ಸ್ಪಂದನಾ ಸಾವಿಗೆ ಕಣ್ಣೀರಿಟ್ಟ ಕರುನಾಡು: ಪರಿಚಯ..ಪ್ರೇಮ..ವಿವಾಹ..ಹೇಗಿತ್ತು 16 ವರ್ಷದ ಬದುಕು..?

ಸ್ಪಂದನಾ ಸಾವಿಗೆ ಕಣ್ಣೀರಿಟ್ಟ ಕರುನಾಡು: ಪರಿಚಯ..ಪ್ರೇಮ..ವಿವಾಹ..ಹೇಗಿತ್ತು 16 ವರ್ಷದ ಬದುಕು..?

Published : Aug 08, 2023, 02:47 PM IST

ಬ್ಯಾಕಾಂಕ್ ಪ್ರವಾಸಕ್ಕೆ ಹೋಗಿದ್ದವರು ಮರಳಿ ಬರಲೇ ಇಲ್ಲ!
ಬ್ಯಾಂಕಾಕ್‌ನಲ್ಲಿ ಏನಾಯ್ತು..? ಹೇಗಿತ್ತು ಆ ಸಂದರ್ಭ..? 
ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ..!

ಅದು ಚಿನ್ನದಂಥಾ ಜೋಡಿ.. ಅವರದು ಮುತ್ತಿನಂಥಾ ಕುಟುಂಬ.. ಕನ್ನಡ ಜನ ಅವರನ್ನ ತಮ್ಮ ಕುಟುಂಬದವರು ಅಂತಲೇ ಅವರನ್ನ ನೋಡ್ತಾ ಇತ್ತು. ಅದೇ ಕಾರಣಕ್ಕೇ, ಇವತ್ತು ಕರುನಾಡಡು ಸೂತಕದ ಮನೆಯಾಗಿರೋದು. ಪ್ರವಾಸಕ್ಕೆ ಅಂತ ಬ್ಯಾಕಾಂಕ್‌ಗೆ(Bangkok) ಹೋಗಿದ್ದವರು, ಮರಳಿ ಬರಲೇ ಇಲ್ಲ.. ಬಂದದ್ದು ಭರಸಿಡಿಲಿನಂಥಾ ಶಾಕಿಂಗ್ ನ್ಯೂಸ್ ಮಾತ್ರ. ಸೋಮವಾರ ಬೆಳಗ್ಗೆಯೇ ಕರ್ನಾಟಕಕ್ಕೆ ಕೆಟ್ಟಸುದ್ದಿಯೊಂದು ಕೇಳಿಸಿತ್ತು. ನಟ ವಿಜಯ ರಾಘವೇಂದ್ರ(Vijay raghavendra) ಅವರ ಪತ್ನಿ, ಸ್ಪಂದನಾ(spandana) ಅವರು ನಿಧನರಾಗಿದ್ದಾರೆ ಅನ್ನೋ ಆಘಾತಕಾರಿ ಸಂಗತಿ, ರಾಜ್ಯಕ್ಕೆ ಶೋಕವುಂಟು ಮಾಡಿತ್ತು. ಮುದ್ದಾದ ಜೋಡಿನಾ ನೋಡಿ ದೃಷ್ಟಿ ತೆಗೆದಿದ್ದ ಜನರೆಲ್ಲಾ, ಈ ಸುದ್ದಿ ಕೇಳ್ತಿದ್ದ ಹಾಗೇ ಕಣ್ಣಲ್ಲಿ ನೀರು ತುಂಬಿಕೊಂಡಿದ್ರು. ವಿಜಯ ರಾಘವೇಂದ್ರ ಅವರು, ತಮ್ಮ ಪತ್ನಿನಾ ಅದೆಷ್ಟು ಹಚ್ಚಿಕೊಂಡಿದ್ರು, ಪ್ರೀತಿಸ್ತಾ ಇದ್ರು ಅಂದ್ರೆ, ಒಂದೇ ಜೀವ ಎರಡು ದೇಹ ಅಂತಾರಲ್ಲಾ, ಆ ಮಾತಿಗೆ  ಸಾಕ್ಷಿಭೂತವಾಗಿದ್ರು. ಈಗ ಸ್ಪಂದನ ಅವರ ಅಗಲಿಕೆ, ರಾಜ್ಯಕ್ಕೇ ಆಘಾತ ನೀಡಿದೆ. ಇನ್ನು ವಿಜಯ್ ರಾಘವೇಂದ್ರ ಅವರ ಬಗ್ಗೆ ನಮಗೆ ಯೋಚಿಸೋದಕ್ಕಾದ್ರೂ ಸಾಧ್ಯವಾಗುತ್ತಾ. ಖಂಡಿತಾ ಇಲ್ಲ. ವಿಜಯ ರಾಘವೇಂದ್ರ ಅವರನ್ನ ಕರ್ನಾಟಕದ ಜನ ಕರೆಯೋದೇ ಚಿನ್ನಾರಿ ಮುತ್ತಾ ಅಂತ. ಕನ್ನಡಿಗರು ವಿಜಯ್ ರಾಘವೇಂದ್ರ ಅವರನ್ನ ಸಿನಿಮಾಗಳಲ್ಲಿ ಹೀರೋ ಆಗಿ ನೋಡೋ ಮುಂಚೆ, ಬಾಲನಟನಾಗಿ ಅಭಿನಯಿಸಿದ್ದನ್ನ ಮೆಚ್ಚಿಕೊಂಡಿದ್ರು. ಹಾಗಾಗಿನೇ, ಕರ್ನಾಟಕದ ಮನೆ ಮಗ ಅನ್ನೋ ಹಾಗೆ ವಿಜಯ ರಾಘವೇಂದ್ರ ಗುರ್ತಿಸಿಕೊಂಡಿದ್ರು. ಹಿರಿಯ ನಟರಾದ ಮೇಲೂ ಖ್ಯಾತಿ ಉಳಿಸಿಕೊಂಡ ಆರ್ಟಿಸ್ಟ್‌ಗಳ ಲಿಸ್ಟ್ ರೆಡಿ ಮಾಡಿದ್ರೆ, ಅಲ್ಲಿ ಸಿಗೋ ಕೆಲವೇ ಕೆಲವು ಹೆಸರುಗಳಲ್ಲಿ, ವಿಜಯ ರಾಘವೇಂದ್ರ ಅವರ ಹೆಸರೂ ಇರುತ್ತೆ.

ಇದನ್ನೂ ವೀಕ್ಷಿಸಿ:  ಉಸಿರು ಚೆಲ್ಲಿದ ಚಿನ್ನಾರಿ ಮುತ್ತನ "ಚಿನ್ನ": ನಟ ವಿಜಯ್ ರಾಘವೇಂದ್ರಗೆ ಮನ ಮೆಚ್ಚಿದ ಮಡದಿ ಸಿಕ್ಕಿದ್ದು ಹೇಗೆ..?

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
Read more