ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಿಹಿ ಸುದ್ದಿ, ತೆರೆಯಲಿದೆ ದೇವಾಲಯದ ಬಾಗಿಲು!

May 12, 2020, 5:35 PM IST

ತಿರುಪತಿ(ಮೇ.12): ಕೊರೋನಾ ವೈರಸ್ ಕಾರಣ ಕಳೆದ ಒಂದೂವರೆ ತಿಂಗಳಿನಿಂದ ತಿರುಪತಿ ತಿಮ್ಮಪ್ಪ ದೇವಸ್ಥಾನ ಬಂದ್ ಮಾಡಲಾಗಿತ್ತು. ಇದೀಗ ಲಾಕ್‌ಡೌನ್ ಸಡಿಲಿಕೆ ಕಾರಣ ತಿಮ್ಮಪ್ಪ ದೇವಸ್ಥಾನ ಬಾಗಿಲು ತೆರಯಲು ಆಡಳಿತ ಮಂಡಳಿ ನಿರ್ಧರಿಸಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಮೇ.17ರ ಬಳಿಕ ದೇವಸ್ಥಾನ ತೆರೆಯಲು ನಿರ್ಧರಿಸಲಾಗಿದೆ.