ಮೇಕೆದಾಟು ವಿಚಾರದಲ್ಲಿ ಸಿ. ಟಿ. ಯೂಟರ್ನ್: ಕರ್ನಾಟಕದ ಹಿತಾಸಕ್ತಿ ಕಡೆಗಣಿಸಿದ ನಾಯಕ!

Aug 12, 2021, 3:04 PM IST

ಬೆಂಗಳೂರು(ಆ.12): ಮೇಕೆದಾಟು ವಿಷಯದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ ಯೂ ಟರ್ನ್‌ ಹೊಡೆದಿದ್ದು, ಕರ್ನಾಟಕದ ಹಿತಾಸಕ್ತಿಯನ್ನು ಕಡೆಗಣಿಸಿದ್ದಾರೆ. 

ಹೌದು ಮೇಕೆದಾಟು ವಿಚಾರದಲ್ಲಿ ನಾನು ಭಾರತದ ಪರ. ಕುಡಿಯುವ ನೀರಿನ ವಿಚಾರವನ್ನು ಭಾವನಾತ್ಮಕವಾಗಿ ನೋಡಬಾರದು. ಬೆಂಕಿ ಹಚ್ಚುವ ರಾಜಕಾರಣಕ್ಕೆ ಈ ನೀರನ್ನು ಬಳಸಿಕೊಳ್ಳುವುದಿಲ್ಲ. ಬದಲಾಗಿ ಸೌಹಾರ್ದಯುತವಾಗಿ ಈ ವಿಚಾರವನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ಟಿ. ಟಿ. ರವಿ ಹೇಳಿದ್ದಾರೆ. 

ಸದ್ಯ ಅವರ ಈ ಹೇಳಿಕೆ ಕನ್ನಡಿಗರನ್ನು ಕೆರಳುವಂತೆ ಮಾಡಿದೆ.