ಕೇಸ್ ಮರೆತ ದರ್ಶನ್ ಪತ್ನಿ ಜೊತೆ ಸಿಟಿ ರೌಂಡ್ಸ್; ಚಾಮುಂಡೇಶ್ವರಿ, ಉಕ್ಕಡ ಮಾರಮ್ಮ ಎದುರು ದರ್ಶನ್ ಶಪಥ ಮಾಡಿದ್ದೇನು?

ಕೇಸ್ ಮರೆತ ದರ್ಶನ್ ಪತ್ನಿ ಜೊತೆ ಸಿಟಿ ರೌಂಡ್ಸ್; ಚಾಮುಂಡೇಶ್ವರಿ, ಉಕ್ಕಡ ಮಾರಮ್ಮ ಎದುರು ದರ್ಶನ್ ಶಪಥ ಮಾಡಿದ್ದೇನು?

Published : Jan 18, 2025, 12:38 PM ISTUpdated : Jan 18, 2025, 01:04 PM IST

ನಟ ದರ್ಶನ್​ ಜೈಲಿನಿಂದ ಬಿಡುಗಡೆಯಾದ ನಂತರ ಮತ್ತೆ ತಮ್ಮ ಐರಾವತ ಕಾರಿನಲ್ಲಿ ಸುತ್ತಾಡಲು ಪ್ರಾರಂಭಿಸಿದ್ದಾರೆ. ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದ ದರ್ಶನ್, ಗನ್​ ಲೈಸೆನ್ಸ್​ಗಾಗಿ ಪ್ರಾರ್ಥಿಸಿದ್ದಾರೆ. ಮಂಡ್ಯದ ಆರತಿ ಉಕ್ಕಡ ಮಾರಮ್ಮ ದೇವಿಗೂ ನಮಿಸಿ, ಸಂಕಷ್ಟಗಳ ಪರಿಹಾರಕ್ಕಾಗಿ ಪ್ರಾರ್ಥಿಸಿದ್ದಾರೆ.

ನಟ ದರ್ಶನ್​ ಮತ್ತೆ ಹಳೇ ಚಾಳಿ ಶುರು ಮಾಡಿದ್ದಾರೆ. ಕೊಲೆ ಕೇಸ್​​ನಲ್ಲಿ ಅಂದರ್ ಆಗಿ ಹೊರ ಬಂದಿರೋ ದರ್ಶನ್ ಎಲ್ಲಾ ಕಷ್ಟ ನಷ್ಟಗಳನ್ನ ಹಿಂದೆ ತಳ್ಳಿ ತನ್ನ ಐರಾವತ ಏರಿ ರೌಂಡ್ ಹೊಡೆಯುತ್ತಿದ್ದಾರೆ. ಅಷ್ಟೆ ಅಲ್ಲ ಆತ್ಮರಕ್ಷಣೆಗೆ ಅಂತ ಇಟ್ಟಿದ್ದ ಗನ್​​ಗೆ ಲೈಸೆನ್ಸ್ ಬೇಕೇ ಬೇಖು ಅಂತ ಚಾಮುಂಡೇಶ್ವರಿ ಎದುರು ದಾಸ ಶಪತ ಮಾಡಿದ್ದಾರೆ.ಸೂಪರ್​ ಕಾರುಗಳನ್ನ ಎತ್ತಿಕೊಂಡು ಬೆಂಗಳೂರು ಟು ಮೈಸೂರು ಹೊರಟ್ರು ಅಂದ್ರೆ ಸಾಕು.. ದರ್ಶನ್ ಹಿಂದೆ ಹತ್ತಾರು ಕಾರುಗಳು ರೊಯ್ ಅಂತ ಹೋಗುತ್ತಿದ್ವು. ಅಕ್ಕ ಪಕ್ಕ ಬರೋ ಫ್ಯಾನ್ಸ್​ಗಳನ್ನ ಮಾತಾಡಿಸಿಕೊಂಡು ಒಂದುಷ್ಟು ಕಿಚಾಯಿಸಿ ಬೈದು ಹೋಗುತ್ತಿದ್ರು. ಈಗ ಮತ್ತದೇ ಹಳೇ ಚಾಳಿ ಶುರು ಮಾಡಿದ್ದಾರೆ ದರ್ಶನ್.ಸಂಕ್ರಾಂತಿ ಹಬ್ಬಕ್ಕೆ ಮೈಸೂರಿಗೆ ತೆರಳಿದ್ದ ದರ್ಶನ್, ಪತ್ನಿ ಸ್ನೇಹಿತರ ಜೊತೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ. ದರ್ಶನ್​ ಚಾಮುಂಡೇಶ್ವರಿಯ ದೊಡ್ಡ ಭಕ್ತ. ಪಾಪ ಕರ್ಮಗಳ ವಿಮೋಚನೆಗೆ ತಿಂಗಳಿಗೆ ಒಮ್ಮೆಯಾದ್ರು ಆ ತಾಯಿ ದರ್ಶನ ಪಡೆಯೋದು ದರ್ಶನ್ ವಾಡಿಕೆ. ಜೈಲಿನಿಂದ ಹೊರ ಬಂದ ಮೇಲೆ ಇದೇ ಮೊದಲ ಭಾರಿಗೆ ದರ್ಶನ್ ಚಾಮುಂಡೇಶ್ವರಿಗೆ ನಮಿಸಿ ಬಂದಿದ್ದಾರೆ. ಪಾಪ ಕರ್ಮಗಳೆಲ್ಲಾ ವಿಮೋಚನೆ ಆಗ್ಲಿ, ಗನ್​​​​ ಬಳಸಲು ಲೈಸನ್ಸ್​​​ ಸಿಗಲಿ ಅಂತ ಕೇಳಿಕೊಂಡಿದ್ದಾರೆ. ಅಷ್ಟೆ ಅಲ್ಲ ಮಂಡ್ಯ ಜಿಲ್ಲೆಯಲ್ಲಿರೋ ಆರತಿ ಉಕ್ಕಡ ಮಾರಮ್ಮ ದೇವಿಗೂ ನಮಿಸಿರೋ ದರ್ಶನ್ ಸಂಕಷ್ಟಗಳ ಪರಿಹಾರಕ್ಕೆ ತಡೆ ಒಡೆಸಿ ಬಂದಿದ್ದಾರೆ.. 

ಫೆ.14ಕ್ಕೆ ಪ್ರೇಮಿಗಳಿಗೆ ಜೋಗಿ ಪ್ರೇಮ್​ ಸರ್​ಪ್ರೈಸ್; ಮ್ಯಾಜಿಕ್ ಮಾಡಿರೋ ಕೆಡಿಯ ಶಿವ ಶಿವ ಸಾಂಗ್!

04:30Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?
04:09ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?
04:18ಸ್ಯಾಂಡಲ್​ವುಡ್​ನಲ್ಲಿ ಮತ್ತೆ ನೆಪೋಟಿಸಂ ಕಿಚ್ಚು: ವಿವಾದಕ್ಕೆ ಅಂತ್ಯ ಹಾಡಿದ ಶಿವಣ್ಣ
02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
Read more