ಡಿಕೆ ಶಿವಕುಮಾರ್ ಭಾವಿ ಸಿಎಂ, ಭವಿಷ್ಯ ನುಡಿದ ಧ್ರುವ ಸರ್ಜಾ: KD ಮೀಟ್ಸ್ DK ಯಾಕೆ?

ಡಿಕೆ ಶಿವಕುಮಾರ್ ಭಾವಿ ಸಿಎಂ, ಭವಿಷ್ಯ ನುಡಿದ ಧ್ರುವ ಸರ್ಜಾ: KD ಮೀಟ್ಸ್ DK ಯಾಕೆ?

Published : Mar 26, 2025, 12:40 PM ISTUpdated : Mar 26, 2025, 01:11 PM IST

ಡಿಸಿಎಂ ಡಿ.ಕೆ.ಶಿವಕುಮಾರ್ ರಾಜ್ಯದ ಮುಂದಿನ ಸಿಎಂ ಆಗಬೇಕು ಅನ್ನೋದು ಅವರ ಕುಟುಂಬಸ್ಥರು, ಅಭಿಮಾನಿಗಳ ಕನಸು. ಸ್ವತಃ ಡಿಕೆಶಿ ಕೂಡ ಮುಖ್ಯಮಂತ್ರಿ ಕುರ್ಚಿಗೇರಲು ಎಲ್ಲಾ ಕಸರತ್ತು ನಡೆಸ್ತಿದ್ದಾರೆ. ಈ ಮಧ್ಯೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ ಮುಂದಿನ ಸಿಎಂ ಡಿಕೆಶಿ ..

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಯಾವಾಗಲೂ ಪಾಲಿಟಿಕ್ಸ್ ನಿಂದ ದೂರನೇ ಇರ್ತಾರೆ. ಚಿತ್ರರಂಗದ ರಾಜಕೀಯದಿಂದಲೂ ಧ್ರುವ ದೂರವೇ ಇದ್ದಾರೆ. ತಾನಾಯ್ತು ತನ್ನ ಕೆಲಸ ಆಯ್ತು ಇರೋ ಈ ಸ್ಟಾರ್ ಇದೇ ಮೊದಲ ಬಾರಿ ಪಾಲಿಟಿಕ್ಸ್​​ನಲ್ಲಿ ಒಬ್ಬರಿಗೆ ಸಪೋರ್ಟ್ ಮಾಡಿದ್ದಾರೆ. DK ಸಪೋರ್ಟ್ ಗೆ KD ನಿಂತುಕೊಂಡಿದ್ದಾರೆ.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಾವಾಯ್ತು ತನ್ನ ಪಾಡಾಯ್ತು ಅಂತ ಇರೋ ನಟ. ಸದಾ ತನ್ನ ಸಿನಿಮಾ- ವರ್ಕೌಟ್ ಅಂತ ದೂರ ಇರೋ ಧ್ರುವ ಯಾವತ್ತಿಗೂ ರಾಜಕೀಯದಿಂದ ದೂರ ದೂರ. ಅದು ಸಿನಿರಂಗದ ಪಾಲಿಟಿಕ್ಸ್​ ಆಗಲಿ, ರಾಜಕೀಯ ರಂಗದ ಅಸಲಿ ಪಾಲಿಟಿಕ್ಸ್ ಧ್ರುವ ಅದೆಲ್ಲದೆರಿಂದ ದೂರವೇ ಇರ್ತಾರೆ.

ಅದೆಷ್ಟೇ ದೊಡ್ಡ ಫ್ಯಾನ್ ಫಾಲೋವಿಂಗ್ ಇದ್ದರೂ ಌಕ್ಷನ್ ಪ್ರಿನ್ಸ್ ಧ್ರುವ ಯಾರ ಪ್ರಚಾರ ಕೂಡ ಮಾಡಿದವರಲ್ಲ. ಆದ್ರೆ ಫಾರ್ ಫಸ್ಟ್ ಟೈಂ ಧ್ರುವ ಒಬ್ಬ ರಾಜಕಾರಣಿ ಬೆಂಬಲಕ್ಕೆ ನಿಂತುಕೊಂಡಿದ್ದಾರೆ. ಅವರು ಮುಂದಿನ ಸಿಎಂ ಅಂತ ಹಾಡಿಹೊಗಳಿದ್ದಾರೆ. ಕೆಡಿ ಹೀಗೆ ಸಪೋರ್ಟ್ ಮಾಡಿರೋದು ಡಿಕೆ ಸಾಹೇಬ್ರಿಗೆ.

