ನೀರು ನೋಡಲು ಹೊರ ಬಂದವನು ಮರಳಿ ಮನೆಗೆ ಬರಲೇ ಇಲ್ಲ: ಕಣ್ಣು ಮಿಟುಕಿಸಿದಾಗ ಚಿಗುರಿದ್ಧ ಆಸೆ ಈಡೇರಲೇ ಇಲ್ಲ!

ನೀರು ನೋಡಲು ಹೊರ ಬಂದವನು ಮರಳಿ ಮನೆಗೆ ಬರಲೇ ಇಲ್ಲ: ಕಣ್ಣು ಮಿಟುಕಿಸಿದಾಗ ಚಿಗುರಿದ್ಧ ಆಸೆ ಈಡೇರಲೇ ಇಲ್ಲ!

Published : Oct 18, 2024, 01:07 PM IST

ಮಳೆಯಲ್ಲಾ ಇದು ಮೃತ್ಯುಮಳೆ.. ವರುಣನ ರೌದ್ರಾವತಾರಕ್ಕೆ ಬೆಚ್ಚಿ ಬಿದ್ದಿದ್ದ ಕರುನಾಡಿನಲ್ಲೀಗ ಪುಟ್ಟ ಜೀವಗಳ ಸಾವಿನ ಶೋಕ.. ಒಂದು ಕಡೆ ಮಳೆ ನೀರ ನೋಡಲು ಹೋದ ಬಾಲಕ ಮರಳಿ ಮನೆಗೆ ಬರಲೇ ಇಲ್ಲ. 

ಮಳೆಯಲ್ಲಾ ಇದು ಮೃತ್ಯುಮಳೆ.. ವರುಣನ ರೌದ್ರಾವತಾರಕ್ಕೆ ಬೆಚ್ಚಿ ಬಿದ್ದಿದ್ದ ಕರುನಾಡಿನಲ್ಲೀಗ ಪುಟ್ಟ ಜೀವಗಳ ಸಾವಿನ ಶೋಕ.. ಒಂದು ಕಡೆ ಮಳೆ ನೀರ ನೋಡಲು ಹೋದ ಬಾಲಕ ಮರಳಿ ಮನೆಗೆ ಬರಲೇ ಇಲ್ಲ. ಇನ್ನೊಂದು ಕಡೆ ಆಟವಾಡ್ತಿದ್ದ ಪುಟ್ಟ ಕಂದನ ಹೆಗಲೇರಿಬಿಟ್ಟಿದ್ದ ಜವರಾಯ. ಬಾಳಿ ಬದುಕಬೇಕಿದ್ದ ಜೀವಗಳು ಮತ್ತೆಂದು ಬಾರದ ಲೋಕಕ್ಕೆ ಹೋಗಿವೆ. ಪೋಷಕರ ಬೆಟ್ಟದಷ್ಟು ಕನಸುಗಳು ಛಿದ್ರ ಛಿದ್ರವಾಗಿದೆ. ಈಗ ಉಳಿದಿರೋದು ಕೇವಲ ನೋವು… ಶೋಕ.. ಆಕ್ರಂದನ.. ಜೊತೆಗೆ ಒಂದಿಷ್ಟು ಆಕ್ರೋಶ. ಇದೇ ಹೊತ್ತಿನ ವಿಶೇಷ ಮೃತ್ಯು ಮಳೆ.. ಹುಷಾರು ಮಕ್ಕಳೇ. ಹಾವೇರಿಯ ಬಾಲಕನ ಸಾವಿನ ಜೊತೆಗೆ ವಿಜಯಪುರದಲ್ಲಿ ಪುಟ್ಟ ಕಂದಮ್ಮವೊಂದು ರಣಮಳೆಗೆ ಬಲಿಯಾಗಿದೆ. 

ಹಾವೇರಿಯಲ್ಲಿ 10 ವರ್ಷದ ಬಾಲಕ ಚರಂಡಿಗೆ ಬಿದ್ದು ಸಾವಪ್ಪಿದ್ರೆ ವಿಜಯಪುರದಲ್ಲಿ ಮೃತ್ಯುಮಳೆ ಬಲಿ ಪಡೆದಿರೋದು ಪುಟ್ಟ ಕಂದನನ್ನ. ಇಲ್ಲಿಯೂ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣಿಸ್ತಿದೆ ಅದೇ ಕಾರಣಕ್ಕೆ ಪೋಷಕರು ಹಾಗೂ ಸ್ಥಳೀಯರು ಆಕ್ರೋಶ ಹೊರಹಾಕ್ತಿದ್ದಾರೆ. ಹೀಗೆ, ಮೃತ್ಯುಮಳೆಗೆ ಎರಡು ಜೀವಗಳು ಬಲಿಯಾಗಿದ್ರೆ ಮಳೆಯಿಂದ ತತ್ತರಿಸಿರುವ ರಾಜ್ಯರಾಜಧಾನಿ ಇನ್ನೂ ಚೇತರಿಸಿಕೊಂಡಿಲ್ಲ. ಮಳೆ ಕಡಿಮೆಯಾಗಿದ್ರೂ ಅದ್ರ, ಎಫೆಕ್ಟ್ ಇನ್ನೂ ಹೋಗಿಲ್ಲ. ಹಾವೇರಿಯಲ್ಲಿ 10 ವರ್ಷದ ಬಾಲಕ ಮಳೆಗೆ ಬಲಿಯಾಗಿದ್ದಾನೆ. ವಿಜಯಪುರದಲ್ಲಿ 2 ವರ್ಷದ ಪುಟ್ಟ ಕಂದನ ಸಾವಾಗಿದೆ. ಈ ಮಧ್ಯೆ ಕಳೆದ ಮೂರ್ನಾಲ್ಕು ದಿನದಿಂದ ರಣಮಳಗೆ ಸಾಕ್ಷಿಯಾಗಿದ್ದ ಬೆಂಗಳೂರಿನಲ್ಲಿ ಮಳೆಯಬ್ಬರ ಕಡಿಮೆಯಾಗಿದ್ರೂ ಅದು ಕೊಟ್ಟಿರುವ ಪೆಟ್ಟು ಇನ್ನು ವಾಸಿಯಾಗಿಲ್ಲ.

23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
24:04ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!
Read more