ಕೋಮು ಸೌಹಾರ್ದತೆಗೆ ಸಾಕ್ಷಿ! ಕ್ರಿಸ್ತ ಭಕ್ತನಿಂದ ಸಿದ್ದಿ ವಿನಾಯಕ ದೇವಾಲಯ ನಿರ್ಮಾಣ

Jul 21, 2021, 10:37 AM IST

ಉಡುಪಿ (ಜು. 21): ಸಂಘರ್ಷದ ಗದ್ದಲಗಳ ನಡುವೆ, ಸಾಮರಸ್ಯದ ಕತೆಗಳು ತೆರೆಯ ಮರೆಗೆ ಸರಿಯೋದೇ ಹೆಚ್ಚು. ಅದರಲ್ಲೂ ಕರಾವಳಿ ಜಿಲ್ಲೆಗಳು ಕೋಮು ಸಂಘರ್ಷದ ಕಾರಣಕ್ಕೇನೇ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತೆ. ಕೋಮು ಸೌಹಾರ್ದದ ಘಟನೆಗಳು  ಸದಿಲ್ಲದೇ ಮುದುಡಿ ಹೋಗುತ್ತೆ. ಆದರೆ ಇದು  ಹಿಂದೂ, ಕ್ರೈಸ್ತ ಮುಸಲ್ಮಾನರ ಸಹಬಾಳ್ವೆಯ ಸುದ್ದಿ ಇದು. 

ಉಡುಪಿ : ಕ್ರೈಸ್ತ ಭಕ್ತನಿಂದ ಸಿದ್ದಿ ವಿನಾಯಕ ದೇವಾಲಯ ನಿರ್ಮಾಣ..!

ಶಿರ್ವ- ಮೂಡುಬೆಳ್ಳೆ ಕ್ರಾಸ್ ರಸ್ತೆ ಜಂಕ್ಷನ್‌ನಲ್ಲಿ ಉದ್ಯಮಿ ನಜ್ರೆತ್ ಅವರು ತಮ್ಮ ಮಾತಾಪಿತರ ನೆನಪಿಗಾಗಿ ಸುಮಾರು 1.5 ಕೋಟಿ ರೂ ವೆಚ್ಚದಲ್ಲಿ ಶ್ರೀ ಸಿದ್ದಿ ವಿನಾಯಕ ದೇವಾಲಯವನ್ನು ಪ್ರತಿಷ್ಠಾಪಿಸಿದ್ದಾರೆ.