ಬ್ಯಾಂಕಿನಲ್ಲಿ ರಾಬರ್ಸ್ ಲಾಕ್, ಟ್ವಿಸ್ಟ್ ಮೇಲ್ ಟ್ವಿಸ್ಟ್..! ಏನಾಗುತ್ತೆ ಬ್ಯಾಂಕ್ ಕಳ್ಳರ ಕಥೆ..?

ಬ್ಯಾಂಕಿನಲ್ಲಿ ರಾಬರ್ಸ್ ಲಾಕ್, ಟ್ವಿಸ್ಟ್ ಮೇಲ್ ಟ್ವಿಸ್ಟ್..! ಏನಾಗುತ್ತೆ ಬ್ಯಾಂಕ್ ಕಳ್ಳರ ಕಥೆ..?

Published : Oct 13, 2025, 12:42 PM IST

ಭಾಗ್ಯಲಕ್ಷ್ಮೀ ಬ್ಯಾಂಕಿಗೆ ಕನ್ನ ಹಾಕೋದಕ್ಕೆ ಬಂದ ರಾಬರ್ಸ್‌ಗಳಿಗೆ ಸಿಕ್ಕೋದೇ ಚಿಲ್ರೆ ಹಣ. ಸಾಲದಕ್ಕೆ ಅವರು ಬ್ಯಾಂಕ್​ನಲ್ಲೇ ಲಾಕ್ ಆಗ್ತಾರೆ. ಹೊರಗೆ ಪೊಲೀಸರು, ಮಿಲಿಟರಿ.. ಒಳಗೆ ಫುಲ್ ಟ್ವಿಸ್ಟ್ ಮೇಲೆ ಟ್ವಿಸ್ಟ್ ಇರೋ ಸ್ಟೋರಿ…

ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ (Bank Of Baghyalakshmi) ಸಿನಿಮಾ ತನ್ನ ಡಿಫರೆಂಟ್ ಟೈಟಲ್ ನಿಂದಾನೇ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿರೋ ಸಿನಿಮಾ. ದೀಕ್ಷಿತ್ ಶೆಟ್ಟಿ-ಬೃಂದಾ ಆಚಾರ್ಯ ನಟನೆಯ ಈ ಸಿನಿಮಾ ತನ್ನ  ಟೀಸರ್ - ಸಾಂಗ್ಸ್​ನಿಂದ ಕುತೂಹಲ ಮೂಡಿಸಿದ್ದು ಇನ್ನೇನು ಪ್ರೇಕ್ಷಕರ ಎದುರು ಬರೋದಕ್ಕೆ ಸಜ್ಜಾಗಿದೆ.

ಯೆಸ್ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ತನ್ನ ವಿಭಿನ್ನ ಶಿರ್ಷಿಕೆಯಿಂದಾನೇ ಗಮನ ಸೆಳೆದಿರೋ ಸಿನಿಮಾ. ಈ ಹಿಂದೆ ರಿಲೀಸ್ ಆದ  ಟೀಸರ್ ನೋಡಿದ ಮೇಲೆ ಇದೊಂದು ಬ್ಯಾಂಕ್ ರಾಬರಿ ಕಥೆಯುಳ್ಳ ಸಿನಿಮಾ ಅನ್ನೋದು ಗೊತ್ತಾಗಿತ್ತು. ಆದ್ರೆ ಇಲ್ಲಿ ಬರೀ ರಾಬರಿ ಕಥೆಯಿಲ್ಲ ಌಕ್ಷನ್ ಥ್ರಿಲ್ ಲವ್ ಡ್ರಾಮಾ ಎಲ್ಲಾ ಇದೆ.

ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಈ ಚಿತ್ರದ ನಾಯಕನಾದ್ರೆ, ಬೃಂದಾ ಆಚಾರ್ಯ ಚಿತ್ರದ ನಾಯಕಿ. ರಂಗಿತರಂಗ ಮತ್ತು ಅವನೇ ಶ್ರೀಮನ್ನಾರಾಯಣನಂತಹಾ ಯಶಸ್ವಿ ಚಿತ್ರಗಳನ್ನ ನಿರ್ಮಾಣ ಮಾಡಿರೋ ಎಚ್.ಕೆ. ಪ್ರಕಾಶ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಸಿಂಪಲ್ ಸುನಿ ಜೊತೆ ಕೆಲಸ ಮಾಡಿ ಅನುಭವವಿರೋ ಅಭಿಷೇಕ್ ಚಿತ್ರದ ಸೂತ್ರಧಾರ.

ಭಾಗ್ಯಲಕ್ಷ್ಮೀ ಬ್ಯಾಂಕಿಗೆ ಕನ್ನ ಹಾಕೋದಕ್ಕೆ ಬಂದ ರಾಬರ್ಸ್​​ಗೆ ಸಿಕ್ಕೋದೇ ಚಿಲ್ರೆ ಹಣ. ಸಾಲದಕ್ಕೆ ಅವರು ಬ್ಯಾಂಕ್​ನಲ್ಲೇ ಲಾಕ್ ಆಗ್ತಾರೆ. ಹೊರಗೆ ಪೊಲೀಸರು, ಮಿಲಿಟರಿ.. ಒಳಗೆ ಫುಲ್ ಟ್ವಿಸ್ಟ್ ಮೇಲೆ ಟ್ವಿಸ್ಟ್ ಇರೋ ಸ್ಟೋರಿ.. ಹೀಗೆ ಸಾಗುತ್ತೆ ಭಾಗ್ಯಲಕ್ಷ್ಮೀ ಬ್ಯಾಂಕ್ ಕಹಾನಿ.

ದೀಕ್ಷಿತ್ ಶೆಟ್ಟಿ , ಬೃಂದಾ  ಆಚಾರ್ಯ ಜೊತೆಗೆ ಸಾಧು ಕೋಕಿಲ, ಉಷಾ ಭಂಡಾರಿ, ಗೋಪಾಲಕೃಷ್ಣ ದೇಶಪಾಂಡೆ, ಭರತ್, ಅಶ್ವಿನ್ ರಾವ್ ಸೇರಿದಂತೆ ಚಿತ್ರದಲ್ಲಿ ಕಲಾವಿದರ ದಂಡೇ ಇದೆ.  ಜ್ಯೂಡಾ ಸ್ಯಾಂಡಿ ಸಿನಿಮಾಗೆ ಮ್ಯೂಸಿಕ್ ಮಾಡಿದ್ದಾರೆ. ಚಿತ್ರದ ಹಾಡುಗಳು ಕೂಡ ಸದ್ದು ಮಾಡ್ತಾ ಇವೆ.. ನವೆಂಬರ್ ತಿಂಗಳಲ್ಲಿ ಸಿನಿಮಾ ತೆರೆಗೆ ಬರೋದಕ್ಕೆ ಸಜ್ಜಾಗಿದೆ. ಬ್ಯಾಂಕ್​ಗೆ  ಕನ್ನ ಹಾಕೋ ಕಹಾನಿ ಇರೋ ಈ ಸಿನಿಮಾ ಪ್ರೇಕ್ಷಕರ ಮನಸಿಗೂ  ಕನ್ನ ಹಾಕೋ ಉತ್ಸಾಹಸಲ್ಲಿದೆ. 

ಹೆಚ್ಚಿನ ಮಾಹಿತಿಗೆ ವಿಡಿಯೋ ನೊಡಿ…

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
Read more