Aug 1, 2019, 10:59 AM IST
ಬೆಳಗಾವಿ[ಆ.01]: ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಬರುತ್ತಿದ್ದಂತೆ ಮಳೆ ಬರ್ತಿದೆ ಅಂತೆ. ಹೀಗಂತಾ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಅವರೊಳ್ಳಿ ಗ್ರಾಮದ ವೀರಭದ್ರ ಕಟ್ಟಿ ಎಂಬ ರೈತ ಮಾಡಿರೋ ವಿಡಿಯೋವೊಂದು ವೈರಲ್ ಆಗಿದೆ. ಇಷ್ಟು ದಿನ ಮೈತ್ರಿ ಸರ್ಕಾರ ಇದ್ದ ಕಾರಣ ಮಳೆ ಬರಲಿಲ್ಲ. ರಾಜ್ಯದಲ್ಲಿ ಬಿಜೆಪಿ ಕಮಲ ಅರಳಿದಂತೆಯೇ ಮಳೆಯಾಗಿ ರೈತರ ಮೊಗವು ಅರಳಿದೆ ಎಂದು ಗದ್ದೆಯಲ್ಲಿ ನಿಂತು ಬಿಜೆಪಿ ಸರ್ಕಾರವನ್ನು ಹರಸಿರುವ ವಿಡಿಯೋ ಮಾಡಿದ್ದಾನೆ.