ಅಖಿಲೇಶ್, ಮಾಯಾ ಆಟ ಮೋದಿಯನ್ನು ಕಟ್ಟಿ ಹಾಕುತ್ತಾ?

Sep 5, 2021, 5:23 PM IST

ನವದೆಹಲಿ(ಸೆ.05) ಎಬಿಪಿ ಹಾಗೂ ಸಿವೋಟರ್‌ ಸಮೀಕ್ಷೆ ಪಂಚರಾಜ್ಯಗಳ ಚುನಾವಣಾ ಭವಿಷ್ಯ ಏನಾಗಬಹುದೆಂಬುವುದನ್ನು ತೆರೆದಿಟ್ಟಿದೆ. ಮೋದಿ, ಯೋಗಿಗೆ ಸಿಹಿ ಕೊಟ್ಟಿರುವ ಈ ಸಮೀಕ್ಷೆ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. 

2022ರಲ್ಲಿ ವಿಧಾನಸಭಾ ಚುನಾವಣೆ ಎದುರಿಸಲಿರುವ ಉತ್ತರಪ್ರದೇಶ, ಪಂಜಾಬ್‌, ಗೋವಾ, ಮಣಿಪುರ ಮತ್ತು ಉತ್ತರಾಖಂಡ ರಾಜ್ಯಗಳ ಜನರ ಮನದಾಳ ತಿಳಿಯಲು ಎಬಿಪಿ ನ್ಯೂಸ್‌- ಸಿ ವೋಟರ್‌ ಸಮೀಕ್ಷೆಯೊಂದನ್ನು ನಡೆಸಿದ್ದು, ಅದರಲ್ಲಿ ಉತ್ತರಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ ನೋಡಿ