ಹೊಸ ಇತಿಹಾಸ ಬರೆಯಲು ಸಜ್ಜಾದ ಬೆಂಗಳೂರು: ತುಳುನಾಡಿನ ಕಂಬಳ ಕ್ರೀಡೆ ಸಿಲಿಕಾನ್‌ ಸಿಟಿಗೆ ಶಿಫ್ಟ್..!

ಹೊಸ ಇತಿಹಾಸ ಬರೆಯಲು ಸಜ್ಜಾದ ಬೆಂಗಳೂರು: ತುಳುನಾಡಿನ ಕಂಬಳ ಕ್ರೀಡೆ ಸಿಲಿಕಾನ್‌ ಸಿಟಿಗೆ ಶಿಫ್ಟ್..!

Published : Sep 27, 2023, 09:22 AM IST

ತುಳುನಾಡ ಮಂದಿಗೆ ಈ ನವೆಂಬರ್ ಬಂದ್ರೆ ಸಾಕು ದೊಡ್ಡ ಹಬ್ಬವೇ ಇದೆ. ಕಾರಣ, ಕಂಬಳ ಕ್ರೀಡೆಗೆ ಅಖಾಡ ಸಿದ್ಧವಾಗಿರುತ್ತೆ. ಕಂಬಳ ಅಖಾಡದಲ್ಲಿ ಕೋಣಗಳ ದರ್ಬಾರ್. ಗದ್ದೆಗೆ ಇಳಿದು ಶರವೇಗದಲ್ಲಿ ಓಡೋ ಕೋಣಗಳು. ಇದರ ಸಾರಥಿ.. ತಲೆಗೆ ಬಟ್ಟೆ, ಕೈಯಲ್ಲಿ ಲಗಾಮು ಸಿಕ್ರೆ ಗುರಿ ಮುಟ್ಟೋವರೆಗೂ ಛಲ ಬಿಡದೇ ಓಡೋ ಛಲದಂಕ ಮಲ್ಲ.
 

