ಚಿಕ್ಕಮಗಳೂರು (ಸೆ.13) : ಗಣಪತಿ ವಿಸರ್ಜನೆ ವೇಳೆ ಸಚಿವ ಸಿ.ಟಿ. ರವಿ ಯುವಕರೊಂದಿಗೆ ಸೇರಿ ಸಖತ್ ಡ್ಯಾನ್ಸ್ ಮಾಡಿದರು. ಜೈ ಶ್ರೀರಾಮ್ ಡಿಜೆ ಸಾಂಗ್ಗೆ ನೂರಾರು ಯುವಕರೊಂದಿಗೆ ಸೇರಿ ಸಿ.ಟಿ ರವಿ ಕೂಡಾ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಚಿಕ್ಕಮಗಳೂರು ನಗರದ ಓಂಕಾರೇಶ್ವರ ಸನ್ನಿಧಿಯಲ್ಲಿ ಹಿಂದೂ ಮಹಾಸಭಾ ಪ್ರತಿಷ್ಠಾಪಿಸಿದ್ದ ಗಣಪತಿ ವಿಸರ್ಜನೆ ವೇಳೆ ಸಚಿವರ ಭರ್ಜರಿ ಸ್ಟೆಪ್ಸ್ ನೋಡಿ, ಯುವಕರು ಕೂಡಾ ಹುಚ್ಚೆದ್ದು ಕುಣಿದರು.