ಜೈಲಲ್ಲಿ ಓದೋಕೆ ಶುರು ಮಾಡಿದ ನಟ ದರ್ಶನ್..! ಕಿಲ್ಲಿಂಗ್ ಸ್ಟಾರ್ ಓದೋ 5 ಪುಸ್ತಕಗಳು ಯಾವುವು?

ಜೈಲಲ್ಲಿ ಓದೋಕೆ ಶುರು ಮಾಡಿದ ನಟ ದರ್ಶನ್..! ಕಿಲ್ಲಿಂಗ್ ಸ್ಟಾರ್ ಓದೋ 5 ಪುಸ್ತಕಗಳು ಯಾವುವು?

Published : Jul 02, 2024, 09:15 AM IST

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎ2 ಆರೋಪಿ ಆಗಿ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ದರ್ಶನ್‌ಗೆ ಜೈಲು ಬಂಧನ ಆಗಿ ಒಂದು ವಾರ ಕಳೆದಿದೆ. ಯಾರನ್ನೂ ಮಾತನಾಡಿಸದೇ ಟಿವಿ, ಪುಸ್ತಕ, ಪೇಪರ್ ಓದದೇ ಛೇ ಎಂಥಾ ತಪ್ಪು ಮಾಡಿದೆ ಅಂತ ಮನ ನೊಂದುಕೊಂಡು  ದರ್ಶನ್ ಮೌನವಾಗಿದ್ದಾರಂತೆ.

ಜೈಲು ಪಾಲಾಗಿರೋ ನಟ ದರ್ಶನ್ ಈಗ ಹೇಗಿದ್ದಾರೆ..? ಅವರ ಜೈಲು ದಿನಗಳ ಹೇಗೆ ನಡೆಯುತ್ತಿವೆ. ಹೀರೋ ಆಗಿದ್ದಾಗ ಐಶಾರಾಮಿ ಕಾರು ಬಂಗಲೆ ಕೈಗೆ ಕಾಲಿಗೆ ಆಳು ಕಾಳು, ಹೋಟೆಲ್‌ನಲ್ಲಿ ವಾಸ್ತವ್ಯ ಎಣ್ಣೆ ಪಾರ್ಟಿ ಅಬ್ಬಬ್ಬ ದರ್ಶನ್ (Darshan)ದರ್ಬಾರ್‌ಗೆ ಎಲ್ಲೆಯೇ ಇರಲಿಲ್ಲ. ಆದ್ರೆ ಈಗ ಈ ಕಿಲ್ಲಿಂಗ್ ಸ್ಟಾರ್‌ಗೆ ಅದ್ಯಾವುದು ಸಿಗುತ್ತಿಲ್ಲ. ನಾಲ್ಕು ಗೋಡೆ ಮಧ್ಯೆ ಕಂಬಿ ಎಣೆಸುತ್ತಾ ಕೂರೋ ಸ್ಥಿತಿ ದರ್ಶನ್‌ರದ್ದು. ಹೇಗಾದ್ರು ಮಾಡಿ ದಿನ ದೂಡಿದ್ರೆ ಸಾಕಪ್ಪಾ ಅನ್ನೋ ಸ್ಥಿತಿ ಬಂದೋದಗಿದೆ. ಇಷ್ಟು ದಿನ ಕತ್ತಲು ಕೋಣೆಯ ಜೈಲಲ್ಲಿ ಒಂಟಿಯಾಗಿದ್ದ ದರ್ಶನ್ ಈಗ ಅಲ್ಲಿನ ಕೈದಿಗಳ ಜೊತೆ ಸ್ನೇಹ ಬೆಸೆಯುತ್ತಿದ್ದಾರಂತೆ. ಅಷ್ಟೆ ಅಲ್ಲ ದಿನ ನಿತ್ಯ ಕೈಯಲ್ಲಿ ಬಾಟೆಲ್ ಹಿಡಿದು ಪಾರ್ಟಿ ಮಾಡಿ ಬೇರೆಯದ್ದೇ ಲೋಕದಲ್ಲಿ ತೇಲುತ್ತಿದ್ದ ಈ ನಟನ ಕೈಗೆ ಈಗ ಪುಸ್ತಕ ಬಂದಿದೆಯಂತೆ. ಪಿಎಸ್ಐ ಸ್ಕ್ಯಾಮ್ ಆರೋಪಿಗಳಿದ್ದ ರೂಂನಲ್ಲಿರುವ ದರ್ಶನ್, ಮಾನಸಿಕವಾಗಿ ಮತ್ತಷ್ಟು ಕುಗ್ಗಿದ್ದು, ಓದಲು ಐದು ಕಥೆ ಪುಸ್ತಕಗಳನ್ನ ಪಡೆದಿದ್ದಾರಂತೆ. ಮಧ್ಯಾಹ್ನ ಮತ್ತು ಸಂಜೆ ಕಥೆ ಪುಸ್ತಕಗಳನ್ನ(story books) ಓದಿಕೊಂಡು ಸುಮ್ಮನ್ನಿರ್ತಾರಂತೆ. ನಟ ದರ್ಶನ್ ಕೊಲೆ (renukaswamy murder case) ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಲು ಕಾರಣ ಇದೇ ಜನುಮಗ ಗೆಳತಿ ಮದುವೆ ಆಗಿ ಡಿವೋರ್ಸ್ ಪಡೆದು ಒಂಟಿ ಜೀವನ ನಡೆಸುತ್ತಿರೋ ಪವಿತ್ರಾ ಗೌಡ ಅನ್ನೋದು ಎಲ್ಲರಿಗೂ ಗೊತ್ತು. ಪವಿತ್ರಾ ಗೌಡನನ್ನ ಮೆಚ್ಚಿಸೋಕೆ ಹೋಗಿ ದರ್ಶನ್ ಕೊಲೆ ಆರೋಪ ಹೊತ್ತಿದ್ದಾರೆ. ಪವಿತ್ರಾ ಗೌಡ ಎ1 ಆರೋಪಿ ಆದ್ರೆ ದರ್ಶನ್ ಎ2 ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. 

ಇದನ್ನೂ ವೀಕ್ಷಿಸಿ:  ಭಾರೀ ಮಳೆಗೆ ಕೊಚ್ಚಿಹೋದ ಕಾರು..ಬಸ್‌ಗಳು..! ರಾಷ್ಟ್ರರಾಜಧಾನಿಯಲ್ಲಿ 24 ಗಂಟೆ ನಾನ್‌ಸ್ಟಾಪ್ ಮಳೆ..!

04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
04:33Cine Express: '8' ಗ್ಲಿಂಪ್ಸ್‌ನಿಂದ 'ಊರಬ್ಬ' ಟ್ರೇಲರ್‌ವರೆಗೆ: ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಹವಾ
04:30Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?
04:09ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?
04:18ಸ್ಯಾಂಡಲ್​ವುಡ್​ನಲ್ಲಿ ಮತ್ತೆ ನೆಪೋಟಿಸಂ ಕಿಚ್ಚು: ವಿವಾದಕ್ಕೆ ಅಂತ್ಯ ಹಾಡಿದ ಶಿವಣ್ಣ
02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
Read more