ಇದೆಂಥಾ ಪದ್ಧತಿ! ದಲಿತ ಎನ್ನುವ ಕಾರಣಕ್ಕೆ ಊರಿನೊಳಗೆ ಬರದಂತೆ ತಡೆದ ಗ್ರಾಮಸ್ಥರು!

Sep 17, 2019, 10:36 AM IST

ಜನಪ್ರತಿನಿಧಿಗೂ ತಟ್ಟಿದ ಅಸ್ಪೃಶ್ಯತೆಯ ಬಿಸಿ. ಗ್ರಾಮಸ್ಥರ ಮಡಿವಂತಿಕೆಗೆ ಬೆಚ್ಚಿ ಬಿದ್ದರು ಜನನಾಯಕ. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ನಾರಾಯಣ ಸ್ವಾಮಿಗೆ ಗ್ರಾಮಸ್ಥರು ಒಳ ಬರದಂತೆ ನಿರ್ಬಂಧ ಹೇರಿದ್ದಾರೆ. ಗ್ರಾಮದ ಗಡಿಯಲ್ಲೇ ಸಂಸದರ ಕಾರು ತಡೆದಿದ್ದಾರೆ. ಪಾವಗಡ ತಾಲೂಕಿನ ಪರಮನಹಳ್ಳಿ ಗೊಲ್ಲರಹಟ್ಟಿಯಲ್ಲಿ ಈ ಘಟನೆ ನಡೆದಿದೆ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ನಾರಾಯಣ ಸ್ವಾಮಿ ಬಂದಿದ್ದರು. ಈ ಗ್ರಾಮಕ್ಕೆ ಯಾವುದೇ ದಲಿತರಿಗೆ ಪ್ರವೇಶವಿಲ್ಲ.