ಕುತಂತ್ರಿ ಚೀನಾ ಬಗ್ಗುಬಡಿಯಲು ಪ್ರಧಾನಿ ಮೋದಿಗೆ ಸಿಕ್ತು ದಿವ್ಯಾಸ್ತ್ರ..!

Jun 23, 2020, 12:24 PM IST

ಬೆಂಗಳೂರು(ಜೂ.23): ಕುತಂತ್ರಿ ಚೀನಾಗೆ ಪಾಠ ಕಲಿಸಲು ಪ್ರಧಾನಿ ಮೋದಿ ಯುದ್ದವನ್ನು ಆರಂಭಿಸಿಬಿಟ್ಟಾಗಿದೆ.ಚೀನಾವನ್ನು ಮಣಿಸಲು ಹೊಸ ಹೊಸ ರಣತಂತ್ರಗಳನ್ನು ಹೆಣೆಯುತ್ತಿದ್ದಾರೆ ನರೇಂದ್ರ ಮೋದಿ.

ಜೂನ್ 15ರ ಮಧ್ಯರಾತ್ರಿ ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತ-ಚೀನಿ ಪಡೆಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು. ಈ ಗುದ್ದಾಟದಲ್ಲಿ ಭಾರತದ 20 ಯೋಧರು ವೀರ ಮರಣವನ್ನಪ್ಪಿದ್ದರು. ಇದರ ಬೆನ್ನಲ್ಲೇ ದೇಶಾದ್ಯಂತ ಬಾಯ್ಕಾಟ್ ಚೀನಾ ಘೋಷಣೆ ಮೊಳಗಲಾರಂಭಿಸಿದೆ.

ಚೀನಾ ಭಾರತ ಗಡಿ ಬಿಕ್ಕಟ್ಟಿನ ನಡುವೆ ರಷ್ಯಾ ತಲುಪಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್!

ಇನ್ನು ಇಡೀ ದೇಶದ ಜನರ ಭಾವನೆಗಳಿಗೆ ಪ್ರಧಾನಿ ಮೋದಿ ಸ್ಪಂದಿಸಿದ್ದಾರೆ. ಚೀನಾ ಎನ್ನುವ ರಾಕ್ಷಸನ ಸಂಹಾರಕ್ಕೆ ಭಾರತ ಸಜ್ಜಾಗಿದೆ. ಅಪರೂಪದ ದಿವ್ಯಾಸ್ತ್ರ ಬಳಸಿ ಚೀನಾ ಸಂಹಾರ ಮಾಡಲು ಮೋದಿ ನೇತೃತ್ವದ ಭಾರತ ಸಿದ್ದವಾಗಿದೆ. ಏನದು ದಿವ್ಯಾಸ್ತ್ರ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..