ಇದೆಂಥಾ ದುಸ್ಸಾಹಸ! ಮಾರಣಾಂತಿಕ ನೆರೆಯಲ್ಲಿ ಈಜಲು ಹೋದ ವ್ಯಕ್ತಿ ಕಣ್ಮರೆ

Aug 12, 2019, 12:21 PM IST

ಉಕ್ಕಿ ಹರಿಯುವ ಕಪಿಲೆಯಲ್ಲಿ ಈಜುವ ದುಸ್ಸಾಹಸ ಮಾಡಿ ನದಿಗೆ ಹಾರಿದ್ದ ವೆಂಕಟೇಶ್ ಎಂಬುವವರು ಕಣ್ಮರೆಯಾಗಿದ್ದಾರೆ. 24 ಗಂಟೆಯಾದರೂ ವ್ಯಕ್ತಿ ಪತ್ತೆಯಾಗಿಲ್ಲ. ದಯವಿಟ್ಟು ಇಂತಹ ಸಾಹಸಕ್ಕೆ ಕೈ ಹಾಕಬೇಡಿ ಎಂದು ಎಷ್ಟೇ ಮನವಿ ಮಾಡಿಕೊಂಡರೂ ಕಿವಿಗೊಡುತ್ತಿಲ್ಲ. ವೆಂಕಟೇಶ್ ರಕ್ಷಣೆಗೆ ಸ್ಥಳೀಯರು ಯತ್ನಿಸಿದರೂ ಸಾಧ್ಯವಾಗಿಲ್ಲ. ಇದುವರೆಗೂ ವೆಂಕಟೇಶ್ ಸುಳಿವು ಸಿಕ್ಕಿಲ್ಲ.  ಎಲ್ಲರೂ ಪ್ರವಾಹದಿಂದ ಬದುಕಲು ನೋಡಿದರೆ ಈ ವ್ಯಕ್ತಿ ಮಾತ್ರ ತುಂಬಿ ಹರಿಯುವ ನದಿಗೆ ಹಾರಿ ದುಸ್ಸಾಹಸ ಮೆರೆದಿದ್ದಾರೆ.