
ಜೈಲಿನಿಂದ ಬಿಡುಗಡೆಯಾದ ನಂತರ ದರ್ಶನ್ ಬದಲಾಗಿರುವಂತೆ ಕಾಣುತ್ತಿದೆ. ಕುಟುಂಬದೊಂದಿಗೆ ಸಿನಿಮಾ ವೀಕ್ಷಿಸಿದ್ದು, ಅಭಿಮಾನಿಗಳಿಗೆ ಸಂತಸ ತಂದಿದೆ. ಆದರೆ, ಈ ಬದಲಾವಣೆಯ ಹಿಂದೆ ರೇಣುಕಾಸ್ವಾಮಿ ಕುಟುಂಬದ ಪರಿಸ್ಥಿತಿ ಏನು?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಬೇಲ್ ಮೇಲೆ ಆಚೆ ಬಂದಿದ್ದಾರೆ. ಜೈಲಿನಿಂದ ಆಚೆ ಬಂದಿರುವ ದರ್ಶನ್ ಕಂಪ್ಲೀಟ್ ಬದಲಾದಂತೆ ಕಾಣುತ್ತಿದೆ. ಹಳೇ ಚಾಳಿ ಬಿಟ್ಟು ಒಳ್ಳೆ ದರ್ಶನ್ ಆದಂತೆ ಕಾಣುತ್ತಿದೆ. ಜೈಲಿನಿಂದ ಹೊರ ಬಂದ ಮೇಲೆ ಊರ ಉಸಾಬರಿ ಬಿಟ್ಟು ತಾವಾಯ್ತು ತಮ್ಮ ಕುಟುಂಬವಾಯ್ತು ಎಂಬಂತೆ ಬದುಕುತ್ತಿರುವಂತೆ ಕಾಣುತ್ತಿದೆ. ನಿನ್ನೆ ಸಹೋದರ ದಿನಕರ್ ತೂಗುದೀಪ್ ನಿರ್ದೇಶನದ ರಾಯಲ್ ಸಿನಿಮಾ ಶೋ ನೋಡಲು ದರ್ಶನ್ ಸೇರಿದಂತೆ ಇಡೀ ಕುಟುಂಬವೇ ಥೀಯಟರ್ಗೆ ಹೋಗಿತ್ತು. ಇಡೀ ಕುಟುಂಬವನ್ನು ಒಂದೇ ಕಡೆ ನೋಡಿದ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ. ಇಲ್ಲಿ ನೋವಿನ ಸಂಗತಿ ಏನೆಂದ್ರೆ ಈ ಕುಟುಂಬ ಒಂದಾಗೋದಕ್ಕೆ ಅಲ್ಲೊಂದು ಕುಟುಂಬ ಅನಾಥವಾಗಿ ಬೀದಿಗೆ ಬರಬೇಕಾಯ್ತು.ದರ್ಶನ್ ರೇಣುಕಾಸ್ವಾಮಿ ಕುಟುಂಬವನ್ನು ಭೇಟಿಯಾಗಲಿದ್ದಾರೆಂದು ಎಂದು ಒಂದು ಕಡೆ ಸುದ್ದಿ ಹರಿದಾಡುತ್ತಿದ್ದರೆ ಇನ್ನೊಂದು ಕಡೆ ದರ್ಶನ್ ರೇಣುಕಾಸ್ವಾಮಿ ಕುಟುಂಬದವರಿಗೆ ಆಗಲೇ ಕೋಟಿ ಕೋಟಿ ದುಡ್ಡು ಕೊಟ್ಟಿದ್ದಾರೆಂಬ ಸುದ್ದಿಗಳೂ ಹರಿದಾಡುತ್ತಿದ್ದವು. ಹಾಗಿದ್ರೆ ಈ ಸುದ್ದಿಗಳು ಎಷ್ಟರ ಮಟ್ಟಿಗೆ ನಿಜಾ ಅನ್ನೋದನ್ನು ಇಲ್ಲಿ ನೋಡೋಣ.
ಬಿಗ್ ಬಾಸ್ ಟ್ರೋಫಿ ನಿನ್ನದೇ ಎಂದು ಹನುಮಂತುಗೆ ಸೂಚನೆ ಕೊಟ್ರಾ ಗುರೂಜಿ; ವಿಡಿಯೋ ವೈರಲ್