'ಕರಟಕ ಧಮನಕ'ಬಿಡುಗಡೆಗೆ ಕೌಂಟ್ ಡೌನ್!ಚಿಕ್ಕೋಡಿಯಲ್ಲಿ ಶಿವಣ್ಣ-ಪ್ರಭುದೇವ ಕ್ರೇಜ್..!

Mar 7, 2024, 9:57 AM IST

ಇತ್ತ ಕಡೆ ಕರಟಕ ಧಮನಕ ರಿಲೀಸ್‌ಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದ್ರೆ, ಅತ್ತ ಕಡೆ ಬೆಳಗಾವಿಯ(Belagavi) ಚಿಕ್ಕೋಡಿಯಲ್ಲಿ ಶಿವಣ್ಣ(Shivarajkumar) ಪ್ರಭುದೇವ ಕ್ರೇಜ್ ಹೈ ಆಗಿತ್ತು. ಕರಟಕ ಧಮಕನ(Karataka Damanaka) ಬಿಡುಗಡೆಗೆ ಇನ್ನೊಂದು ದಿನ ಭಾಕಿ. ಹೀಗಾಗಿ ಸಿನಿಮಾ ಪ್ರಚಾರಕ್ಕೆಂದು ನಿರ್ದೇಶಕ ಯೋಗರಾಜ್ ಭಟ್ ಮತ್ತು ಟೀಂ ಬೆಳಗಾವಿಯ ಚಿಕ್ಕೋಡಿಗೆ ಹೋಗಿದ್ರು. ಕಟಕಟ ಧಮನಕ ಸಿನಿಮಾ ಟೀಂ ಅಂದಮೇಲೆ ಅಲ್ಲಿ ಶಿವಣ್ಣ ಹಾಗೂ ಪ್ರಭುದೇವ ಬರುತ್ತಾರೆ ಅಂತ ಜನವೋ ಜನ ಸೇರಿದ್ರು. ಆದ್ರೆ ಕಾರಣಾಂತರದಿಂದ ಶಿವಣ್ಣ ಪ್ರಭುದೇವ ಗೈರಾಗಿದ್ರು. ಆದ್ರೆ ನಿರ್ದೇಶಕ ಯೋಗರಾಜ್ ಭಟ್ ಹಾಗು ನಟ ದೊಡ್ಡಣ್ಣ ಮತ್ತು ನಟಿ ನಿಶ್ವಿಕಾ ನಾಯ್ಡು ಪ್ರಚಾರ ಕಾರ್ಯದಲ್ಲಿ ಭಾಗಿ ಆಗಿದ್ರು. ಕರಟಕ ಧಮನಕ ಪಂಚತಂತ್ರ ಕಥೆಯ ಸಿನಿಮಾ. ಕರಕಟನಾಗಿ ಪ್ರಭುದೇವ ನಟಿಸಿದ್ರೆ ಧಮನಕನಾಗಿ ಶಿವಣ್ಣ ಬಣ್ಣ ಅಭಿನಯಿಸಿದ್ದಾರೆ. ನಟಿ ಪ್ರಿಯಾ ಆನಂದ್ ಶಿವಣ್ಣನಿಗೆ ಜೋಡಿಯಾದ್ರೆ, ನಿಶ್ವಿಕಾ ನಾಯ್ಡು ಪ್ರಭುದೇವಗೆ ಕಾಂಬಿನೇಷನ್. ಈ ಅಪರೂಪದ ಕಿಲಾಡಿ ಜೋಡಿಯ ಕರಟಕ ದಮನಕನಿಗೆ ರಾಕ್ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ. ಮಾರ್ಚ್ 8ಕ್ಕೆ ಕರಟಕ ಧಮನಕ ದರ್ಶನ ಆಗಲಿದೆ. 

ಇದನ್ನೂ ವೀಕ್ಷಿಸಿ:  ಉಪ್ಪಿ ಯುಐ ಸಿನಿಮಾ ಹಾಡಿನಲ್ಲಿ ಟ್ರೋಲ್ ಸಾಹಿತ್ಯ..! ಟ್ರೋಲರ್ಸ್‌ನನ್ನೇ ಟ್ರೋಲ್ ಮಾಡಿದ ರಿಯಲ್ ಸ್ಟಾರ್!