Belagavi: ಮೈನವಿರೇಳಿಸಿದ ಇಂಡೋ - ಜಪಾನೀಸ್‌ ಜಂಟಿ ಸಮರಾಭ್ಯಾಸ

Belagavi: ಮೈನವಿರೇಳಿಸಿದ ಇಂಡೋ - ಜಪಾನೀಸ್‌ ಜಂಟಿ ಸಮರಾಭ್ಯಾಸ

Published : Mar 11, 2022, 01:43 PM ISTUpdated : Mar 11, 2022, 02:02 PM IST

ಬೆಳಗಾವಿಯಲ್ಲಿ ಭಾರತ ಮತ್ತು ಜಪಾನ್ ಯೋಧರಿಂದ ನಡೆಯುತ್ತಿರುವ ಜಂಟಿ ಮಿಲಟರಿ ಸಮರಾಭ್ಯಾಸದಲ್ಲಿ ಮಹತ್ವದ ತಾಲೀಮು ನಡೆಸಲಾಯಿತು. ಇದೇ ಮೊದಲ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನ ಸಹಾಯದಿಂದ ಭಯೋತ್ಪಾದಕರ ಅಡಗು ತಾಣಗಳಿಗೆ ನುಗ್ಗಿ ಒತ್ತೆಯಾಳುಗಳ ರಕ್ಷಣಾ ಕಾರ್ಯಾಚರಣೆ ತರಬೇತಿ ಮೈನವಿರೇಳಿಸುವಂತಿತ್ತು. 

ಬೆಳಗಾವಿ (ಮಾ. 11): ಭಾರತ ಮತ್ತು ಜಪಾನ್ ಯೋಧರಿಂದ ನಡೆಯುತ್ತಿರುವ ಜಂಟಿ ಮಿಲಟರಿ ಸಮರಾಭ್ಯಾಸದಲ್ಲಿ ಇಂದು ಮಹತ್ವದ ತಾಲೀಮು ನಡೆಸಲಾಯಿತು. ಇದೇ ಮೊದಲ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನ ಸಹಾಯದಿಂದ ಭಯೋತ್ಪಾದಕರ ಅಡಗು ತಾಣಗಳಿಗೆ ನುಗ್ಗಿ ಒತ್ತೆಯಾಳುಗಳ ರಕ್ಷಣಾ ಕಾರ್ಯಾಚರಣೆ ತರಬೇತಿ ಮೈನವಿರೇಳಿಸುವಂತಿತ್ತು. 
 
ಬೆಳಗಾವಿಯ ಮರಾಠಾ ಲಘುಪದಾತಿ ದಳದಲ್ಲಿ ಭಾರತ ಜಪಾನ್ ಯೋಧರ ಜಂಟಿ ಸಮರಾಭ್ಯಾಸ ಮುಂದುವರಿದಿದೆ. ನಿನ್ನೆ ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲಿ ಹೆಲಿಕಾಪ್ಟರ್ ನಿಂದ ಉಗ್ರರ ಅಡಗುತಾಣಗಳ ಬಳಿ ಯೋಧರು ಆಗಮಿಸುವ ಬಗ್ಗೆ ತಾಲೀಮು ನಡೆಸಿದ್ರು. ಇಂದು ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡಿ ಒತ್ತೆಯಾಳಾಗಿರಿಸಿಕೊಂಡ  ಗ್ರಾಮಸ್ಥರನ್ನು ರಕ್ಷಿಸುವ ರೆಸ್ಕ್ಯೂ ಆಪರೇಷನ್ ರಣರೋಚಕವಾಗಿತ್ತು. ವಿಶೇಷ ಅಂದ್ರೆ ಇದೇ ಮೊದಲ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಉಗ್ರರ ಅಡಗುತಾಣಗಳ ಪತ್ತೆ ಹಚ್ಚೋದು ಹೇಗೆ ಹಾಗೂ ಆ ಅಡಗುತಾಣಗಳ ಮೇಲೆ ದಾಳಿ ಮಾಡಿ ಉಗ್ರರು ಒತ್ತೆಯಾಳಾಗಿರಿಸಿಕೊಂಡ ನಾಗರಿಕರ ರಕ್ಷಿಸುವುದು ಹೇಗೆ ಎಂಬ ಬಗ್ಗೆ ಭಾರತ್ ಜಪಾನ್ ಯೋಧರು ಜಂಟಿ ರಕ್ಷಣಾ ಕಾರ್ಯಾಚರಣೆ ಡೆಮೋ ಮಾಡಿ ತೋರಿಸಿದ್ರು. ಕಾನ್ಪುರ್‌ನ ಐಐಟಿ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ಹೆಲಿಕಾಪ್ಟರ್ ಡ್ರೋನ್, ಡ್ರೋನ್ ಸರ್ವಲೆನ್ಸ್ ಕ್ಯಾಮರಾ ಸಹಾಯದಿಂದ ಉಗ್ರರ ಅಡಗುತಾಣಗಳ ಪತ್ತೆ ಮಾಡೋದು ಹೇಗೆ ಎಂಬ ಅಣಕು ಪ್ರದರ್ಶನ ನಡೆಸಲಾಯಿತು. 

