ಮಂಗಳೂರು ವಜ್ರದೇಹಿ ಮಠದ ಕೋಲದಲ್ಲಿ ರಿಷಬ್..! ಧೈರ್ಯ ಕಳೆದುಕೊಳ್ಳದಂತೆ ನಟನಿಗೆ ದೈವದ ಅಭಯ..!

ಮಂಗಳೂರು ವಜ್ರದೇಹಿ ಮಠದ ಕೋಲದಲ್ಲಿ ರಿಷಬ್..! ಧೈರ್ಯ ಕಳೆದುಕೊಳ್ಳದಂತೆ ನಟನಿಗೆ ದೈವದ ಅಭಯ..!

Published : Jan 07, 2024, 09:18 AM IST

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಈಗ ಕಾಂತಾರ ಚಾಪ್ಟರ್ ಒನ್ ಶೂಟಿಂಗ್ ಹೋಗೋ ಟೈಂ ಬಂದಿದೆ. ಇಷ್ಟು ದಿನ ಕಾಂತಾರ ಸ್ಟೋರಿ, ಲೊಕೇಷನ್ ಹಂಟಿಂಗ್, ಕಲಾವಿದರ ಆಯ್ಕೆ ಕಡೆ ಗಮನ ಹರಿಸಿದ್ದ ಶೆಟ್ರು ಕುಂದಾಪುರದ ಆಣೆಗುಡ್ಡೆ ದೇವಸ್ಥಾನಲ್ಲಿ ವಿಘ್ನೇಶ್ವರನಿಗೆ ಪೂಜೆ ಮಾಡಿ ಸಿನಿಮಾದ ಮುಹೂರ್ತ ಮಾಡಿದ್ರು.

ಯಾವುದೇ ಕೆಲ್ಸ ಆಗ್ಲಿ ದೇವರ ಆಶೀರ್ವಾದ ಬೇಕು. ರಿಷಬ್ ಶೆಟ್ಟಿ ಕೂಡ ಕಾಂತಾರ 1(Kantara 1) ಶೂಟಿಂಗ್ ಹೋಗೋ ಮೊದಲು ದೈವರ ಆಶೀರ್ವಾದ ಕೇಳಿದ್ದಾರೆ. ಜನವರಿಯಿಂದ ಕಾಂತಾರ ಶೂಟಿಂಗ್ ಆರಂಭವಾಗಲಿದೆ. ಈಗ ಶೆಟ್ರು ಟೀಂ ಮುಂದಿನ ವಾರದಿಂದ ಶೂಟಿಂಗ್ ಹೋಗ್ತಿದ್ದಾರೆ. ಹೀಗಾಗಿ  ಕಾಂತಾರ ಚಾಪ್ಟರ್ ಒನ್ ಶೂಟಿಂಗ್ ಯಾವ್ದೇ ವಿಘ್ನವಿಲ್ಲದೆ ನಿರ್ವಿಘ್ನವಾಗಿ ನಡೆಯಲಿ ಅಂತ ದೈವದ ಅಭಯ ಬೇಡಿದ್ದಾರೆ ಶೆಟ್ರು.ಈಗ ಕರಾವಳಿ ಭಾಗದಲ್ಲಿ ಭೂತ ಕೋಲದ ಸಮಯ. ಮನೆ ಮನೆಯಲ್ಲೂ ದೈವಾರಾಧನೆ ನಡೆಯುತ್ತೆ. ಇದೀಗ ರಿಷಬ್ ಶೆಟ್ಟಿ ಇದೇ ಸಮಯಲ್ಲಿ ದೈವದ ಕತೆಯ ಕಾಂತಾರ ಚಾಪ್ಟರ್ 1 ಶೂಟಿಂಗ್ ಶುರು ಮಾಡ್ತಿದ್ದಾರೆ. ಹೀಗಾಗಿ ಮಂಗಳೂರಿನ ವಜ್ರದೇಹ ಮಠದ ಮೈಸಂದಾಯ ಕೋಲದಲ್ಲಿ ರಿಷಬ್ (Rishab Shetty) ಭಾಗಿ ಆಗಿದ್ದಾರೆ. ಈ ಹಿಂದೆ ವಜ್ರದೇಹಿ ಮಠದ ಸ್ವಾಮೀಜಿಯನ್ನ(Swamiji of Vajradehi Math)  ಭೇಟಿಯಾಗಿದ್ದ ರಿಷಬ್ ಈ ಮಠದಲ್ಲಿ ನಡೆಯೋ ಭೂತಕೋಲದಲ್ಲಿ ಭಾಗಿ ಆಗೋ ಆಸೆ ವ್ಯಕ್ತಪಡಿಸಿದ್ರು. ರಿಷಬ್ ಶೆಟ್ಟಿ ಇಚ್ಛೆಯಂತೆ ಕೋಲಕ್ಕೆ ಆಹ್ವಾನಿಸಿದ್ರು. ಹೀಗಾಗಿ ರಿಷಬ್ ಈ ಭೂತ ಕೋಲದಲ್ಲಿ(Buta Kola) ಭಾಗಿ ಆಗಿದ್ದಾರೆ.ಕಾಂತಾರದಲ್ಲಿ ರಿಷಬ್ ಮೈ ಮೇಲೆ ಬರೋ ದೈವ ಕಾಡು ಬೆಟ್ಟದ ಊರ ಜನರಿಗೆ ಯಾವುದೇ ಸಮಸ್ಯೆ ಬಂದ್ರು ಹೆದರಬೇಡಿ ನಿಮ್ಮ ಜೊತೆ ನಾನಿದ್ದೇನೆ ಅಂತ ಅಭಯ ಕೊಡುತ್ತೆ. ಇದೇ ತರದ ದೃಶ್ಯ ರಿಷಬ್ ಈಗ ನಡೆದಿದೆ. ಅತ್ತಿತ್ತ ಕಣ್ಣಾಡಿಸದೆ ದೈವವನ್ನೇ ನೋಡುತ್ತಾ ನಿಂತ ರಿಷಬ್ ಶೆಟ್ಟಿಗೆ ಏನೇ ಸಮಸ್ಯೆ ಬಂದ್ರು ಕುಗ್ಗಬೇಡ ಮುನ್ನುಗ್ಗು ನಿನ್ನ ಬೆನ್ನ ಹಿಂದೆ ನಾನಿದ್ದೇನೆ ಎಂದು ಸನ್ನೆ ಮಾಡಿ ಆಶೀರ್ವದಿಸಿದೆ ದೈವ.

ಇದನ್ನೂ ವೀಕ್ಷಿಸಿ:  ಅಯೋಧ್ಯೆಯಲ್ಲಿ ಸುವರ್ಣ ಹೆಜ್ಜೆ : ನಿರಂತರ ಸಂಚಾರ, ಸಮಗ್ರ ವರದಿ & ಲೇಟೆಸ್ಟ್ ಅಪ್ಡೇಟ್ಸ್‌ -ಒಂದು ಹಿನ್ನೋಟ

03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
Read more