ಪ್ರೇಮಿಗಾಗಿ ಸರ್ವಸ್ವವನ್ನೇ ಕೊಟ್ಟ 25ರ ಯುವತಿ! ಆಕೆ ಗರ್ಭಿಣಿ ಎಂದು ತಿಳಿಯುತ್ತಿದ್ದಂತೆಯೇ ಕೈಕೊಟ್ಟ ಲವರ್ ಬಾಯ್!

ಪ್ರೇಮಿಗಾಗಿ ಸರ್ವಸ್ವವನ್ನೇ ಕೊಟ್ಟ 25ರ ಯುವತಿ! ಆಕೆ ಗರ್ಭಿಣಿ ಎಂದು ತಿಳಿಯುತ್ತಿದ್ದಂತೆಯೇ ಕೈಕೊಟ್ಟ ಲವರ್ ಬಾಯ್!

Published : Nov 10, 2025, 07:38 PM IST
ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಗೆ ಪ್ರಿಯಕರ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ. ಆಕೆ ಗರ್ಭಿಣಿ ಎಂದು ತಿಳಿದಾಗ ಮದುವೆಗೆ ನಿರಾಕರಿಸಿದ್ದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನಲ್ಲಿ ನಡೆದಿದೆ.

ಅವರಿಬ್ಬರೂ ಕಳೆದ ನಾಲ್ಕು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ನಿನ್ನನ್ನೇ ಮದುವೆಯಾಗ್ತೇನೆ ಅಂತ ಹುಡುಗ ಹುಡುಗಿಗೆ ಪ್ರಾಮೀಸ್ ಕೂಡಾ ಮಾಡಿದ್ದ, ಅದನ್ನು ನಂಬಿದ ಆಕೆ ಕೊನೆಗೆ ಅನುಭವಿಸಿದ್ದು ಮಾತ್ರ ದುರಂತ.

ಪ್ರಿಯಕರನ ಬಣ್ಣ ಬಣ್ಣದ ಮಾತುಗಳನ್ನ ನಂಬಿ ಸರ್ವಸ್ವವನ್ನೂ ಒಪ್ಪಿಸಿದ ಚೆಲುವೆ, ಆತನ ಮೋಸದಾಟಕ್ಕೆ ಬಲಿಯಾಗಿ ಹೆಣವಾಗಿದ್ದಾಳೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕುದರಿಹಾಳ ಗ್ರಾಮದ 25 ವರ್ಷ ವಯಸ್ಸಿನ ಸಿಂಧು ಪ್ರೀತಿ ಪಾಶಕ್ಕೆ ಸಿಲುಕಿ ಜೀವಬಿಟ್ಟ ದುರ್ದೈವಿ.

ಸಿಂಧು ಮೂಲತಃ ಬ್ಯಾಡಗಿ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದ ನಿವಾಸಿ. ತನ್ನ ಅಜ್ಜ ಅಜ್ಜಿ ಜೊತೆಗೆ ರಾಣೆಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದಲ್ಲಿ ವಾಸವಿದ್ದಳು. ಸಿಂಧುಗೆ ತನ್ನ ಗೆಳತಿ ಮೂಲಕ ಪರಿಚಯವಾದವನೇ ಈತ ಶರತ್​​. ಇವರಿಬ್ಬರ ಪರಿಚಯ ಪ್ರೀತಿಗೆ ತಿರುಗಿ ನಾಲ್ಕು ವರ್ಷ ಜತೆಯಲ್ಲಿ ಸುತ್ತಾಡಿದ್ರು. ಮದುವೆ ಆಗುವುದಾಗಿ ನಂಬಿಸಿ ಆಕೆ ಜತೆ ದೈಹಿಕ ಸಂಪರ್ಕ ಮಾಡಿದ್ದಾನೆ. ಆದ್ರೆ ಅದ್ಯಾವಾಗ ಸಿಂಧು ಮೂರು ತಿಂಗಳ ಗರ್ಭಿಣಿ ಅಂತಾ ಗೊತ್ತಾಯ್ತೋ ಶರತ್​ ಉಲ್ಟಾ ಹೊಡೆದಿದ್ದಾನೆ. ಮದುವೆಯಾಗಲ್ಲ ಅಂತಾ ಕ್ಯಾತೆ ತೆಗೆದಿದ್ದಾನೆ. ಇದ್ರಿಂದ ಮನನೊಂದ ಸಿಂಧು ನಿನ್ನೆ ಮನೆಯಲ್ಲೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ.

53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
03:18ಜಗತ್ತನ್ನೇ ಕಂಗೆಡಿಸಿದ ಇಸ್ರೇಲ್-ಇರಾನ್ ಯುದ್ಧಕ್ಕೆ ಒಂದು ತಿಂಗಳು: ಮುಂದುವರಿದ ಭೀಕರ ಸಂಘರ್ಷ
25:43ಯುದ್ಧದ ಚಿತೆ ಮೇಲೆ ಹಣದ ಸಾಮ್ರಾಜ್ಯ ಕಟ್ಟಿದ ಸಾವಿರಾರು ಕೋಟಿಯ ಮೂವರು ವ್ಯಕ್ತಿಗಳ ಕಥೆ
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
20:34ಭಸ್ಮಾಸುರನ ಗರ್ವಭಂಗ! ಇರಾನ್ ಎದುರು ಹೆಜ್ಜೆ ಹಿಂದಿಟ್ಟಿದ್ದೇಕೆ ಟ್ರಂಪ್? ನಿಗೂಢಾಸ್ತ್ರಕ್ಕೆ ಹೆದರಿದನಾ ದೊಡ್ಡಣ್ಣ?
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
20:31Israel's role in Iran conflict ಹಾರ್ಮುಜ್ ಹಸ್ತಕ್ಷೇಪ; ಇರಾನ್ ಕೊರಳಿಗೆ 22 ರಾಷ್ಟ್ರಗಳ ಉರುಳು!
Read more