ಕೇಸ್ ಮರೆತ ದರ್ಶನ್ ಪತ್ನಿ ಜೊತೆ ಸಿಟಿ ರೌಂಡ್ಸ್; ಚಾಮುಂಡೇಶ್ವರಿ, ಉಕ್ಕಡ ಮಾರಮ್ಮ ಎದುರು ದರ್ಶನ್ ಶಪಥ ಮಾಡಿದ್ದೇನು?

ಕೇಸ್ ಮರೆತ ದರ್ಶನ್ ಪತ್ನಿ ಜೊತೆ ಸಿಟಿ ರೌಂಡ್ಸ್; ಚಾಮುಂಡೇಶ್ವರಿ, ಉಕ್ಕಡ ಮಾರಮ್ಮ ಎದುರು ದರ್ಶನ್ ಶಪಥ ಮಾಡಿದ್ದೇನು?

Published : Jan 18, 2025, 12:38 PM ISTUpdated : Jan 18, 2025, 01:04 PM IST

ನಟ ದರ್ಶನ್​ ಜೈಲಿನಿಂದ ಬಿಡುಗಡೆಯಾದ ನಂತರ ಮತ್ತೆ ತಮ್ಮ ಐರಾವತ ಕಾರಿನಲ್ಲಿ ಸುತ್ತಾಡಲು ಪ್ರಾರಂಭಿಸಿದ್ದಾರೆ. ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದ ದರ್ಶನ್, ಗನ್​ ಲೈಸೆನ್ಸ್​ಗಾಗಿ ಪ್ರಾರ್ಥಿಸಿದ್ದಾರೆ. ಮಂಡ್ಯದ ಆರತಿ ಉಕ್ಕಡ ಮಾರಮ್ಮ ದೇವಿಗೂ ನಮಿಸಿ, ಸಂಕಷ್ಟಗಳ ಪರಿಹಾರಕ್ಕಾಗಿ ಪ್ರಾರ್ಥಿಸಿದ್ದಾರೆ.

ನಟ ದರ್ಶನ್​ ಮತ್ತೆ ಹಳೇ ಚಾಳಿ ಶುರು ಮಾಡಿದ್ದಾರೆ. ಕೊಲೆ ಕೇಸ್​​ನಲ್ಲಿ ಅಂದರ್ ಆಗಿ ಹೊರ ಬಂದಿರೋ ದರ್ಶನ್ ಎಲ್ಲಾ ಕಷ್ಟ ನಷ್ಟಗಳನ್ನ ಹಿಂದೆ ತಳ್ಳಿ ತನ್ನ ಐರಾವತ ಏರಿ ರೌಂಡ್ ಹೊಡೆಯುತ್ತಿದ್ದಾರೆ. ಅಷ್ಟೆ ಅಲ್ಲ ಆತ್ಮರಕ್ಷಣೆಗೆ ಅಂತ ಇಟ್ಟಿದ್ದ ಗನ್​​ಗೆ ಲೈಸೆನ್ಸ್ ಬೇಕೇ ಬೇಖು ಅಂತ ಚಾಮುಂಡೇಶ್ವರಿ ಎದುರು ದಾಸ ಶಪತ ಮಾಡಿದ್ದಾರೆ.ಸೂಪರ್​ ಕಾರುಗಳನ್ನ ಎತ್ತಿಕೊಂಡು ಬೆಂಗಳೂರು ಟು ಮೈಸೂರು ಹೊರಟ್ರು ಅಂದ್ರೆ ಸಾಕು.. ದರ್ಶನ್ ಹಿಂದೆ ಹತ್ತಾರು ಕಾರುಗಳು ರೊಯ್ ಅಂತ ಹೋಗುತ್ತಿದ್ವು. ಅಕ್ಕ ಪಕ್ಕ ಬರೋ ಫ್ಯಾನ್ಸ್​ಗಳನ್ನ ಮಾತಾಡಿಸಿಕೊಂಡು ಒಂದುಷ್ಟು ಕಿಚಾಯಿಸಿ ಬೈದು ಹೋಗುತ್ತಿದ್ರು. ಈಗ ಮತ್ತದೇ ಹಳೇ ಚಾಳಿ ಶುರು ಮಾಡಿದ್ದಾರೆ ದರ್ಶನ್.ಸಂಕ್ರಾಂತಿ ಹಬ್ಬಕ್ಕೆ ಮೈಸೂರಿಗೆ ತೆರಳಿದ್ದ ದರ್ಶನ್, ಪತ್ನಿ ಸ್ನೇಹಿತರ ಜೊತೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ. ದರ್ಶನ್​ ಚಾಮುಂಡೇಶ್ವರಿಯ ದೊಡ್ಡ ಭಕ್ತ. ಪಾಪ ಕರ್ಮಗಳ ವಿಮೋಚನೆಗೆ ತಿಂಗಳಿಗೆ ಒಮ್ಮೆಯಾದ್ರು ಆ ತಾಯಿ ದರ್ಶನ ಪಡೆಯೋದು ದರ್ಶನ್ ವಾಡಿಕೆ. ಜೈಲಿನಿಂದ ಹೊರ ಬಂದ ಮೇಲೆ ಇದೇ ಮೊದಲ ಭಾರಿಗೆ ದರ್ಶನ್ ಚಾಮುಂಡೇಶ್ವರಿಗೆ ನಮಿಸಿ ಬಂದಿದ್ದಾರೆ. ಪಾಪ ಕರ್ಮಗಳೆಲ್ಲಾ ವಿಮೋಚನೆ ಆಗ್ಲಿ, ಗನ್​​​​ ಬಳಸಲು ಲೈಸನ್ಸ್​​​ ಸಿಗಲಿ ಅಂತ ಕೇಳಿಕೊಂಡಿದ್ದಾರೆ. ಅಷ್ಟೆ ಅಲ್ಲ ಮಂಡ್ಯ ಜಿಲ್ಲೆಯಲ್ಲಿರೋ ಆರತಿ ಉಕ್ಕಡ ಮಾರಮ್ಮ ದೇವಿಗೂ ನಮಿಸಿರೋ ದರ್ಶನ್ ಸಂಕಷ್ಟಗಳ ಪರಿಹಾರಕ್ಕೆ ತಡೆ ಒಡೆಸಿ ಬಂದಿದ್ದಾರೆ.. 

ಫೆ.14ಕ್ಕೆ ಪ್ರೇಮಿಗಳಿಗೆ ಜೋಗಿ ಪ್ರೇಮ್​ ಸರ್​ಪ್ರೈಸ್; ಮ್ಯಾಜಿಕ್ ಮಾಡಿರೋ ಕೆಡಿಯ ಶಿವ ಶಿವ ಸಾಂಗ್!

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
Read more