ಫೈನಲಿ ಕೆಜಿಎಫ್ 2 ಬಗ್ಗೆ ಮಾತನಾಡಿದ ಕಿಚ್ಚ: ಸುದೀಪ್ ಕನ್ನಡ ಸಿನಿಮಾ ಪ್ರೀತಿಗೆ ಫ್ಯಾನ್ಸ್ ಶರಣು‌

ಫೈನಲಿ ಕೆಜಿಎಫ್ 2 ಬಗ್ಗೆ ಮಾತನಾಡಿದ ಕಿಚ್ಚ: ಸುದೀಪ್ ಕನ್ನಡ ಸಿನಿಮಾ ಪ್ರೀತಿಗೆ ಫ್ಯಾನ್ಸ್ ಶರಣು‌

Published : May 21, 2022, 08:17 PM IST

ಕೆಜಿಎಫ್ 2.. ಭಾರತೀಯ ಸಿನಿಮಾರಂಗವೇ ಮೆಚ್ಚಿ ಕೊಂಡಾಡುತ್ತಿರೋ ಸಿನಿಮಾ. ನಟ ಕಿಚ್ಚ ಸುದೀಪ್ ಕೂಡ ಕೆಜಿಎಫ್ 2 ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಕಿಚ್ಚ ಸುದೀಪ್ ಇತ್ತೀಚಿಗಷ್ಟೇ ದುಬೈಗೆ ಭೇಟಿ ಕೊಟ್ಟಿದ್ದರು. 

ಕೆಜಿಎಫ್ 2.. ಭಾರತೀಯ ಸಿನಿಮಾರಂಗವೇ ಮೆಚ್ಚಿ ಕೊಂಡಾಡುತ್ತಿರೋ ಸಿನಿಮಾ. ಬಾಕ್ಸ್ ಆಫೀಸ್‌ನಲ್ಲಿ 1200 ಕೋಟಿ ಗಳಿಕೆ ಮಾಡಿರೋ ಕೆಜಿಎಫ್ 2 ಸಿನಿಮಾವನ್ನ ಪ್ರತಿಯೊಬ್ಬರು ಇಷ್ಟ ಪಟ್ಟಿದ್ದಾರೆ. ಪ್ರತಿ ಕನ್ನಡಿಗನು ಹೆಮ್ಮೆಯಿಂದ ನಮ್ಮ ನೆಲದ ಸಿನಿಮಾ ವಿಶ್ವದಾದ್ಯಂತ ಹೆಸರು ಮಾಡುತ್ತಿರೋದನ್ನ ಕಂಡು ಸಂಭ್ರಮಿಸುತ್ತಿದ್ದಾರೆ. ನಟ ಕಿಚ್ಚ ಸುದೀಪ್ ಕೂಡ ಕೆಜಿಎಫ್ 2 ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಕಿಚ್ಚ ಸುದೀಪ್ ಇತ್ತೀಚಿಗಷ್ಟೇ ದುಬೈಗೆ ಭೇಟಿ ಕೊಟ್ಟಿದ್ದರು. ತಮ್ಮ ವಿಕ್ರಾಂತ್ ರೋಣ ಸಿನಿಮಾದ ಪ್ರಚಾರದ ಪ್ಲಾನಿಂಗ್‌ಗಾಗಿ ಕಿಚ್ಚ ದುಬೈಗೆ ಹೋದಾಗ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ರು ಆ ಸಮಯದಲ್ಲಿ ಕೆಜಿಎಫ್ 2 ಬಗ್ಗೆ ಮಾತನಾಡಿದ್ದಾರೆ. 

ದುಬೈನಲ್ಲಿ ನಡೆದ ಸಂದರ್ಶನದಲ್ಲಿ ರ್ಯಾಪಿಡ್ ಫೈಯರ್ ರೌಂಡ್ ನಲ್ಲಿ ಕಿಚ್ಚನಿಗೆ ಆರ್‌ಆರ್‌ಆರ್ ಹಾಗೂ ಕೆಜಿಎಫ್ ಎಂದು ಎರಡು ಆಯ್ಕೆಯನ್ನ ನೀಡಲಾಗುತ್ತೆ. ಅದರಲ್ಲಿ ಕಿಚ್ಚ ಕೆಜಿಎಫ್ ಚಿತ್ರವನ್ನ ಆಯ್ಕೆ ಮಾಡಿಕೊಳ್ಳುವ ಮೂಲಕ ಕನ್ನಡ ಸಿನಿಮಾರಂಗದ ಒಗ್ಗಟ್ಟನ್ನ ಎತ್ತಿ ಹಿಡಿದಿದ್ದಾರೆ. ಕೆಜಿಎಫ್ 2 ಬಿಡುಗಡೆ ಸಮಯದಲ್ಲಿ ಕಿಚ್ಚ ಸುದೀಪ್ ಅವರ ಹಳೆ ವಿಡಿಯೋವೊಂದು ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಕೆಜಿಎಫ್ ಚಿತ್ರದ ಬಗ್ಗೆ ಕಿಚ್ಚನಿಗೆ ಮಾಧ್ಯಮದವ್ರು ಪ್ರಶ್ನೆ ಕೇಳಿದ್ರು ಅದಕ್ಕೆ ಕಿಚ್ಚ ನೇರ ನೇರವಾಗಿ ನಾನು ಆ ಸಿನಿಮಾದಲ್ಲಿ ಇಲ್ಲ ಎಂದಿದ್ರು. 

Kichcha Sudeep: ವಿಕ್ರಾಂತ್ ರೋಣ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಡೈಲಾಗ್.!

ಆಗ ಕಿಚ್ಚನ ಮೇಲೆ ಯಶ್ ಅಭಿಮಾನಿಗಳು ಗರಂ ಆಗಿದ್ರು. ಆನಂತರ ಆ ವಿಡಿಯೋ ಹಳೆಯದ್ದು ಅನ್ನೋದು ಕೂಡ ಗೊತ್ತಾಯ್ತು. ಆದ್ರೆ ಈಗ ಕಿಚ್ಚ ತಾನು ವರ್ಕ್ ಮಾಡಿರೋ ನಿರ್ದೇಶಕರ ಸಿನಿಮಾವನ್ನ ಮೆಚ್ಚಿಕೊಳ್ಳದೆ ಕನ್ನಡದ ಕೆಜಿಎಫ್ ಸಿನಿಮಾವನ್ನ ಆಯ್ಕೆ ಮಾಡಿಕೊಂಡಿರುವುದಕ್ಕೆ ಕನ್ನಡ ಸಿನಿ ಪ್ರೇಮಿಗಳಿಗೆ ಖುಷಿ ಕೊಟ್ಟಿದೆ. ಇದಷ್ಟೆ ಅಲ್ಲದೆ ಕಿಚ್ಚ ಸುದೀಪ್ ದುಬೈನಲ್ಲಿ ಕ್ರಿಕೆಟ್, ಲೈಫ್‌ಸ್ಟೈಲ್, ಸಿನಿಮಾ ಹೀಗೆ ಬೇರೆ ಬೇರೆ ಕ್ಷೇತ್ರದ ವಿಚಾರದ ಬಗ್ಗೆ ಮಾತನಾಡಿದ್ದಾರೆ ಅದ್ರ ಝಲಕ್ ನೀವು ಒಮ್ಮೆ ನೋಡಿ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
Read more