ಅನರ್ಹ ಶಾಸಕರನ್ನು ತ್ಯಾಗ-ಬಲಿದಾನ ನೀಡೋ ಸೈನಿಕರಿಗೆ ಹೋಲಿಸಿದ ರೇಣುಕಾಚಾರ್ಯ!

Sep 7, 2019, 4:38 PM IST

ದಾವಣಗೆರೆ (ಸೆ.07): ಪ್ರವಾಹ ಸಂದರ್ಭದಲ್ಲಿ ನೀರಿಲ್ಲದ ಕಡೆ ತೆಪ್ಪಕ್ಕೆ ಹುಟ್ಟುಹಾಕಿ ನಗೆಪಾಟಲಿಗೀಡಾಗಿದ್ದ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮತ್ತೆ ತಪ್ಪು ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಅನರ್ಹ ಶಾಸಕರಿಗೆ ಬಿಜೆಪಿ ಸರ್ಕಾರ ರಚನೆಯ ಕ್ರೆಡಿಟ್ ಕೊಡುವ ಭರದಲ್ಲಿ ಅವರನ್ನು ದೇಶಕ್ಕಾಗಿ ಪ್ರಾಣತೆತ್ತ ಸ್ವಾತಂತ್ಯ ಸೇನಾನಿಗಳಿಗೆ ಹೋಲಿಸಿದ್ದಾರೆ. ಬನ್ನಿ ಈ ಬಾರಿ ಅವರೇನು ಹೇಳಿದ್ದಾರೆ ನೋಡೋಣ...