ಸ್ಪಂದನಾ ಸಾವಿಗೆ ಕಣ್ಣೀರಿಟ್ಟ ಕರುನಾಡು: ಪರಿಚಯ..ಪ್ರೇಮ..ವಿವಾಹ..ಹೇಗಿತ್ತು 16 ವರ್ಷದ ಬದುಕು..?

ಸ್ಪಂದನಾ ಸಾವಿಗೆ ಕಣ್ಣೀರಿಟ್ಟ ಕರುನಾಡು: ಪರಿಚಯ..ಪ್ರೇಮ..ವಿವಾಹ..ಹೇಗಿತ್ತು 16 ವರ್ಷದ ಬದುಕು..?

Published : Aug 08, 2023, 02:47 PM IST

ಬ್ಯಾಕಾಂಕ್ ಪ್ರವಾಸಕ್ಕೆ ಹೋಗಿದ್ದವರು ಮರಳಿ ಬರಲೇ ಇಲ್ಲ!
ಬ್ಯಾಂಕಾಕ್‌ನಲ್ಲಿ ಏನಾಯ್ತು..? ಹೇಗಿತ್ತು ಆ ಸಂದರ್ಭ..? 
ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ..!

ಅದು ಚಿನ್ನದಂಥಾ ಜೋಡಿ.. ಅವರದು ಮುತ್ತಿನಂಥಾ ಕುಟುಂಬ.. ಕನ್ನಡ ಜನ ಅವರನ್ನ ತಮ್ಮ ಕುಟುಂಬದವರು ಅಂತಲೇ ಅವರನ್ನ ನೋಡ್ತಾ ಇತ್ತು. ಅದೇ ಕಾರಣಕ್ಕೇ, ಇವತ್ತು ಕರುನಾಡಡು ಸೂತಕದ ಮನೆಯಾಗಿರೋದು. ಪ್ರವಾಸಕ್ಕೆ ಅಂತ ಬ್ಯಾಕಾಂಕ್‌ಗೆ(Bangkok) ಹೋಗಿದ್ದವರು, ಮರಳಿ ಬರಲೇ ಇಲ್ಲ.. ಬಂದದ್ದು ಭರಸಿಡಿಲಿನಂಥಾ ಶಾಕಿಂಗ್ ನ್ಯೂಸ್ ಮಾತ್ರ. ಸೋಮವಾರ ಬೆಳಗ್ಗೆಯೇ ಕರ್ನಾಟಕಕ್ಕೆ ಕೆಟ್ಟಸುದ್ದಿಯೊಂದು ಕೇಳಿಸಿತ್ತು. ನಟ ವಿಜಯ ರಾಘವೇಂದ್ರ(Vijay raghavendra) ಅವರ ಪತ್ನಿ, ಸ್ಪಂದನಾ(spandana) ಅವರು ನಿಧನರಾಗಿದ್ದಾರೆ ಅನ್ನೋ ಆಘಾತಕಾರಿ ಸಂಗತಿ, ರಾಜ್ಯಕ್ಕೆ ಶೋಕವುಂಟು ಮಾಡಿತ್ತು. ಮುದ್ದಾದ ಜೋಡಿನಾ ನೋಡಿ ದೃಷ್ಟಿ ತೆಗೆದಿದ್ದ ಜನರೆಲ್ಲಾ, ಈ ಸುದ್ದಿ ಕೇಳ್ತಿದ್ದ ಹಾಗೇ ಕಣ್ಣಲ್ಲಿ ನೀರು ತುಂಬಿಕೊಂಡಿದ್ರು. ವಿಜಯ ರಾಘವೇಂದ್ರ ಅವರು, ತಮ್ಮ ಪತ್ನಿನಾ ಅದೆಷ್ಟು ಹಚ್ಚಿಕೊಂಡಿದ್ರು, ಪ್ರೀತಿಸ್ತಾ ಇದ್ರು ಅಂದ್ರೆ, ಒಂದೇ ಜೀವ ಎರಡು ದೇಹ ಅಂತಾರಲ್ಲಾ, ಆ ಮಾತಿಗೆ  ಸಾಕ್ಷಿಭೂತವಾಗಿದ್ರು. ಈಗ ಸ್ಪಂದನ ಅವರ ಅಗಲಿಕೆ, ರಾಜ್ಯಕ್ಕೇ ಆಘಾತ ನೀಡಿದೆ. ಇನ್ನು ವಿಜಯ್ ರಾಘವೇಂದ್ರ ಅವರ ಬಗ್ಗೆ ನಮಗೆ ಯೋಚಿಸೋದಕ್ಕಾದ್ರೂ ಸಾಧ್ಯವಾಗುತ್ತಾ. ಖಂಡಿತಾ ಇಲ್ಲ. ವಿಜಯ ರಾಘವೇಂದ್ರ ಅವರನ್ನ ಕರ್ನಾಟಕದ ಜನ ಕರೆಯೋದೇ ಚಿನ್ನಾರಿ ಮುತ್ತಾ ಅಂತ. ಕನ್ನಡಿಗರು ವಿಜಯ್ ರಾಘವೇಂದ್ರ ಅವರನ್ನ ಸಿನಿಮಾಗಳಲ್ಲಿ ಹೀರೋ ಆಗಿ ನೋಡೋ ಮುಂಚೆ, ಬಾಲನಟನಾಗಿ ಅಭಿನಯಿಸಿದ್ದನ್ನ ಮೆಚ್ಚಿಕೊಂಡಿದ್ರು. ಹಾಗಾಗಿನೇ, ಕರ್ನಾಟಕದ ಮನೆ ಮಗ ಅನ್ನೋ ಹಾಗೆ ವಿಜಯ ರಾಘವೇಂದ್ರ ಗುರ್ತಿಸಿಕೊಂಡಿದ್ರು. ಹಿರಿಯ ನಟರಾದ ಮೇಲೂ ಖ್ಯಾತಿ ಉಳಿಸಿಕೊಂಡ ಆರ್ಟಿಸ್ಟ್‌ಗಳ ಲಿಸ್ಟ್ ರೆಡಿ ಮಾಡಿದ್ರೆ, ಅಲ್ಲಿ ಸಿಗೋ ಕೆಲವೇ ಕೆಲವು ಹೆಸರುಗಳಲ್ಲಿ, ವಿಜಯ ರಾಘವೇಂದ್ರ ಅವರ ಹೆಸರೂ ಇರುತ್ತೆ.

ಇದನ್ನೂ ವೀಕ್ಷಿಸಿ:  ಉಸಿರು ಚೆಲ್ಲಿದ ಚಿನ್ನಾರಿ ಮುತ್ತನ "ಚಿನ್ನ": ನಟ ವಿಜಯ್ ರಾಘವೇಂದ್ರಗೆ ಮನ ಮೆಚ್ಚಿದ ಮಡದಿ ಸಿಕ್ಕಿದ್ದು ಹೇಗೆ..?

03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
Read more