ಬೆಂಗಳೂರು ಬೆಂಕಿಯ ಹಿಂದೆ ನಿಗೂಢ ಪೊಲಿಟಿಕಲ್ ಗೇಮ್..!

Aug 13, 2020, 12:15 PM IST

ಬೆಂಗಳೂರು(ಆ.13): ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ರಾಜ್ಯರಾಜಧಾನಿ ಬೆಂಗಳೂರಿಗೆ ಬೆಂಕಿ ಇಟ್ಟರಾ ಪುಂಡರು ಎನ್ನುವ ಅನುಮಾನ ಶುರುವಾಗಿದೆ. ಭಸ್ಮವಾಗಬೇಕಿದ್ದ ಶಾಸಕರ ಕುಟುಂಬ ಬಚಾವಾಗಿದ್ದೇ ಒಂದು ವಿಸ್ಮಯ.

ಕೊರೋನಾ ಆತಂಕದಿಂದಾಗಿ ಸೈಲೆಂಟ್‌ ಆಗಿದ್ದ ಸಿಲಿಕಾನ್ ಸಿಟಿಯಲ್ಲಿ ಸಡನ್ ಆಗಿ ಬೆಂಕಿಯ ಕಿಡಿ ಹತ್ತಿಕೊಂಡು ಬಿಡ್ತು. ಕೆ.ಜೆ ಹಳ್ಳಿ, ಡಿ.ಜೆ. ಹಳ್ಳಿ ಹಾಗೂ ಕಾವಲ್‌ಭೈರಸಂದ್ರದಲ್ಲಿ ಕೇವಲ ಮೂರೇ ಗಂಟೆ ನಡೆದ ಬೆಂಕಿ ಅನಾಹುತ ಇಡೀ ಬೆಂಗಳೂರು ಮಂದಿಯನ್ನೇ ಬೆಚ್ಚಿ ಬೀಳಿಸಿ ಬಿಡ್ತು.

ಬೆಂಗಳೂರು ಗಲಭೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್: ನವೀನ್ ಹತ್ಯೆಗೆ ಸಂಚು?

ಕಿರಾತಕನ ಖತರ್‌ನಾಕ್‌ ಪ್ಲಾನ್‌ಗೆ ಬೆಂಗಳೂರು ಅಕ್ಷರಶಃ ಹೊತ್ತಿ ಉರಿದಿದೆ. ನವರಂಗಿ ನವೀನ್, ದುರುಳ ಪಾಷಾ ಈ ಇಬ್ಬರಲ್ಲಿ ಅಸಲಿ ಭಸ್ಮಾಸುರ ಯಾರು?