ಗ್ರೆನೇಡ್ ಸ್ಫೋಟಿಸಿ ಉಗ್ರರು ಅಡಗಿ ಕುಳಿತ ಮನೆಯ ಬಾಗಿಲು ಧ್ವಂಸ ಮಾಡಿ ಮನೆಯೊಳಗೆ ಎಂಟ್ರಿಯಾಗುವುದು, ಮನೆಯಲ್ಲಿದ್ದ ಉಗ್ರರ ಸದೆಬಡಿದು ಒತ್ತೆಯಾಳಾಗಿ ಇರಿಸಿಕೊಂಡ ನಾಗರಿಕರ ರಕ್ಷಣೆ ಮಾಡೋದು.. ಒಂದೊಂದು ದೃಶ್ಯವೂ ಮೈಜುಮ್ಮೆನಿಸುವಂತಿತ್ತು.  ಭಾರತ ಜಪಾನ್ ಯೋಧೆ ಜಂಟಿ ಸಮರಾಭ್ಯಾಸ ಕಳೆದ 10 ದಿನಗಳಿಂದ ನಡೆಯುತ್ತಿದ್ದು ಸಮರಾಭ್ಯಾಸ ಕೊನೆಯ ಹಂತಕ್ಕೆ ತಲುಪಿದೆ. ಭಯೋತ್ಪಾದರ ಅಡಗು ತಾಣಗಳಿಗೆ ತಂತ್ರಜ್ಞಾನ ಬಳಕೆ ಮಾಡಿಕೊಂಡು ಹೇಗೆ ನುಗ್ಗುವುದು, ಅವರನ್ನ ಸದೆ ಬಡೆಯುವುದು ಹೇಗೆ ಅನ್ನೋ ತಾಲೀಮು ನಡೆಸಲಾಯಿತು. ಭಾರತೀಯ ಸೇನೆಯ ಮರಾಠಾ ಲೈಟ್ ಇನ್ಪಂಟ್ರಿ ರೆಜಿಮೆಂಟ್ ಹಾಗೂ ಜಪಾನ್ ಸೇನೆಯ ತಲಾ ನಲವತ್ತು ಯೋಧರು ಮೂರು ತಂಡಗಳನ್ನು ಮಾಡಿಕೊಂಡು ಒಂದೊಂದು ಕಡೆಯಿಂದ ಎಂಟ್ರಿಯಾಗಿ ಕಾರ್ಯಾಚರಣೆಯ ತಾಲೀಮು ನಡೆಸಿದ್ರು. ಇದಕ್ಕೂ ಮುನ್ನ ಡ್ರೋಣ್ ಕ್ಯಾಮರಾಗಳ ಮೂಲಕ ಭಯೋತ್ಪಾದಕರ ಅಡಗು ತಾಣಗಳಲ್ಲಿನ ಚಲನವಲನವನ್ನ ಗಮನಿಸಲಾಯಿತು. ಇದಾದ ಬಳಿಕ ಪಕ್ಷಿ ಮಾದರಿಯಲ್ಲಿರುವ ಡ್ರೋಣ್‌ನ್ನು ಉಗ್ರರು ಅವಿತು ಕುಳಿತ ಮನೆಯೊಳಗೆ ಬಿಟ್ಟು ಎಷ್ಟು ಉಗ್ರರಿದ್ದಾರೆ, ಆ ಉಗ್ರರ ಬಳಿ ಯಾವೆಲ್ಲ ಶಸ್ತ್ರಾಸ್ತ್ರಗಳಿವೆ? ಉಗ್ರರು ಒತ್ತೆಯಾಳಾಗಿರಿಸಿಕೊಂಡ ನಾಗರಿಕರು ಎಷ್ಟು ಜನರಿದ್ದಾರೆ ಎಂಬ ಮಾಹಿತಿ ಪಡೆಯುವುದು ಹೇಗೆ ಎಂಬ ತರಬೇತಿ ನೀಡಲಾಯಿತು‌.

ಇನ್ನೂ ಧರ್ಮ ಗಾರ್ಡಿಯನ್ 2022 ಕಾರ್ಯಕ್ರಮದ ಹೆಸರಲ್ಲಿ ಈ ಸಮರಾಭ್ಯಾಸ ನಡೆಯುತ್ತಿದೆ. ಭಾರತೀಯ ಸೇನೆಯ 15ನೇ ಬೆಟಾಲಿಯನ್ ನ ಮರಾಠ ಲೈಟ್ ಇನ್ಫಂಟ್ರಿ ರೆಜಿಮೆಂಟ್ ಮತ್ತು ಜಪಾನ್ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್ ನ 30ನೇ ದಳದ ಯುದ್ಧ ಅನುಭವಿ ಪಡೆಗಳು ಸಮರಾಭ್ಯಾಸದಲ್ಲಿ ಭಾಗಿಯಾಗಿದ್ದಾರೆ. 
 

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more