ಅಂದು ಶಂಕ್ರಣ್ಣ.. ಇಂದು ರಿಷಬ್ ಶೆಟ್ಟಿ; ಕಾಂತಾರ-1 ಪೋಸ್ಟ್ ಪ್ರೊಡಕ್ಷನ್​ಗೆ ಹಾಲಿವುಡ್ ತಂತ್ರಜ್ಞರು

ಅಂದು ಶಂಕ್ರಣ್ಣ.. ಇಂದು ರಿಷಬ್ ಶೆಟ್ಟಿ; ಕಾಂತಾರ-1 ಪೋಸ್ಟ್ ಪ್ರೊಡಕ್ಷನ್​ಗೆ ಹಾಲಿವುಡ್ ತಂತ್ರಜ್ಞರು

Published : Jan 08, 2025, 12:07 PM IST

ಕಾಂತಾರದ ಜಾಗತಿಕ ಯಶಸ್ಸಿನ ನಂತರ, ರಿಷಬ್ ಶೆಟ್ಟಿ ಪ್ರೀಕ್ವೆಲ್ ಅನ್ನು ನಿರ್ಮಿಸುತ್ತಿದ್ದಾರೆ ಮತ್ತು ಕುಂದಾಪುರದಲ್ಲಿ ಚಿತ್ರೀಕರಣ ಮಾಡಿದ್ದಾರೆ. ಚಿತ್ರದ ಪೋಸ್ಟ್-ಪ್ರೊಡಕ್ಷನ್ ಅನ್ನು ತಮ್ಮ ಹುಟ್ಟೂರಿನಲ್ಲಿಯೇ ಮಾಡಲು ನಿರ್ಧರಿಸಿದ್ದಾರೆ, ಅಕ್ಟೋಬರ್ 2 ರಂದು ಕಾಂತಾರ ಚಾಪ್ಟರ್ 1 ಬಿಡುಗಡೆಯಾಗಲಿದೆ.

ಕಾಂತಾರ ಗ್ಲೋಬಲ್ ಸಕ್ಸಸ್ ನಂತರ ರಿಷಬ್ ಶೆಟ್ಟಿ ಬಹುದೊಡ್ಡ ನಿರೀಕ್ಷೆಯ ಭಾರ ಹೊತ್ತುಕೊಂಡು ಪ್ರೀಕ್ವೆಲ್ ರೆಡಿಮಾಡ್ತಾ ಇದ್ದಾರೆ. ವಿಶೇಷ ಅಂದ್ರೆ ಬಹುತೇಕ ಕುಂದಾಪರ ಸುತ್ತಲೇ ಚಿತ್ರೀಕರಣ ಮಾಡಿರೋ ರಿಷಬ್, ಈಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಅನ್ನೂ ತಮ್ಮೂರಲ್ಲಿ ಕುಳಿತೇ ಮಾಡೋದಕ್ಕೆ ನಿರ್ಧರಿಸಿದ್ದಾರೆ. ಈಗಾಗ್ಲೇ ಅಕ್ಟೋಬರ್ 2ಕ್ಕೆ ಕಾಂತಾರ ಚಾಪ್ಟರ್ 1 ರಿಲೀಸ್ ಅಂತ ಫಿಕ್ಸ್ ಆಗಿದೆ. ಸೋ ಸಿನಿಮಾದ ಅಂತಿಮ ಹಂತದ ಕೆಲಸಗಳು ಭರದಿಂದ ನಡೀತಾ ಇವೆ. ಇದೀಗ ತಮ್ಮೂರಿನಲ್ಲೇ ಪೋಸ್ಟ್ ಪ್ರೊಡಕ್ಷನ್ ಸ್ಟುಡಿಯೋವನ್ನೂ ಮಾಡ್ಲಿಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈಗಾಗ್ಲೇ ಸಂಗೀತ ನಿರ್ದೆಶಕ ರವಿ ಬಸ್ರೂರು ತಮ್ಮೂರಿನಲ್ಲೇ ಮ್ಯೂಸಿಕ್ ಸ್ಟುಡಿಯೋ ಮಾಡಿಕೊಂಡು ಬಿಗ್ ಪ್ಯಾನ್ ಇಂಡಿಯಾ ಚಿತ್ರಗಳ ಕೆಲಸವನ್ನ ಹುಟ್ಟೂರಿನಲ್ಲಿ ಕುಳಿತು ಮಾಡ್ತಾ ಇದ್ದಾರೆ. ರಿಷಬ್ ಕೂಡ ಇದೇ ರೀತಿ ತಮ್ಮೂರಿನಲ್ಲಿ ಪೋಸ್ಟ್ ಪ್ರೊಡಕ್ಷನ್ ಸ್ಟುಡಿಯೋ ಆರಂಬಿಸ್ತಾ ಇದ್ದಾರೆ.ರಿಷಬ್ ನಡೆಯೋ ದಾರಿ ನೋಡ್ತಿದ್ರೆ ಶಂಕರ್​ನಾಗ್ ನೆನಪಿಗೆ ಬರ್ತಾರೆ. ಹಿಂದೆ ಮದ್ರಾಸ್​​ನಲ್ಲಿದ್ದ ಕನ್ನಡ ಚಿತ್ರರಂಗವನ್ನ ಬೆಂಗಳೂರಿಗೆ ಕರೆತರೋದಕ್ಕೆ ಶಂಕರ್​ನಾಗ್ ಅವಿರತ ಶ್ರಮಪಟ್ಟಿದ್ರು. ಬೆಂಗಳೂರಿನಲ್ಲಿ ಸಂಕೇತ್ ಸ್ಟುಡಿಯೋ ಕಟ್ಟಿದ್ರು. ಇದೀಗ ರಿಷಬ್ ಕೂಡ ಇಂಥದ್ದೇ ಪ್ರಯತ್ನ ಮಾಡ್ತಾ ಇದ್ದಾರೆ. ಲೋಕಲ್​​ನಲ್ಲಿದ್ದುಕೊಂಡೇ ಗ್ಲೋಬಲ್ ಸಾಹಸ ಮಾಡ್ತಾ ಇದ್ದಾರೆ.

ಶಿವಾಜಿ v/s ಪುಲಕೇಶಿ.. ರಿಷಬ್​ಗೆ ನಾಡದ್ರೋಹಿ ಅಂದಿದ್ಯಾರು? ಮರಾಠಿ ದೊರೆಯ ಪಾತ್ರ ಮಾಡ್ಬಾರ್ದಾ?

24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
Read more