ಉಪ್ಪಿ!

02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
Read more