ಕಾಬೂಲಿಗೆ ತಾಲೀಬಾನಿಗಳು ಬಂದ ದಿನ ಏನಾಯ್ತು?  ಉಡುಪಿಗೆ ಬಂದಿಳಿದ ಜಾನ್ ಹೇಳಿದ ಸತ್ಯಗಳು!

Aug 20, 2021, 4:39 PM IST

ಉಡುಪಿ(ಆ. 20)  ಅಫ್ಘಾನಿಸ್ತಾನವವನ್ನು ತಾಲೀಬಾನಿಗಳು ವಶಪಡಿಸಿಕೊಂಡಿದ್ದು ಇಡೀ ರಾಷ್ಟ್ರಕ್ಕೆ ಗೊತ್ತಿದೆ. ತಾಲೀಬಾನಿಗಳು ಕಾಬೂಲ್ ವಿಮಾನ ನಿಲ್ದಾಣಕ್ಕೆ ನುಗ್ಗಿದಾಗ ಏನಾಯಿತು
ಎನ್ನುವುದನ್ನು ಕನ್ನಡಿಗ ಜಾನ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. 

ಭಾರತದಲ್ಲಿದ್ದ ಯುವಕ ತಾಲೀಬಾನಿಗಳ ಜತೆ ಪ್ರತ್ಯಕ್ಷ

ಏರ್ ಲಿಫ್ಟ್ ಮೂಲಕ ದೇಶಕ್ಕೆ ಹಿಂದಿರುಗಿದ ಕನ್ನಡಿಗ ಜಾನ್ ಆ ದಿನದ ಘಟನೆಯನ್ನು ಹೇಳಿದ್ದಾರೆ. ಹದಿನಾಲ್ಕು ವರ್ಷಗಳ ಕಾಲ ಆಪ್ಘನ್ ನಲ್ಲಿದ್ದ ಕನ್ನಡಿಗ ಅಂದಿನ ಕರಾಳ ಚಿತ್ರವನ್ನು ತೆರೆದಿಟ್ಟಿದ್ದಾರೆ. ತಾಲೀಬಾನಿಗಳು ನಾವು ಮೊದಲಿನಂತೆ ಇಲ್ಲ ಎಂದು  ಹೇಳಿದ್ದರೂ ಮುಂದೆ ಯಾವ ಪರಿಸ್ಥಿತಿ ಅಪ್ಘಾನಿಸ್ತಾನಕ್ಕೆ ಬರಲಿದೆ ಎನ್ನುವುದನ್ನು ಕಾದು ನೋಡಬೇಲಿದೆ.