ಕಂಬಳ ಬರಿ ಕ್ರೀಡೆಯಲ್ಲ ತುಳುನಾಡ ಜೀವನಾಡಿ, ಈ ಕಂಬಳಕ್ಕಂತಾನೇ ಇಡಿ ಕರಾವಳಿ ಕಾದು ಕುಳಿತಿರುತ್ತೆ. ಕಂಬಳಕ್ಕೆ ಎಕರೆಗಟ್ಟಲೇ ಗದ್ದೆ ಹದ ಮಾಡಿ, ನೀರು ಬಿಟ್ಟು, 2 ತಿಂಗಳ ಮುಂಚೆಯೇ ರೆಡಿ ಮಾಡಿರ್ತಾರೆ. ಇನ್ನು ಅಚ್ಚರಿಯ ವಿಷಯ ಅಂದ್ರೆ ಕಂಬಳದಲ್ಲಿ(Kambala) ಅತೀ ಹೆಚ್ಚು ಅಭಿಮಾನಿಗಳು ಇರೋದು ಕೋಣಗಳಿಗೆ. ತಾಟೆ, ಕಾಟಿ, ಬೊಲ್ಲೆ, ಚೆನ್ನೆ, ಧೋಣಿ, ಕಾಲೆ, ಪಾಂಡು, ದೂಜೆ, ಮುಕೇಶೆ, ಅಪ್ಪು, ಬೊಟ್ಟಿಮಾರ್‌, ಬಾಬು, ಚಿನ್ನು ಈ ಹೆಸರಿನ ಟಾಪ್‌ ಕೋಣಗಳಿಗೆಲ್ಲ ಹುಚ್ಚು ಅಭಿಮಾನಿಗಳಿದ್ದಾರೆ. ಇದೇ ಅಭಿಮಾನ, ಸಂತೋಷ, ಕಂಬಳ, ಈಗ ತುಳುನಾಡು, ಕರಾವಳಿ ಟು ಬೆಂಗಳೂರಿಗೆ(Bengaluru) ಶಿಫ್ಟ್ ಆಗಿದೆ. ಇಷ್ಟ್ ದಿನ ಬರಿ ಕರಾವಳಿಯಲ್ಲಿ ಮಾತ್ರ ಕಂಬಳ ಕ್ರೀಡೆ ನೀಡಿತಿತ್ತು. ಆದ್ರೆ ಈಗ ಕರಾವಳಿ ಕ್ರೀಡೆ ಬೆಂಗ್ಳೂರಿಗೂ ಕಾಲಿಟ್ಟಿದ್ದು, ದೇಸಿ ಕ್ರೀಡೆ ಸಿಟಿಗೆ ಬಂದಿದೆ. ಇತ್ತೀಚೆಗೆ ಕಂಬಳವನ್ನ ಇಡೀ ವಿಶ್ವಕ್ಕೆ ಪರಿಚಸಿದ್ದು ಕಾಂತಾರಾ ಸಿನಿಮಾ. ಕಾಂತಾರ ಸಿನಿಮಾದ(Kantara movie) ಮೂಲಕ ಜಗತ್ತಿಗೆ ಅತಿಹೆಚ್ಚು ಚಿರಪರಿಚಿತವಾದ ಕೆಸರಿನ ಗದ್ದೆಯಲ್ಲಿ ಶರವೇಗದಲ್ಲಿ ಓಡುವ ಕೋಣಗಳ ಕಂಬಳವನ್ನು ಈಗ ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗುತ್ತಿದೆ. ಇದಕ್ಕೆ ದಿನಗಣನೆ ಆರಂಭವಾಗಿದ್ದು, ತುಳು ಕೂಟದಿಂದ ಭರ್ಜರಿಯಾಗಿ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿ ಇತಿಹಾಸ ಪ್ರಸಿದ್ಧ ಕಂಬಳ ಆಯೋಜಿಸಲಾಗುತ್ತಿದ್ದು, ನವೆಂಬರ್ 25ರಂದು ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ‘ಬೆಂಗಳೂರು ಕಂಬಳ’(Bengaluru Kambala) ನಡೆಯಲಿದೆ. 'ಜಯಚಾಮರಾಜೇಂದ್ರ ಒಡೆಯರ್‌ ಜೋಡುಕರೆ ಕಂಬಳ'ಕ್ಕೆ ಸಕಲ ಸಿದ್ಧತೆಗಳು ಆರಂಭವಾಗಿದೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಬೆಂಗಳೂರು ಕಂಬಳ ನಡೆಸಲು ಕೆಲಸ ಶುರುವಾಗಿದೆ. 150ಕ್ಕೂ ಹೆಚ್ಚಿನ ಕೋಣಗಳು ಈ ಪೈಪೋಟಿಯಲ್ಲಿ ಭಾಗಿಯಾಗಲಿದೆ. ಸುಮಾರು 7 ಲಕ್ಷ ಜನ ಈ ಕಂಬಳದಲ್ಲಿ ಭಾಗಿಯಾಗುವ ನಿರೀಕ್ಷೆಯಲ್ಲಿದ್ದಾರೆ ಆಯೋಜಕರು. ನವೆಂಬರ್ ಅಂತ್ಯದಲ್ಲಿ ಬೆಂಗಳೂರು ಕಂಬಳ ಶುರುವಾಗಲಿದೆ. ಐಪಿಎಲ್ ಮಾದರಿಯಲ್ಲಿ ಕಂಬಳವನ್ನ ಆಯೋಜಿಸುವ ಚಿಂತನೆ ಶುರುವಾಗಿದೆ. 

ಇದನ್ನೂ ವೀಕ್ಷಿಸಿ:  Today Horoscope: ಈ ದಿನ ಪ್ರದೋಷ ಪೂಜೆ ಮಾಡಿ..ನಿಮ್ಮ ಕಷ್ಟಗಳಿಂದ ಮುಕ್ತಿ ಹೊಂದಿ

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more