ಡಿಸಿಎಂ ಡಿ.ಕೆ.ಶಿವಕುಮಾರ್ ರಾಜ್ಯದ ಮುಂದಿನ ಸಿಎಂ ಆಗಬೇಕು ಅನ್ನೋದು ಅವರ ಕುಟುಂಬಸ್ಥರು, ಅಭಿಮಾನಿಗಳ ಕನಸು. ಸ್ವತಃ ಡಿಕೆಶಿ ಕೂಡ ಮುಖ್ಯಮಂತ್ರಿ ಕುರ್ಚಿಗೇರಲು ಎಲ್ಲಾ ಕಸರತ್ತು ನಡೆಸ್ತಿದ್ದಾರೆ. ಈ ಮಧ್ಯೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ ಮುಂದಿನ ಸಿಎಂ ಡಿಕೆಶಿ ಅಂತ ಹೇಳುವ ಮೂಲಕ ಭಾರಿ ಕುತೂಹಲ ಮೂಡಿಸಿದ್ದಾರೆ.

ಡಿಸಿಎಂ ಡಿಕೆಶಿ ಮಾಲೀಕತ್ವದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಕಾರ್ಯಕ್ರಮದಲ್ಲಿ ಸ್ಪೆಷಲ್ ಗೆಸ್ಟ್ ಆಗಿ ಭಾಗಿಯಾಗಿದ್ದ   ಧ್ರುವ ಸರ್ಜಾ.. ವೇದಿಕೆ ಉದ್ದೇಶಿಸಿ ಮಾತನಾಡಿ  ಡಿಸಿಎಂ ಪುತ್ರಿ ಐಶ್ವರ್ಯರನ್ನ ಹಾಡಿ ಹೊಗಳಿದ್ದಾರೆ. ಜೊತೆಗೆ ಡಿಕೆಶಿ ಮುಂದಿನ ಸಿಎಂ ಅಂದಿದ್ದಾರೆ.

ಇನ್ನೂ ನೆರೆದಿದ್ದ ವಿಧ್ಯಾರ್ಥಿಗಳಿಗೆ ಒಂದೆರಡು ಬುದ್ದಿ ಮಾತು ಹೇಳಿರುವ ಧ್ರುವ, ತಮ್ಮ ಕೆಡಿ ಸಿನಿಮಾದ ಒಂದು ಮಾಸ್ ಟೈಲಾಗ್​ನ ಹೇಳಿ ವಿಧ್ಯಾರ್ಥಿಗಳನ್ನ ರಂಜಿಸಿದ್ದಾರೆ.

ಒಟ್ಟಾರೆ ಇಷ್ಟು ದಿನ ರಾಜಕಾರಣಿಗಳು ಮತ್ತು ರಾಜಕಾರಣದಿಂದ ದೂರವಿರ್ತಾ ಇದ್ದ ಧ್ರುವ ಡಿ.ಕೆಶಿಗೆ ಸಪೋರ್ಟ್ ಮಾಡಿರೋದು ಎಲ್ಲರಿಗೂ ಅಚ್ಚರಿ ತಂದಿದೆ. KD  DK ಗೆ ಸಪೋರ್ಟ್ ಮಾಡ್ತಿರೋದ್ರ ಹಿಂದೆ ಏನೋ ಮರ್ಮ ಇದೆ ಅಂತ ಎಲ್ಲರೂ ಯೋಚನೆಗೆ ಬಿದ್ದಿದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
Read more