ಕಿಚ್ಚನ ಎಚ್ಚರಿಕೆಗೆ ಬಗ್ಗಿದ ಫೋನ್ ಪೇ ಸಿಇಓ..ಕನ್ನಡಿಗರಿಗೆ ಕ್ಷಮೆ ಕೇಳಿದ ಸಮೀರ್ ನಿಗಮ್

ಕಿಚ್ಚನ ಎಚ್ಚರಿಕೆಗೆ ಬಗ್ಗಿದ ಫೋನ್ ಪೇ ಸಿಇಓ..ಕನ್ನಡಿಗರಿಗೆ ಕ್ಷಮೆ ಕೇಳಿದ ಸಮೀರ್ ನಿಗಮ್

Published : Jul 23, 2024, 09:05 AM ISTUpdated : Jul 23, 2024, 10:05 AM IST

ಕನ್ನಡಿಗರಿಗಾಗಿ ಸುದೀಪ್ ಪೋನ್ ಪೇ ಸಂಸ್ಥೆ ಜೊತೆ ವಾರ್‌ಗೆ ಇಳಿದಿದ್ದು, ಈ ವಾರ್ ಈಗ ಸುಖಾಂತ್ಯವಾಗಿದೆ. ಕಿಚ್ಚನ ಮಾತಿಗೆ ಮಣಿದಿರೋ ಪೋನ್ ಪೇ ಸಂಸ್ಥೆ ಕನ್ನಡಿಗರ ಕ್ಷಮೆ ಕೇಳಿದ್ದಾರೆ. 

ಭಾರತೀಯ ಚಿತ್ರರಂಗದ ಬಾದ್ ಷಾ ಕಿಚ್ಚ ಸುದೀಪ್ (Sudeep) ಕನ್ನಡಿಗರ (Kannadigas) ಧ್ವನಿ. ಕಿಚ್ಚ ಕನ್ನಡಕ್ಕಾಗಿ ಎಲ್ಲಾ ತ್ಯಾಗಕ್ಕೂ ಸಿದ್ಧ ಅಂತ ಪದೇ ಪದೇ ಸಾಭೀತು ಮಾಡುತ್ತಿದ್ದಾರೆ. ಈ ಹಿಂದೆ ಕನ್ನಡದ ವಿಷಯಕ್ಕಾಗಿ ಹಿಂದಿಯ ಅಜಯ್ ದೇವಗನ್‌ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ರು. ಕೊನೆಗೆ ಅಜಯ್ ದೇವಗನ್ ಕನ್ನಡಿಗರ ಕ್ಷಮೆ ಕೇಳಿದ್ರು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡಿಗರಿಗೆ ಖಾಸಗಿ ಕಂಪನಿಗಳಲ್ಲಿ ಕಡ್ಡಾಯ ಉದ್ಯೋಗ ಮೀಸಲಾತಿ ನೀಡುವ ಬಗ್ಗೆ ಸರ್ಕಾರ ಮಸೂದೆಯೊಂದನ್ನ ಜಾರಿ ತರೋ ಚರ್ಚೆ ನಡೆಯುತ್ತಿದೆ. ಆದ್ರೆ ಪೋನ್ ಪೇ ಸಿಇಓ ಸಮೀರ್ ನಿಗಮ್ (Sameer Nigam) ಮಾತ್ರ ಇದನ್ನ ಕಂಡಿಸಿ ಪೋಸ್ಟ್ ಮಾಡಿದ್ರು. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣ ಆಗಿತ್ತು. ಅಷ್ಟೆ ಅಲ್ಲ ಪೋನ್ ಪೇ ಸಿಇಯೋಗೆ ನಟ ಕಿಚ್ಚ ಸುದೀಪ್ ಕೂಡ ಖಡಕ್ ಎಚ್ಚರಿಕೆ ಕೊಟ್ಟಿದ್ರು. ಕಿಚ್ಚನ ಎಚ್ಚರಿಕೆಗೆ ಮಣಿದ ಫೋನ್ ಪೇ ಸಿಇಓ ಸಮೀರ್ ನಿಗಮ್ ಈಗ ಕನ್ನಡಿಗರ ಕ್ಷಮೆ ಕೇಳಿದ್ದಾರೆ. ನಟ ಸುದೀಪ್ ಪೋನ್ ಪೇ ರಾಯಭಾರಿ. 10 ವರ್ಷಗಳಿಗೆ ಈ ಅಗ್ರಿಮೆಂಟ್ ಆಗಿದೆ. ಆದ್ರೆ ಕನ್ನಡಿಗರನ್ನ ಕಡೆಗಣಿಸಿ ಮಾತನಾಡಿದ್ದಕ್ಕೆ ಪೋನ್ ಪೇ ಅಗ್ರಿಮೆಂಟ್ನಿಂದಲೇ ಕಿಚ್ಚ ಹೊರ ಬರೋದಕ್ಕೆ ನಿರ್ಧರಿಸಿದ್ರು. ಅಷ್ಟೆ ಅಲ್ಲ ನೀವು ಮಾತನಾಡಿದ್ದ ಸರಿ ಅಲ್ಲ. ಕನ್ನಡಿಗರನ್ನ ಕಡೆಗಣಿಸೋ ಹಾಗಿಲ್ಲ. ಕನ್ನಡಿಗರಿಗೂ ಉದ್ಯೋಗವಕಾಶ ಕೊಡಿ. ಇಲ್ಲವಾದ್ರೆ ಫೋನ್ ಪೇ ರಾಯಭಾರತ್ವದಿಂದ ಹೊರ ಬರೋದಾಗಿ ಕಿಚ್ಚ ಸುದೀಪ್ ಪೋನ್ ಪೇ ಸಿಇಓಗೆ ಎಚ್ಚಿಸಿದ್ರು. ಇದಕ್ಕೆ ಮಣಿದ ಫೋನ್ ಪೆ ಸಿಇಓ ಸಮೀರ್ ಬೇಷರತ್ ಕನ್ನಡಿಗರ ಕ್ಷಮೆ ಕೇಳಿದ್ದಾರೆ. ಈ ಮೂಲಕ ಸುದೀಪ್ ಮತ್ತೊಮ್ಮೆ ತಮ್ಮವರ ಪರ ನಿಂತು ಗೆದ್ದಿದ್ದಾರೆ. 

ಇದನ್ನೂ ವೀಕ್ಷಿಸಿ:  Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ?

05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!