ಕಿಚ್ಚನ ಎಚ್ಚರಿಕೆಗೆ ಬಗ್ಗಿದ ಫೋನ್ ಪೇ ಸಿಇಓ..ಕನ್ನಡಿಗರಿಗೆ ಕ್ಷಮೆ ಕೇಳಿದ ಸಮೀರ್ ನಿಗಮ್

ಕಿಚ್ಚನ ಎಚ್ಚರಿಕೆಗೆ ಬಗ್ಗಿದ ಫೋನ್ ಪೇ ಸಿಇಓ..ಕನ್ನಡಿಗರಿಗೆ ಕ್ಷಮೆ ಕೇಳಿದ ಸಮೀರ್ ನಿಗಮ್

Published : Jul 23, 2024, 09:05 AM ISTUpdated : Jul 23, 2024, 10:05 AM IST

ಕನ್ನಡಿಗರಿಗಾಗಿ ಸುದೀಪ್ ಪೋನ್ ಪೇ ಸಂಸ್ಥೆ ಜೊತೆ ವಾರ್‌ಗೆ ಇಳಿದಿದ್ದು, ಈ ವಾರ್ ಈಗ ಸುಖಾಂತ್ಯವಾಗಿದೆ. ಕಿಚ್ಚನ ಮಾತಿಗೆ ಮಣಿದಿರೋ ಪೋನ್ ಪೇ ಸಂಸ್ಥೆ ಕನ್ನಡಿಗರ ಕ್ಷಮೆ ಕೇಳಿದ್ದಾರೆ. 

ಭಾರತೀಯ ಚಿತ್ರರಂಗದ ಬಾದ್ ಷಾ ಕಿಚ್ಚ ಸುದೀಪ್ (Sudeep) ಕನ್ನಡಿಗರ (Kannadigas) ಧ್ವನಿ. ಕಿಚ್ಚ ಕನ್ನಡಕ್ಕಾಗಿ ಎಲ್ಲಾ ತ್ಯಾಗಕ್ಕೂ ಸಿದ್ಧ ಅಂತ ಪದೇ ಪದೇ ಸಾಭೀತು ಮಾಡುತ್ತಿದ್ದಾರೆ. ಈ ಹಿಂದೆ ಕನ್ನಡದ ವಿಷಯಕ್ಕಾಗಿ ಹಿಂದಿಯ ಅಜಯ್ ದೇವಗನ್‌ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ರು. ಕೊನೆಗೆ ಅಜಯ್ ದೇವಗನ್ ಕನ್ನಡಿಗರ ಕ್ಷಮೆ ಕೇಳಿದ್ರು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡಿಗರಿಗೆ ಖಾಸಗಿ ಕಂಪನಿಗಳಲ್ಲಿ ಕಡ್ಡಾಯ ಉದ್ಯೋಗ ಮೀಸಲಾತಿ ನೀಡುವ ಬಗ್ಗೆ ಸರ್ಕಾರ ಮಸೂದೆಯೊಂದನ್ನ ಜಾರಿ ತರೋ ಚರ್ಚೆ ನಡೆಯುತ್ತಿದೆ. ಆದ್ರೆ ಪೋನ್ ಪೇ ಸಿಇಓ ಸಮೀರ್ ನಿಗಮ್ (Sameer Nigam) ಮಾತ್ರ ಇದನ್ನ ಕಂಡಿಸಿ ಪೋಸ್ಟ್ ಮಾಡಿದ್ರು. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣ ಆಗಿತ್ತು. ಅಷ್ಟೆ ಅಲ್ಲ ಪೋನ್ ಪೇ ಸಿಇಯೋಗೆ ನಟ ಕಿಚ್ಚ ಸುದೀಪ್ ಕೂಡ ಖಡಕ್ ಎಚ್ಚರಿಕೆ ಕೊಟ್ಟಿದ್ರು. ಕಿಚ್ಚನ ಎಚ್ಚರಿಕೆಗೆ ಮಣಿದ ಫೋನ್ ಪೇ ಸಿಇಓ ಸಮೀರ್ ನಿಗಮ್ ಈಗ ಕನ್ನಡಿಗರ ಕ್ಷಮೆ ಕೇಳಿದ್ದಾರೆ. ನಟ ಸುದೀಪ್ ಪೋನ್ ಪೇ ರಾಯಭಾರಿ. 10 ವರ್ಷಗಳಿಗೆ ಈ ಅಗ್ರಿಮೆಂಟ್ ಆಗಿದೆ. ಆದ್ರೆ ಕನ್ನಡಿಗರನ್ನ ಕಡೆಗಣಿಸಿ ಮಾತನಾಡಿದ್ದಕ್ಕೆ ಪೋನ್ ಪೇ ಅಗ್ರಿಮೆಂಟ್ನಿಂದಲೇ ಕಿಚ್ಚ ಹೊರ ಬರೋದಕ್ಕೆ ನಿರ್ಧರಿಸಿದ್ರು. ಅಷ್ಟೆ ಅಲ್ಲ ನೀವು ಮಾತನಾಡಿದ್ದ ಸರಿ ಅಲ್ಲ. ಕನ್ನಡಿಗರನ್ನ ಕಡೆಗಣಿಸೋ ಹಾಗಿಲ್ಲ. ಕನ್ನಡಿಗರಿಗೂ ಉದ್ಯೋಗವಕಾಶ ಕೊಡಿ. ಇಲ್ಲವಾದ್ರೆ ಫೋನ್ ಪೇ ರಾಯಭಾರತ್ವದಿಂದ ಹೊರ ಬರೋದಾಗಿ ಕಿಚ್ಚ ಸುದೀಪ್ ಪೋನ್ ಪೇ ಸಿಇಓಗೆ ಎಚ್ಚಿಸಿದ್ರು. ಇದಕ್ಕೆ ಮಣಿದ ಫೋನ್ ಪೆ ಸಿಇಓ ಸಮೀರ್ ಬೇಷರತ್ ಕನ್ನಡಿಗರ ಕ್ಷಮೆ ಕೇಳಿದ್ದಾರೆ. ಈ ಮೂಲಕ ಸುದೀಪ್ ಮತ್ತೊಮ್ಮೆ ತಮ್ಮವರ ಪರ ನಿಂತು ಗೆದ್ದಿದ್ದಾರೆ. 

ಇದನ್ನೂ ವೀಕ್ಷಿಸಿ:  Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ?

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!