ನಂದಮೂರಿ ತಾರಕ ರತ್ನ ನೋಡಲು ಬೆಂಗಳೂರಿಗೆ ಆಗಮಿಸಿದ ಜ್ಯೂ. ಎನ್‌ಟಿಆರ್‌

Jan 29, 2023, 2:03 PM IST

ತೆಲುಗು ಚಿತ್ರ ನಟ ನಂದ ಮೂರಿ ತಾರಕ ರತ್ನ ಹೃದಯಘಾತಕ್ಕೆ ಒಳಗಾಗಿದ್ದು ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜನವರಿ 27ರಂದು ತಡ ರಾತ್ರಿ ಆಂಧ್ರದ ಕುಪ್ಪಂನ ಪಿಇಎಸ್‌ ವೈದ್ಯಕೀಯ ಕಾಲೇಜ್‌ನಿಂದ ಬೆಂಗಳೂರಿಗೆ ಶಿಫ್ಟ್‌ ಮಾಡಲಾಗಿತ್ತು. ತಾರಕ ರತ್ನ ನೋಡಲು ಸಹೋದರ ಜ್ಯೂನಿಯರ್ ಎನ್‌ಟಿಆರ್‌ ಫ್ಯಾಮಿಲಿ ಬೆಂಗಳೂರಿಗೆ ಆಗಮಿಸಿದ್ದಾರೆ. ರಾಮ್‌ ಜೊತೆ ಆರೋಗ್ಯ ಸಚಿವ ಸುಧಾಕರ್ ಮತ್ತು ಕನ್ನಡದ ನಟ ಶಿವರಾಜ್‌ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.