ಕರುಣಾನಿಧಿ, MGR ನಿಧನರಾದಗಲೂ ಅಪ್ಪು ನಿಧನ ಸಂದರ್ಭ ಕಂಡ ಭಕ್ತಸಾಗರ ಕಂಡಿರಲಿಲ್ಲ ಎಂದ ನಕ್ಕೀರನ್

Nov 9, 2021, 11:39 AM IST

ಪತ್ರಕರ್ತ ನಕ್ಕೀರನ್ (Nakkheeran Gopal) ಅಪ್ಪು ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ತಮಿಳು ಮಕ್ಕಳಿಗೆ ಪುನೀತ್ ರಾಜ್‌ಕುಮಾರ್ ಆದರ್ಶಗಳನ್ನು ತಿಳಿಸಿದ್ದಾರೆ ನಕ್ಕೀರನ್. ನಕ್ಕೀರನ್ ಮನೆಗೆ ಬಂದಾಗ ಶಿವರಾಜ್‌ ಕುಮಾರ್ ಅವರಲ್ಲಿ ಹೇಳಿದ್ದೇನು ? ಬಡವರ ಕಷ್ಟಳಿಗೆ ಸ್ಪಂದಿಸುತ್ತಿದ್ದ ಅಪ್ಪು, ದುಡಿದ ಹಣದ ಬಹುತೇಕ ಪಾಲನ್ನು ಅಶಕ್ತರ ಕೈಗಿಟ್ಟು ನೆಮ್ಮದಿ ಕಾಣುತ್ತಿದ್ದ ಪವರ್‌ಸ್ಟಾರ್. ಪ್ರತಿದಿನ ಅಪ್ಪು ನೆನಪಾಗಿ ಅವರು ಇನ್ನಿಲ್ಲ ಎಂಬುದನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. 

ನಟನ ಮುಗ್ಧತೆ, ನಗುಮುಖ ಅದನ್ನು ಬೇರೆ ಯಾರೂ ತುಂಬಲಾರರದು. ಕೋಟಿ ಕೋಟಿ ಅಭಿಮಾನಿಗಳು ಬೇಸರದಲ್ಲಿ ಬಿಟ್ಟು ಹೋಗಿದ್ದಾರೆ ಅಪ್ಪು. ನಕ್ಕೀರನ್ ಅವರು ಅಣ್ಣಾವ್ರನ್ನು ಕರೆತಂದ ವ್ಯಕ್ತಿ. ಮುಂದೆ ನಿಂತು ಸಂಧಾನ ಮಾಡಿಸಿದ್ದ ವ್ಯಕ್ತಿ. ಹಾಗಾಗಿಯೇ ನಕ್ಕೀರನ್ ಗೋಪಾಲ್ ಎಂದರೆ ವಿಶೇಷ ವ್ಯಕ್ತಿ. ತಮಿಳುನಾಡಿನ ಪತ್ರಕರ್ತ ಅವರು ರಾಜ್ ಅವರನ್ನು ಬಿಡಿಸಿ ತರಲು ಸಾಂಧಾನಕ್ಕೆ ನಿಯೋಜಿಸಲ್ಪಟ್ಟಿದ್ದರು.

ಪುನೀತ್ ಪಡಿಯಚ್ಚಿನಂತೆ ಕಾಣಿಸುತ್ತಾರೆ ಉಡುಪಿಯ ಪ್ರವೀಣ್..!

ಪುನೀತ್ ಸಾವಿನಿಂದ ಶೋಕದಲ್ಲಿಯೇ ನಕ್ಕೀರನ್ ಗೋಪಾಲನ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಪು ಕುರಿತು, ರಾಜ್ ಕುರಿತು ಮಾತನಾಡಿದ್ದಾರೆ. ಪುನೀತ್ ಅವರ ಆದರ್ಶಗಳು, ರಾಜ್ ಅವರು ಮಗನ ಕುರಿತು ಹೇಳುತ್ತಿದ್ದ ಮಾತುಗಳನ್ನು ತಮಿಳು ಜನರ ಮುಂದೆ ಬಿಚ್ಚಿಟ್ಟಿದ್ದಾರೆ. ಅದೇನು ? ನಕ್ಕೀರನ್ ಬಿಚ್ಚಿಟ್ಟ ಸತ್ಯಗಳೇನು ?