ಕೇಸ್ ಮರೆತ ದರ್ಶನ್ ಪತ್ನಿ ಜೊತೆ ಸಿಟಿ ರೌಂಡ್ಸ್; ಚಾಮುಂಡೇಶ್ವರಿ, ಉಕ್ಕಡ ಮಾರಮ್ಮ ಎದುರು ದರ್ಶನ್ ಶಪಥ ಮಾಡಿದ್ದೇನು?

ಕೇಸ್ ಮರೆತ ದರ್ಶನ್ ಪತ್ನಿ ಜೊತೆ ಸಿಟಿ ರೌಂಡ್ಸ್; ಚಾಮುಂಡೇಶ್ವರಿ, ಉಕ್ಕಡ ಮಾರಮ್ಮ ಎದುರು ದರ್ಶನ್ ಶಪಥ ಮಾಡಿದ್ದೇನು?

Published : Jan 18, 2025, 12:38 PM ISTUpdated : Jan 18, 2025, 01:04 PM IST

ನಟ ದರ್ಶನ್​ ಜೈಲಿನಿಂದ ಬಿಡುಗಡೆಯಾದ ನಂತರ ಮತ್ತೆ ತಮ್ಮ ಐರಾವತ ಕಾರಿನಲ್ಲಿ ಸುತ್ತಾಡಲು ಪ್ರಾರಂಭಿಸಿದ್ದಾರೆ. ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದ ದರ್ಶನ್, ಗನ್​ ಲೈಸೆನ್ಸ್​ಗಾಗಿ ಪ್ರಾರ್ಥಿಸಿದ್ದಾರೆ. ಮಂಡ್ಯದ ಆರತಿ ಉಕ್ಕಡ ಮಾರಮ್ಮ ದೇವಿಗೂ ನಮಿಸಿ, ಸಂಕಷ್ಟಗಳ ಪರಿಹಾರಕ್ಕಾಗಿ ಪ್ರಾರ್ಥಿಸಿದ್ದಾರೆ.

ನಟ ದರ್ಶನ್​ ಮತ್ತೆ ಹಳೇ ಚಾಳಿ ಶುರು ಮಾಡಿದ್ದಾರೆ. ಕೊಲೆ ಕೇಸ್​​ನಲ್ಲಿ ಅಂದರ್ ಆಗಿ ಹೊರ ಬಂದಿರೋ ದರ್ಶನ್ ಎಲ್ಲಾ ಕಷ್ಟ ನಷ್ಟಗಳನ್ನ ಹಿಂದೆ ತಳ್ಳಿ ತನ್ನ ಐರಾವತ ಏರಿ ರೌಂಡ್ ಹೊಡೆಯುತ್ತಿದ್ದಾರೆ. ಅಷ್ಟೆ ಅಲ್ಲ ಆತ್ಮರಕ್ಷಣೆಗೆ ಅಂತ ಇಟ್ಟಿದ್ದ ಗನ್​​ಗೆ ಲೈಸೆನ್ಸ್ ಬೇಕೇ ಬೇಖು ಅಂತ ಚಾಮುಂಡೇಶ್ವರಿ ಎದುರು ದಾಸ ಶಪತ ಮಾಡಿದ್ದಾರೆ.ಸೂಪರ್​ ಕಾರುಗಳನ್ನ ಎತ್ತಿಕೊಂಡು ಬೆಂಗಳೂರು ಟು ಮೈಸೂರು ಹೊರಟ್ರು ಅಂದ್ರೆ ಸಾಕು.. ದರ್ಶನ್ ಹಿಂದೆ ಹತ್ತಾರು ಕಾರುಗಳು ರೊಯ್ ಅಂತ ಹೋಗುತ್ತಿದ್ವು. ಅಕ್ಕ ಪಕ್ಕ ಬರೋ ಫ್ಯಾನ್ಸ್​ಗಳನ್ನ ಮಾತಾಡಿಸಿಕೊಂಡು ಒಂದುಷ್ಟು ಕಿಚಾಯಿಸಿ ಬೈದು ಹೋಗುತ್ತಿದ್ರು. ಈಗ ಮತ್ತದೇ ಹಳೇ ಚಾಳಿ ಶುರು ಮಾಡಿದ್ದಾರೆ ದರ್ಶನ್.ಸಂಕ್ರಾಂತಿ ಹಬ್ಬಕ್ಕೆ ಮೈಸೂರಿಗೆ ತೆರಳಿದ್ದ ದರ್ಶನ್, ಪತ್ನಿ ಸ್ನೇಹಿತರ ಜೊತೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ. ದರ್ಶನ್​ ಚಾಮುಂಡೇಶ್ವರಿಯ ದೊಡ್ಡ ಭಕ್ತ. ಪಾಪ ಕರ್ಮಗಳ ವಿಮೋಚನೆಗೆ ತಿಂಗಳಿಗೆ ಒಮ್ಮೆಯಾದ್ರು ಆ ತಾಯಿ ದರ್ಶನ ಪಡೆಯೋದು ದರ್ಶನ್ ವಾಡಿಕೆ. ಜೈಲಿನಿಂದ ಹೊರ ಬಂದ ಮೇಲೆ ಇದೇ ಮೊದಲ ಭಾರಿಗೆ ದರ್ಶನ್ ಚಾಮುಂಡೇಶ್ವರಿಗೆ ನಮಿಸಿ ಬಂದಿದ್ದಾರೆ. ಪಾಪ ಕರ್ಮಗಳೆಲ್ಲಾ ವಿಮೋಚನೆ ಆಗ್ಲಿ, ಗನ್​​​​ ಬಳಸಲು ಲೈಸನ್ಸ್​​​ ಸಿಗಲಿ ಅಂತ ಕೇಳಿಕೊಂಡಿದ್ದಾರೆ. ಅಷ್ಟೆ ಅಲ್ಲ ಮಂಡ್ಯ ಜಿಲ್ಲೆಯಲ್ಲಿರೋ ಆರತಿ ಉಕ್ಕಡ ಮಾರಮ್ಮ ದೇವಿಗೂ ನಮಿಸಿರೋ ದರ್ಶನ್ ಸಂಕಷ್ಟಗಳ ಪರಿಹಾರಕ್ಕೆ ತಡೆ ಒಡೆಸಿ ಬಂದಿದ್ದಾರೆ.. 

ಫೆ.14ಕ್ಕೆ ಪ್ರೇಮಿಗಳಿಗೆ ಜೋಗಿ ಪ್ರೇಮ್​ ಸರ್​ಪ್ರೈಸ್; ಮ್ಯಾಜಿಕ್ ಮಾಡಿರೋ ಕೆಡಿಯ ಶಿವ ಶಿವ ಸಾಂಗ್!

05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
04:33Cine Express: '8' ಗ್ಲಿಂಪ್ಸ್‌ನಿಂದ 'ಊರಬ್ಬ' ಟ್ರೇಲರ್‌ವರೆಗೆ: ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಹವಾ
Read more