ಸ್ಪಂದನಾ ಸಾವಿಗೆ ಕಣ್ಣೀರಿಟ್ಟ ಕರುನಾಡು: ಪರಿಚಯ..ಪ್ರೇಮ..ವಿವಾಹ..ಹೇಗಿತ್ತು 16 ವರ್ಷದ ಬದುಕು..?

ಸ್ಪಂದನಾ ಸಾವಿಗೆ ಕಣ್ಣೀರಿಟ್ಟ ಕರುನಾಡು: ಪರಿಚಯ..ಪ್ರೇಮ..ವಿವಾಹ..ಹೇಗಿತ್ತು 16 ವರ್ಷದ ಬದುಕು..?

Published : Aug 08, 2023, 02:47 PM IST

ಬ್ಯಾಕಾಂಕ್ ಪ್ರವಾಸಕ್ಕೆ ಹೋಗಿದ್ದವರು ಮರಳಿ ಬರಲೇ ಇಲ್ಲ!
ಬ್ಯಾಂಕಾಕ್‌ನಲ್ಲಿ ಏನಾಯ್ತು..? ಹೇಗಿತ್ತು ಆ ಸಂದರ್ಭ..? 
ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ..!

ಅದು ಚಿನ್ನದಂಥಾ ಜೋಡಿ.. ಅವರದು ಮುತ್ತಿನಂಥಾ ಕುಟುಂಬ.. ಕನ್ನಡ ಜನ ಅವರನ್ನ ತಮ್ಮ ಕುಟುಂಬದವರು ಅಂತಲೇ ಅವರನ್ನ ನೋಡ್ತಾ ಇತ್ತು. ಅದೇ ಕಾರಣಕ್ಕೇ, ಇವತ್ತು ಕರುನಾಡಡು ಸೂತಕದ ಮನೆಯಾಗಿರೋದು. ಪ್ರವಾಸಕ್ಕೆ ಅಂತ ಬ್ಯಾಕಾಂಕ್‌ಗೆ(Bangkok) ಹೋಗಿದ್ದವರು, ಮರಳಿ ಬರಲೇ ಇಲ್ಲ.. ಬಂದದ್ದು ಭರಸಿಡಿಲಿನಂಥಾ ಶಾಕಿಂಗ್ ನ್ಯೂಸ್ ಮಾತ್ರ. ಸೋಮವಾರ ಬೆಳಗ್ಗೆಯೇ ಕರ್ನಾಟಕಕ್ಕೆ ಕೆಟ್ಟಸುದ್ದಿಯೊಂದು ಕೇಳಿಸಿತ್ತು. ನಟ ವಿಜಯ ರಾಘವೇಂದ್ರ(Vijay raghavendra) ಅವರ ಪತ್ನಿ, ಸ್ಪಂದನಾ(spandana) ಅವರು ನಿಧನರಾಗಿದ್ದಾರೆ ಅನ್ನೋ ಆಘಾತಕಾರಿ ಸಂಗತಿ, ರಾಜ್ಯಕ್ಕೆ ಶೋಕವುಂಟು ಮಾಡಿತ್ತು. ಮುದ್ದಾದ ಜೋಡಿನಾ ನೋಡಿ ದೃಷ್ಟಿ ತೆಗೆದಿದ್ದ ಜನರೆಲ್ಲಾ, ಈ ಸುದ್ದಿ ಕೇಳ್ತಿದ್ದ ಹಾಗೇ ಕಣ್ಣಲ್ಲಿ ನೀರು ತುಂಬಿಕೊಂಡಿದ್ರು. ವಿಜಯ ರಾಘವೇಂದ್ರ ಅವರು, ತಮ್ಮ ಪತ್ನಿನಾ ಅದೆಷ್ಟು ಹಚ್ಚಿಕೊಂಡಿದ್ರು, ಪ್ರೀತಿಸ್ತಾ ಇದ್ರು ಅಂದ್ರೆ, ಒಂದೇ ಜೀವ ಎರಡು ದೇಹ ಅಂತಾರಲ್ಲಾ, ಆ ಮಾತಿಗೆ  ಸಾಕ್ಷಿಭೂತವಾಗಿದ್ರು. ಈಗ ಸ್ಪಂದನ ಅವರ ಅಗಲಿಕೆ, ರಾಜ್ಯಕ್ಕೇ ಆಘಾತ ನೀಡಿದೆ. ಇನ್ನು ವಿಜಯ್ ರಾಘವೇಂದ್ರ ಅವರ ಬಗ್ಗೆ ನಮಗೆ ಯೋಚಿಸೋದಕ್ಕಾದ್ರೂ ಸಾಧ್ಯವಾಗುತ್ತಾ. ಖಂಡಿತಾ ಇಲ್ಲ. ವಿಜಯ ರಾಘವೇಂದ್ರ ಅವರನ್ನ ಕರ್ನಾಟಕದ ಜನ ಕರೆಯೋದೇ ಚಿನ್ನಾರಿ ಮುತ್ತಾ ಅಂತ. ಕನ್ನಡಿಗರು ವಿಜಯ್ ರಾಘವೇಂದ್ರ ಅವರನ್ನ ಸಿನಿಮಾಗಳಲ್ಲಿ ಹೀರೋ ಆಗಿ ನೋಡೋ ಮುಂಚೆ, ಬಾಲನಟನಾಗಿ ಅಭಿನಯಿಸಿದ್ದನ್ನ ಮೆಚ್ಚಿಕೊಂಡಿದ್ರು. ಹಾಗಾಗಿನೇ, ಕರ್ನಾಟಕದ ಮನೆ ಮಗ ಅನ್ನೋ ಹಾಗೆ ವಿಜಯ ರಾಘವೇಂದ್ರ ಗುರ್ತಿಸಿಕೊಂಡಿದ್ರು. ಹಿರಿಯ ನಟರಾದ ಮೇಲೂ ಖ್ಯಾತಿ ಉಳಿಸಿಕೊಂಡ ಆರ್ಟಿಸ್ಟ್‌ಗಳ ಲಿಸ್ಟ್ ರೆಡಿ ಮಾಡಿದ್ರೆ, ಅಲ್ಲಿ ಸಿಗೋ ಕೆಲವೇ ಕೆಲವು ಹೆಸರುಗಳಲ್ಲಿ, ವಿಜಯ ರಾಘವೇಂದ್ರ ಅವರ ಹೆಸರೂ ಇರುತ್ತೆ.

ಇದನ್ನೂ ವೀಕ್ಷಿಸಿ:  ಉಸಿರು ಚೆಲ್ಲಿದ ಚಿನ್ನಾರಿ ಮುತ್ತನ "ಚಿನ್ನ": ನಟ ವಿಜಯ್ ರಾಘವೇಂದ್ರಗೆ ಮನ ಮೆಚ್ಚಿದ ಮಡದಿ ಸಿಕ್ಕಿದ್ದು ಹೇಗೆ..?

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more