Upendra: 'ಕಬ್ಜ' ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಚಂದ್ರು ಖಡಕ್ ವಾರ್ನಿಂಗ್!

Upendra: 'ಕಬ್ಜ' ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಚಂದ್ರು ಖಡಕ್ ವಾರ್ನಿಂಗ್!

Published : Apr 06, 2022, 02:48 PM IST

ಕಬ್ಜ ಸಿನಿಮಾದಿಂದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೊರ ಬಂದಿದ್ದಾರೆ ಅಂತ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ರು. ಆದ್ರೆ ಈ ಸುಳ್ಳುಗಾರ ಸೋಷಿಯಲ್ ಮೀಡಿಯಾ ಪ್ರಭುಗಳಿಗೆ ಆರ್ ಚಂದ್ರು ಖಡಕ್ ಆಗೆ ಉತ್ತರ ಕೊಟ್ಟಿದ್ದಾರೆ. 

ರಿಯಲ್ ಸ್ಟಾರ್ ಉಪೇಂದ್ರ (Upendra) ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಕಾಂಬಿನೇಷನ್‌ನ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' (Kabza). 'ಕೆಜಿಎಫ್' ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಸೃಷ್ಟಿಸಿದ ಇತಿಹಾಸವನ್ನ ಪ್ರೇರಣೆಯಾಗಿ ಪಡೆದು ನಿರ್ದೇಶಕ ಆರ್ ಚಂದ್ರು (R Chandru) ಕಬ್ಜ ಸಿನಿಮಾವನ್ನ ಸಿದ್ಧಪಡಿಸುತ್ತಿದ್ದಾರೆ. ಇದೀಗ ಅಪ್ಪಟ ಕನ್ನಡಿಗರ ಈ ಪ್ಯಾನ್ ಇಂಡಿಯಾ ಕಬ್ಜ ಸಿನಿಮಾ ಬಗ್ಗೆ ಮತ್ತೊಂದು ಎಕ್ಸ್‌ಕ್ಲೂಸಿವ್ ಸುದ್ದಿ ಹೊರ ಬಂದಿದೆ. ಅದು ಕಬ್ಜ ಸಿನಿಮಾದ ಆಕ್ಷನ್ ಸೀನ್ ಹಾಗು ಕ್ಲೈಮ್ಯಾಕ್ಸ್ ಸೀನ್ ಚಿತ್ರೀಕರಣದ ಬಗ್ಗೆ. ಕಬ್ಜ ಶೂಟಿಂಗ್ ಎಲ್ಲಿವರೆಗೂ ಬಂದಿದೆ ಅಂತ ಕಾಯುತ್ತಿದ್ದ ಉಪ್ಪಿ ಹಾಗು ಕಿಚ್ಚನ ಅಭಿಮಾನಿಗಳಿಗೆ ಕಬ್ಜ ಟೀಂ ಸರ್ಪ್ರೈಸ್ ವಿಷಯವನ್ನ ಹಂಚಿಕೊಂಡಿದೆ. ಕಬ್ಜ ಸಿನಿಮಾದ ಶೂಟಿಂಗ್ ಈಗ ಕ್ಲೈಮ್ಯಾನ್ಸ್ ಹಂತಕ್ಕೆ ಬಂದಿದೆ.

ಕಬ್ಜ ಸಿನಿಮಾದ ಸ್ಯಾಂಪಲ್ಸ್‌ಗಳು ಭಾರತೀಯ ಚಿತ್ರರಂಗ ಸ್ಯಾಂಡಲ್‌ವುಡ್ ಅನ್ನ ಮತ್ತೊಮ್ಮೆ ತಿರುಗಿ ನೋಡುವಂತೆ ಮಾಡಿವೆ. ಹೀಗಾಗಿ ಬಹುಕೋಟಿ ವ್ಯಚ್ಚದಲ್ಲಿ ನಿರ್ದೇಶಕ ಆರ್ ಚಂದ್ರು ಕಬ್ಜವನ್ನ ಸಿದ್ಧಮಾಡುತ್ತಿದ್ದು, ಈ ಸಿನಿಮಾದ ಶೂಟಿಂಗ್ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಸದ್ಯ ಮಂಗಳೂರಿನ ಹಾರ್ಬರ್‌ನಲ್ಲಿ ಏಳು ದಿನಗಳ ಕಾಲ ಭರ್ಜರಿ ಆಕ್ಷನ್ ದೃಶ್ಯವನ್ನ ಸೆರೆ ಹಿಡಿಯುತ್ತಿದ್ದು, ಮೇ ಮೊದಲ ವಾರ ಹೈದರಾಬಾದ್‌ನಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡಲಿದೆ ಕಬ್ಜ ಟೀಂ. ಹೈದರಾಬಾದ್‌ನಲ್ಲಿ 10 ದಿನಗಳ ಕಾಲ ಶೂಟಿಂಗ್ ಮಾಡಿ ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆಯಲಿದ್ದಾರೆ ಆರ್ ಚಂದ್ರು, ಉಪೇಂದ್ರ, ಕಿಚ್ಚ. 

Kabza Movie: ಉಪ್ಪಿ ಅಡ್ಡಾಕ್ಕೆ ಎಂಟ್ರಿ ಕೊಟ್ಟ ನಟಿ ಶ್ರೀಯಾ ಶರಣ್‌

ಕಬ್ಜ ಸಿನಿಮಾದಿಂದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೊರ ಬಂದಿದ್ದಾರೆ ಅಂತ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ರು. ಆದ್ರೆ ಈ ಸುಳ್ಳುಗಾರ ಸೋಷಿಯಲ್ ಮೀಡಿಯಾ ಪ್ರಭುಗಳಿಗೆ ಆರ್ ಚಂದ್ರು ಖಡಕ್ ಆಗೆ ಉತ್ತರ ಕೊಟ್ಟಿದ್ದಾರೆ. ಕಬ್ಜ ಸಿನಿಮಾಗೆ ಉಪ್ಪಿ ಹೇಗೆ ಒಂದು ಶಕ್ತಿಯೋ ಅದೇ ತರ ಕಿಚ್ಚ ಸುದೀಪ್ ಕೂಡ ಒಂದು ಶಕ್ತಿ.. ಈ‌ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರು ಭಾರ್ಗವಗ ಭಕ್ಷಿ ರೋಲ್ ಮಾಡುತ್ತಿದ್ದಾರೆ. ಇವರ ಪಾತ್ರದ ಶೂಟಿಂಗ್ ಕೂಡ ಆಗಿದೆ. ಸುಳ್ಳು ಸುದ್ದಿ ಹಬ್ಬಿಸಬೇಡಿ ಅಂದಿದ್ದಾರೆ ಚಂದ್ರು. ಸದ್ಯ ಕಬ್ಜ ಶೂಟಿಂಗ್ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ್ದು, ಆದಷ್ಟು ಬೇಗ ಸಿನಿಮಾ ಬಿಡುಗಡೆ ದಿನಾಂಕ ಕೂಡ ಅನೌನ್ಸ್ ಆಗಲಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
Read more