ಸ್ಯಾಂಡಲ್‌ವುಡ್ ತೆರೆ ಮೇಲೆ 'ಕ್ಷೇತ್ರಪತಿ' ದರ್ಬಾರ್‌: ಇನ್ಮುಂದೆ ಕನ್ನಡದ ಬಾಕ್ಸಾಫೀಸ್‌ಗೆ ಇವನೇ ಅಧಿಪತಿ..!

ಸ್ಯಾಂಡಲ್‌ವುಡ್ ತೆರೆ ಮೇಲೆ 'ಕ್ಷೇತ್ರಪತಿ' ದರ್ಬಾರ್‌: ಇನ್ಮುಂದೆ ಕನ್ನಡದ ಬಾಕ್ಸಾಫೀಸ್‌ಗೆ ಇವನೇ ಅಧಿಪತಿ..!

Published : Aug 19, 2023, 09:19 AM IST

ಪ್ರೇಕ್ಷಕರ ಮನ ಗೆದ್ದ ಜವಾರಿ ಶೈಲಿಯ 'ಕ್ಷೇತ್ರಪತಿ' 
ರಾಜ್ಯಾದ್ಯಂತ 'ಕ್ಷೇತ್ರಪತಿ' ದರ್ಬಾರ್ ಆರಂಭ..!
ರೈತ ಹೋರಾಟದ ಕತೆಗೆ ಜೀವ ತುಂಬಿದ ನವೀನ್!

ನಮ್ಮ ಎಫರ್ಟ್ ಸರಿಯಾಗಿದ್ರೆ ಸಕ್ಸಸ್ ಕಂಡಿತಾ ನಮ್ಮದೇ. ಈಗ ಅಂತಹ ಸಕ್ಸಸ್ ಹಾದಿ ಹಿಡಿದು ಹೊರಟಿದ್ದಾನೆ ಈ ಕ್ರೇತ್ರಪತಿ(Kshetrapati). ಸ್ಯಾಂಡಲ್‌ವುಡ್‌ನಲ್ಲಿ(sandalwood) ಗುಲ್ಟು ನವೀನ್ ಅಂತಲೇ ಖ್ಯಾತಿಗಳಿಸಿದ್ದ ನವೀನ್ ಶಂಕರ್(Naveen shankar) ನಟನೆಯ ಕ್ಷೇತ್ರಪತಿ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿದೆ. ಈ ಕ್ರೇತ್ರಪತಿಗೆ ಪ್ರೇಕ್ಷಕ ಪ್ರಭುಗಳು ಮಾರು ಹೋಗಿದ್ದಾರೆ. ಕ್ರೇತ್ರಪತಿ ಪ್ರತಿಭಾನ್ವಿತ ನಟ ನವೀನ್ ಶಂಕರ್ ನಾಯಕನಾಗಿ ನಟಿಸಿರೋ ಸಿನಿಮಾ. ನವೀನ್ ಶಂಕರ್‌ಗೆ ಗುಲ್ಟು ಸಿನಿಮಾದ ಕ್ಯಾರೆಕ್ಟರ್ ದೊಡ್ಡ ಹೆಸರು ತಂದುಕೊಡ್ತು. ಗುರುದೇವ ಹೊಯ್ಸಳ ಸಿನಿಮಾದಲ್ಲಿ ಡಾಲಿ ಎದುರು ಬಲಿ ಅನ್ನೋ ರೋಲ್ ಮಾಡಿ ಮತ್ತೆ ವಿಜೃಂಬಿಸಿದ್ರು. ಆದ್ರೆ ಈಗ ಕ್ರೇತ್ರಪತಿ ಸಿನಿಮಾದಲ್ಲಿ ಪಕ್ಕಾ ಕ್ರಾಂತಿಕಾರಿಯಾಗಿ ಘರ್ಜಿಸುತ್ತಿದ್ದಾರೆ. ಉತ್ತರ ಕರ್ನಾಟಕ ರೈತರ ಬದುಕು, ಅನ್ನದಾತನ ಸಮಸ್ಯೆಗಳು, ಹೋರಾಟದ ಕತೆಯನ್ನ ಪವರ್‌ಫುಲ್ ಆಗಿ ತೆರೆ ಮೇಲೆ ತರಲಾಗಿದೆ. ನವೀನ್ ಶಂಕರ್, ಅರ್ಚನಾ ಜೋಯಿಸ್, ಅಚ್ಯುತ್ ಕುಮಾರ್ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹಳ ದಿನಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಉತ್ತರ ಕರ್ನಾಟಕ ಭಾಗದ ಕಥೆಯನ್ನು ಹೊತ್ತ ಸಿನಿಮಾ ಬಂದಿದೆ. ಶ್ರೀಕಾಂತ್ ಕಟಗಿ ನಿರ್ದೇಶಿಸಿದ ಈ ಸಿನಿಮಾದಲ್ಲಿ ಹೀರೋ ನವೀನ್ ಶಂಕರ್ ರೈತನ ಮಗನಾಗಿದ್ದು, ಇಂಜಿನಿಯರಿಂಗ್ ಓದುತ್ತಿರುತ್ತಾನೆ. ವಿದೇಶದಲ್ಲಿ ಕೆಲಸ ಮಾಡೋ ಕನಸು ಕಾಣುವ ನಾಯಕ ರೈತನಾಗಿ ಬದಲಾಗುತ್ತಾನೆ. ರೈತರ ಪರ ಹೋರಾಟಕ್ಕೆ ಇಳಿಯುತ್ತಾನೆ. ಅದು ಯಾಕೆ ಅನ್ನೋದೆ ಈ ಸಿನಿಮಾದಲ್ಲಿ ಇಂಟ್ರೆಸ್ಟಿಂಗ್ ಆಗಿ ಕಟ್ಟಿಕೊಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ:  ಕಡಲ ತಡಿಯಲ್ಲಿ ಪ್ರೀತಿಯ ಅಮಲಿನಲ್ಲಿ ರಕ್ಷಿತ್-ರುಕ್ಮಿಣಿ: ಹೇಗಿರುತ್ತೆ ಸಪ್ತ ಸಾಗರದಾಚೆ ಎಲ್ಲೋ ಪ್ರಪಂಚ..?

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
Read more