ಕೇಸ್ ಮರೆತ ದರ್ಶನ್ ಪತ್ನಿ ಜೊತೆ ಸಿಟಿ ರೌಂಡ್ಸ್; ಚಾಮುಂಡೇಶ್ವರಿ, ಉಕ್ಕಡ ಮಾರಮ್ಮ ಎದುರು ದರ್ಶನ್ ಶಪಥ ಮಾಡಿದ್ದೇನು?

ಕೇಸ್ ಮರೆತ ದರ್ಶನ್ ಪತ್ನಿ ಜೊತೆ ಸಿಟಿ ರೌಂಡ್ಸ್; ಚಾಮುಂಡೇಶ್ವರಿ, ಉಕ್ಕಡ ಮಾರಮ್ಮ ಎದುರು ದರ್ಶನ್ ಶಪಥ ಮಾಡಿದ್ದೇನು?

Published : Jan 18, 2025, 12:38 PM ISTUpdated : Jan 18, 2025, 01:04 PM IST

ನಟ ದರ್ಶನ್​ ಜೈಲಿನಿಂದ ಬಿಡುಗಡೆಯಾದ ನಂತರ ಮತ್ತೆ ತಮ್ಮ ಐರಾವತ ಕಾರಿನಲ್ಲಿ ಸುತ್ತಾಡಲು ಪ್ರಾರಂಭಿಸಿದ್ದಾರೆ. ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದ ದರ್ಶನ್, ಗನ್​ ಲೈಸೆನ್ಸ್​ಗಾಗಿ ಪ್ರಾರ್ಥಿಸಿದ್ದಾರೆ. ಮಂಡ್ಯದ ಆರತಿ ಉಕ್ಕಡ ಮಾರಮ್ಮ ದೇವಿಗೂ ನಮಿಸಿ, ಸಂಕಷ್ಟಗಳ ಪರಿಹಾರಕ್ಕಾಗಿ ಪ್ರಾರ್ಥಿಸಿದ್ದಾರೆ.

ನಟ ದರ್ಶನ್​ ಮತ್ತೆ ಹಳೇ ಚಾಳಿ ಶುರು ಮಾಡಿದ್ದಾರೆ. ಕೊಲೆ ಕೇಸ್​​ನಲ್ಲಿ ಅಂದರ್ ಆಗಿ ಹೊರ ಬಂದಿರೋ ದರ್ಶನ್ ಎಲ್ಲಾ ಕಷ್ಟ ನಷ್ಟಗಳನ್ನ ಹಿಂದೆ ತಳ್ಳಿ ತನ್ನ ಐರಾವತ ಏರಿ ರೌಂಡ್ ಹೊಡೆಯುತ್ತಿದ್ದಾರೆ. ಅಷ್ಟೆ ಅಲ್ಲ ಆತ್ಮರಕ್ಷಣೆಗೆ ಅಂತ ಇಟ್ಟಿದ್ದ ಗನ್​​ಗೆ ಲೈಸೆನ್ಸ್ ಬೇಕೇ ಬೇಖು ಅಂತ ಚಾಮುಂಡೇಶ್ವರಿ ಎದುರು ದಾಸ ಶಪತ ಮಾಡಿದ್ದಾರೆ.ಸೂಪರ್​ ಕಾರುಗಳನ್ನ ಎತ್ತಿಕೊಂಡು ಬೆಂಗಳೂರು ಟು ಮೈಸೂರು ಹೊರಟ್ರು ಅಂದ್ರೆ ಸಾಕು.. ದರ್ಶನ್ ಹಿಂದೆ ಹತ್ತಾರು ಕಾರುಗಳು ರೊಯ್ ಅಂತ ಹೋಗುತ್ತಿದ್ವು. ಅಕ್ಕ ಪಕ್ಕ ಬರೋ ಫ್ಯಾನ್ಸ್​ಗಳನ್ನ ಮಾತಾಡಿಸಿಕೊಂಡು ಒಂದುಷ್ಟು ಕಿಚಾಯಿಸಿ ಬೈದು ಹೋಗುತ್ತಿದ್ರು. ಈಗ ಮತ್ತದೇ ಹಳೇ ಚಾಳಿ ಶುರು ಮಾಡಿದ್ದಾರೆ ದರ್ಶನ್.ಸಂಕ್ರಾಂತಿ ಹಬ್ಬಕ್ಕೆ ಮೈಸೂರಿಗೆ ತೆರಳಿದ್ದ ದರ್ಶನ್, ಪತ್ನಿ ಸ್ನೇಹಿತರ ಜೊತೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ. ದರ್ಶನ್​ ಚಾಮುಂಡೇಶ್ವರಿಯ ದೊಡ್ಡ ಭಕ್ತ. ಪಾಪ ಕರ್ಮಗಳ ವಿಮೋಚನೆಗೆ ತಿಂಗಳಿಗೆ ಒಮ್ಮೆಯಾದ್ರು ಆ ತಾಯಿ ದರ್ಶನ ಪಡೆಯೋದು ದರ್ಶನ್ ವಾಡಿಕೆ. ಜೈಲಿನಿಂದ ಹೊರ ಬಂದ ಮೇಲೆ ಇದೇ ಮೊದಲ ಭಾರಿಗೆ ದರ್ಶನ್ ಚಾಮುಂಡೇಶ್ವರಿಗೆ ನಮಿಸಿ ಬಂದಿದ್ದಾರೆ. ಪಾಪ ಕರ್ಮಗಳೆಲ್ಲಾ ವಿಮೋಚನೆ ಆಗ್ಲಿ, ಗನ್​​​​ ಬಳಸಲು ಲೈಸನ್ಸ್​​​ ಸಿಗಲಿ ಅಂತ ಕೇಳಿಕೊಂಡಿದ್ದಾರೆ. ಅಷ್ಟೆ ಅಲ್ಲ ಮಂಡ್ಯ ಜಿಲ್ಲೆಯಲ್ಲಿರೋ ಆರತಿ ಉಕ್ಕಡ ಮಾರಮ್ಮ ದೇವಿಗೂ ನಮಿಸಿರೋ ದರ್ಶನ್ ಸಂಕಷ್ಟಗಳ ಪರಿಹಾರಕ್ಕೆ ತಡೆ ಒಡೆಸಿ ಬಂದಿದ್ದಾರೆ.. 

ಫೆ.14ಕ್ಕೆ ಪ್ರೇಮಿಗಳಿಗೆ ಜೋಗಿ ಪ್ರೇಮ್​ ಸರ್​ಪ್ರೈಸ್; ಮ್ಯಾಜಿಕ್ ಮಾಡಿರೋ ಕೆಡಿಯ ಶಿವ ಶಿವ ಸಾಂಗ್!

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more