ರಾಹುಲ್ ಗಾಂಧಿ ಆಕಸ್ಮಿಕ ಹಿಂದೂ ಎಂದ ಯೋಗಿ: ಆಪ್ ಕಿ ಅದಾಲತ್‌ನಲ್ಲಿ ಇನ್ನು ಏನೇನು ಹೇಳಿದ್ರು ಯುಪಿ ಸಿಎಂ

May 15, 2024, 8:58 AM IST

ಲೋಕಸಭೆ ಚುನಾವಣೆ ಕಾವು ರಂಗೇರಿರುವ ಈ ಹೊತ್ತಿನಲ್ಲಿ ಉತ್ತರಪ್ರದೇಶದ ಸಿಎಂ ಯೋಗಿ ಆಧಿತ್ಯನಾಥ್ ಅವ್ರ ಆಪ್ ಕಿ ಅದಾಲತ್ ಸಂದರ್ಶನ ಭಾರಿ ಸಂಚಲನವನ್ನ ಸೃಷ್ಟಿಸಿದೆ. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಯೋಗಿ, ಲೋಕಸಭೆ ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್ ಕಣ್ಮರೆಯಾಗುತ್ತೆ, ರಾಹುಲ್‌ ಗಾಂಧಧಿ ದೇಶ ಬಿಟ್ಟು ಪಲಾಯನವಾಗ್ತಾರೆ ಎಂದಿದ್ದಾರೆ. ಅಷ್ಟೆ ಅಲ್ದೆ ಕಾಂಗ್ರೆಸ್ ನಾಯಕ ಮಣಿಶಂಕರ್ ಅವರ ಪಾಕ್ ಬಳಿ ಅಣುಬಾಂಬ್ ಇದೆ ಎಂಬ ಎಚ್ಚರಿಕೆಗೆ ಯೋಗಿ ಆಧಿತ್ಯನಾಥ್ ಕೌಂಟರ್ ಕೊಟ್ಟಿದ್ದು, ನಾವೇನು ಫ್ರಿಡ್ಜ್‌ನಲ್ಲಿಡಲು ಅಣುಬಾಂಬ್ ತಯಾರಿಸಿದ್ದೀವಾ ಎಂದು ತಿರುಗೇಟು ನೀಡಿದ್ದಾರೆ.. ಹಾಗಾದ್ರೆ ಆಪ್ ಕಿ ಅದಾಲತ್ ಸಂದರ್ಶನದಲ್ಲಿ ಯೋಗಿ ಅಬ್ಬರ ಹೇಗಿತ್ತು..?ಯೋಗಿ ಇನ್ನೆನ್ನೆಲ್ಲಾ ಹೇಳಿದ್ರು ಬನ್ನಿ ನೋಡೋಣ..