ಸ್ಯಾಂಡಲ್‌ವುಡ್‌ನಲ್ಲಿ ರಕ್ತ ಚರಿತ್ರೆಗೆ ರೆಡಿ ನೆಲ್ಸನ್! ಈ ಸಿನಿಮಾ ಕಥೆಯ ಹೀರೋ ಯಾರು ?

ಸ್ಯಾಂಡಲ್‌ವುಡ್‌ನಲ್ಲಿ ರಕ್ತ ಚರಿತ್ರೆಗೆ ರೆಡಿ ನೆಲ್ಸನ್! ಈ ಸಿನಿಮಾ ಕಥೆಯ ಹೀರೋ ಯಾರು ?

Published : Oct 28, 2023, 09:52 AM IST

ಒಂದ್ ಕಡೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಊರ ದೇವರ ಪೂಜೆ ಮಾಡೋ ದೃಶ್ಯ, ಮತ್ತೊಂದ್ ಸೀನ್‌ನಲ್ಲಿ ಗನ್‌ನಿಂದ ಹೊರ ಬರೋ ಬುಲೆಟ್ ಸದ್ದು, ಅಟ್ ಎ ಟೈಂ ಪೊಲೀಸ್ ಅಧಿಕಾರಿಯನ್ನ ಚುಚ್ಚಿ ಚ್ಚುಚ್ಚಿ ಕೊಲೆ ಗೈಯೋ ಸೀನ್. ಈ ದೃಶ್ಯದ ಹಿಂದೆ ಜಾನಪದ ಹಾಡಿನ ಬ್ಯಾಕ್ರೌಂಡ್ ಮ್ಯೂಸಿಕ್. ಅಬ್ಬಬ್ಬ ಇದನ್ನ ನೋಡ್ತಿದ್ರೆ ಇದ್ಯಾವುದಪ್ಪಾ ರಕ್ತ ಸಿಕ್ತ ಹೊಸ ಕತೆ ಅಂತ ಹುಬ್ಬೇರುತ್ತೆ. ಆ ಕತೆಯೇ ನೆಲ್ಸನ್.
 

ರಗಡ್ ಲುಕ್, ಮಾಸ್ ಮಸಾಲದ ಕಥೆ, ಭರ್ಜರಿ ಬಿಜಿಎಂ, ವಾವ್ಹ್ ಅನ್ನಿಸೋ ವಿಶ್ಯೂವಲ್ ಟ್ರೀಟ್. ಇದರ ಜೊತೆ ಒಂದು ಊರ ಆಚರಣೆ ಅದರ ಮಧ್ಯೆ ಕ್ರೈಂ ಸ್ಟೋರಿ ಎಲ್ಲವೂ ಈ ನೆಲ್ಸನ್ ಟೀಸರ್(Nelson movie teaser) ಚಿಕ್ಕ ಜಲಕ್‌ನಲ್ಲೇ ಸಿಕ್ಕಿದೆ. ಅಷ್ಟಕ್ಕೂ ಇಲ್ಲಿ ನೆಲ್ಸನ್ ಆಗಿ ರಕ್ತ ಚರಿತ್ರೆ ಬರೆಯೋ ಹೀರೋ ಯಾರ್ ಗೊತ್ತಾ.? ಅವ್ರೇ ಮರಿ ಟೈಗರ್ ವಿನೋದ್ ಪ್ರಭಾಕರ್(Vinod Prabhakar). ನೆಲ್ಸನ್(Nelson) ಟೈಟಲ್ ಕೆಳಗೆ ರಕ್ತದಲ್ಲಿ ನೆಂದ ದೇವರಕಾಡು ಅನ್ನೋ ಅಡಿ ಬರಹ ಇದೆ. ಇದು ನೈಜ ಘಟನೆಯ ಸಿನಿಮಾ. ಚಾಮರಾಜನಗರ ಜಿಲ್ಲೆಯಲ್ಲಿ 60ರಿಂದ 90ರ ದಶಕದಲ್ಲಿ ನಡೆಯುವ ಗ್ಯಾಂಗ್‌ಸ್ಟರ್‌ ಕಥೆ ಈ ಸಿನಿಮಾದಲ್ಲಿದೆ. ಚಾಮರಾಜನಗರದ(Chamarajnagar) ಭಾಷೆ, ಸಂಸ್ಕೃತಿ, ನೆಲ, ಜಲ, ಬುಡಕಟ್ಟು ಜನಾಂಗದ ಸಂಘರ್ಷ ಸೇರಿದಂತೆ ಒಂದಷ್ಟು ಅಂಶಗಳು ಇಲ್ಲಿವೆ. ಈ ಟೀಸರ್‌ನನ್ನ ರಿಯಲ್ ಸ್ಟಾರ್ ಉಪೇಂದ್ರ ರಿಲೀಸ್ ಮಾಡಿದ್ರು. ನೆಲ್ಸನ್ ಸಿನಿಮಾದ ಮೇಕಿಂಗ್ ಸೂಪರ್, ವಿನೋದ್ ಪ್ರಭಾಕರ್ ರೆಗ್ಯೂಲರ್ ಪ್ಯಾಟ್ರನ್ ಸಿನಿಮಾ ಬಿಟ್ಟು ಹೊಸ ಗೆಟಪ್ನಲ್ಲಿ ಹೊರ ಬಂದಿದ್ದಾರೆ. ನೆಲ್ಸನ್ ಸಿನಿಮಾವನ್ನ ಅರುಣ್ ಕುಮಾರ್ ಎಂ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ನಿರ್ಮಾಪಕ ಬಿ.ಎಂ.ಶ್ರೀರಾಮ್ ಬಂಡವಾಳ ಹೂಡಿದ್ದಾರೆ. ಪ್ರಜ್ವಲ್ ಗೌಡ ಛಾಯಾಗ್ರಹಣ ಹಾಗೂ ಬಿ.ಜೆ ಭರತ್ ಸಂಗೀತ ಸಿನಿಮಾಗಿದೆ. ನೆಲ್ಸನ್ ಸಿನಿಮಾವನ್ನು ದೀಪ ಫಿಲ್ಮ್ಸ್ ಬ್ಯಾನರ್ ಅಡಯಲ್ಲಿ ಬಿ.ಎಂ ಶ್ರೀರಾಮ್ ಕೋಲಾರ್ ನಿರ್ಮಾಣ ಮಾಡುತ್ತಿದ್ದಾರೆ. ವಿನೋದ್ ಪ್ರಭಾಕರ್ ಸಿನಿ ಕರಿಯರ್ನಲ್ಲಿ ನೆಲ್ಸನ್ ಹೊಸ ಅಧ್ಯಾಯ ಆದ್ರು ಆಶ್ಚರ್ಯವೇನಿಲ್ಲ.

ಇದನ್ನೂ ವೀಕ್ಷಿಸಿ:  'ಟಗರು ಪಲ್ಯ' ನೋಡಿ ಖುಷಿ ಪಟ್ಟ ಸ್ಯಾಂಡಲ್‌ವುಡ್‌ ಮಂದಿ: ಸಿನಿಮಾಗೆ ತಾರೆಯರ ರಿವ್ಯೂ ಹೇಗಿದೆ ಗೊತ್ತಾ ?

24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
Read more