Kashi Vishwanath ಮಾಧ್ಯಮದಲ್ಲಿ ಮೋದಿ ಗಂಗಾ ಸ್ನಾನ ವಿಡಿಯೋ ಯಾಕೆ? ಇತರರಿಗೆ ಪ್ರಾಮುಖ್ಯತೆ ಯಾಕಿಲ್ಲ? ರಾಹುಲ್ ಗಾಂಧಿ ಪ್ರಶ್ನೆ

Dec 15, 2021, 12:39 AM IST

ಕಾಶಿ ವಿಶ್ವನಾಥ ಧಾಮ್ ಕಾರಿಡಾರ್ ಯೋಜನೆ ಉದ್ಘಾಟನೆ ಮಾಡಿದ ನರೇಂದ್ರ ಮೋದಿ ಇಂದು ಕೆಲ ಸಭೆ ನಡೆಸಿ ಗಮನಸೆಳೆದಿದ್ದಾರೆ. ಈ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಚ್ಚರಿ ಪ್ರಶ್ನೆಯೊಂದನ್ನು ಇಟ್ಟಿದ್ದಾರೆ. ಗಂಗಾ ನದಿಯಲ್ಲಿ ಎಲ್ಲರೂ ಮುಳುಗುತ್ತಾರೆ. ಆದರೆ ಪ್ರಧಾನಿ ಮೋದಿಯ ವಿಡಿಯೋ ಮಾತ್ರ ಯಾಕೆ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ ಎಂದು ರಾಹುಲ್ ಪ್ರಶ್ನಿಸಿದ್ದಾರೆ. ಇತ್ತ ಅಖಿಲೇಶ್ ಯಾದವ್ ಮತ್ತೊಂದು ಪ್ರಶ್ನೆ ಎತ್ತಿದ್ದಾರೆ. ಗಂಗಾ ನದಿಯಲ್ಲಿ ಯೋಗಿ ಆದಿತ್ಯನಾಥ್ ಮುಳುಗಿಲ್ಲ. ಗಂಗೆ ಶುಚಿಯಾಗಿಲ್ಲದ ಕಾರಣ ಯೋಗಿ ಸ್ನಾನ ಮಾಡಿಲ್ಲ ಎಂದಿದ್ದಾರೆ.