Kaatera : ಪಾಂಡವಪುರದಲ್ಲಿ ಕಾಟೇರ ಸಿನಿಮಾ ಸಕ್ಸಸ್ ಸೆಲೆಬ್ರೇಷನ್..! ಇಲ್ಲಿ ನಟ ದರ್ಶನ್ ತಾಳ್ಮೆಯ ಪಾಠ..!

Kaatera : ಪಾಂಡವಪುರದಲ್ಲಿ ಕಾಟೇರ ಸಿನಿಮಾ ಸಕ್ಸಸ್ ಸೆಲೆಬ್ರೇಷನ್..! ಇಲ್ಲಿ ನಟ ದರ್ಶನ್ ತಾಳ್ಮೆಯ ಪಾಠ..!

Published : Jan 29, 2024, 10:12 AM ISTUpdated : Jan 29, 2024, 10:13 AM IST

ನಟ ದರ್ಶನ್ ಅಭಿನಯಿಸಿರೋ ಕಾಟೇರ ಸಿನಿಮಾ ಗೆದ್ದಿದೆ. ಹೀಗಾಗಿ ಮೇಲುಕೋಟೆ ಎಮ್ಎಲ್ ಎ ದರ್ಶನ್ ಪುಟ್ಟಣ್ಣಯ್ಯ ಇಡೀ ಕಾಟೇರ ಚಿತ್ರತಂಡವನ್ನ ಪಾಂಡವಪುರಕ್ಕೆ ಕರೆದು ಕಾಟೇರ ಸಕ್ಸಸ್ ಸೆಲಬ್ರೇಷನ್ ಮಾಡಿದ್ದಾರೆ.

ರೈತ ಮುಖಂಡ ಕೆಎಸ್ ಪುಟ್ಟಣ್ಣಯ್ಯನವರ(Ks Puttannaiah) 75ನೇ ಜನ್ಮ ದಿನೋತ್ಸವದ(Birthday) ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಟೇರ ಸಿನಿಮಾದ(Kaatera Movie) ಸಕ್ಸಸ್ ಸೆಲೆಬ್ರೇಷನ್ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ನಟ ದರ್ಶನ್ಗೆ ಭೂಮಿಪುತ್ರ ಬಿರುದ್ಧು ಕೊಟ್ಟು ಸನ್ಮಾನಿಸಲಾಗಿದೆ. ನಟ ದರ್ಶನ್(Darshan) ನಾನು ಸ್ವಲ್ಪ ಮುಂಗೋಪಿ ಅಂತ ಹಲವು ಭಾರಿ ಅವರೇ ಹೇಳಿಕೊಂಡಿದ್ದಾರೆ. ಏನೇ ಆದ್ರು ನೇರವಾಗೆ ಹೇಳ್ತೇನೆ ಅಂತ ಹೇಳಿಕೊಳ್ತಾರೆ. ಆದ್ರೆ ಈಗ ಅದ್ಯಾಕೋ ನಟ ದರ್ಶನ್ ಪಾಂಡವಪುರದಲ್ಲಿ ತಾಳ್ಮೆಯ ಪಾಠ ಮಾಡಿದ್ದಾರೆ. ಇವತ್ತು ತುಂಬಾ ಆಳ್ಮೆಯಿಂದ ಇದ್ದೇನೆ. ತಾಳ್ಮೆ ತುಂಬಾ ಕಲಿಸುತ್ತಾ ಇದೆ. ಯಾರು ಏನೇ ಅಂದುಕೊಂಡ್ರು, ಏನೇ ಮಾಡಿಕೊಂಡ್ರು ನಮ್ಮ ಹೃದಯದಲ್ಲಿರೋ ನನ್ನ ಸೆಲೆಬ್ರೆಟಿಗಳೇ ನನಗೆ ಸಾಕು ಎಂದಿದ್ದಾರೆ. 

ನಟ ದರ್ಶನ್ ತಾಳ್ಮೆಯಿಂದ ಇದ್ದೇನೆ ಅಂತ ಹೇಳುತ್ತಿದ್ದಂತೆ ದರ್ಶನ್ ಕುಟುಂಬದ ಬಗ್ಗೆ ಹೀಗೆ ಮಾತನಾಡುತ್ತಿದ್ದಾರೆ ಅಂತ ಚರ್ಚೆ ಶುರುವಾಗಿದೆ. ಯಾಕಂದ್ರೆ ಕಳೆದ ಎರಡು ದಿನಗಳಿಂದ ನಟ ದರ್ಶನ್ ಸಂಸಾರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಆಗುತ್ತಿದೆ. ನಟ ದರ್ಶನ್ ಜೊತೆಗಿನ ಆತ್ಮೀಯಾ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ನಮ್ಮ ಸಂಬಂಧಕ್ಕೆ 10 ವರ್ಷವಾಗಿದೆ ಅಂತ ಪೋಸ್ಟ್ ಹಾಕಿದ್ರು. ಇದನ್ನ ನೋಡಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಟಿ ಪವಿತ್ರಾ ಗೌಡ ವಿರುದ್ಧ ಕೆರಳಿ ಕೆಂಡವಾಗಿ ಪವಿತ್ರಾ ಗೌಡ ವಿರುದ್ಧ ಕಾನೂನು ಸಮರದ ಎಚ್ಚರಿಕೆ ಕೊಟ್ಟಿದ್ರು. ಆದ್ರೆ ನಟಿ ಪವಿತ್ರಾ ಗೌಡ ಸುಮ್ಮನಿರಬೇಕಲ್ಲ. ತನ್ನ ವಿರುದ್ಧ ಸಿಡಿದೆದ್ದಿದ್ದ ವಿಜಯಲಕ್ಷ್ಮಿ ವಾರ್ನಿಂಗ್ಗೆ ರಿವರ್ಸ್ ವಾರ್ನಿಂಗ್ ಕೊಟ್ಟಿದ್ದ ಪವಿತ್ರ ಗೌಡ, ನಾನು ಮತ್ತು ದರ್ಶನ್ 10 ವರ್ಷದಿಂದ ಜೊತೆಯಾಗಿದ್ದೇವೆ. ಇದು ವಿಜಯಲಕ್ಷ್ಮಿಗೂ ಗೊತ್ತು. ಇದರಿಂದ  ಯಾವುದೇ ರೀತಿ ತೊಂದರೆ ಇಲ್ಲ ಅಂತ ವಿಜಯಲಕ್ಷ್ಮಿ ಅವರೇ ಹಲವು ಭಾರಿ ಪೋನ್ ಕಾಲ್ ಮಾಡಿ ತಿಳಿಸಿದ್ದಾರೆ. ಹೀಗಾಗಿ ನನಗೂ ಕಾನೂನು ಹೋರಾಟ ಮಾಡೋಕೆ ಗೊತ್ತು ಅಂತ ಎಚ್ಚರಿಕೆ ಕೊಟ್ಟಿದ್ರು.

ಇದನ್ನೂ ವೀಕ್ಷಿಸಿ:  Ram Mandir: 5 ವರ್ಷದ ಮಗುವಿನ ಹೋಲಿಕೆಯ ರಾಮಲಲ್ಲಾ: 51 ಇಂಚಿನ ಮೂರ್ತಿ ಕೆತ್ತನೆ ಹಿಂದಿರುವ ಉದ್ದೇಶ..?

03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!