ಕರ್ನಾಟಕದ 15.40 ಲಕ್ಷ ಮಂದಿ ಕಾಡಲಿದೆ ಕೊರೋನಾ 3ನೇ ಅಲೆ; ಎಚ್ಚರಿಕೆ ನೀಡಿದ ತಜ್ಞರ ವರದಿ!

Jun 26, 2021, 11:19 PM IST

ಕೊರೋನಾ ವೈರಸ್ 2ನೇ ಅಲೆ ತಗ್ಗಿದ  ಕಾರಣ ಅನ್‌ಲಾಕ್ ಮಾಡಲಾಗಿದೆ. ಆದರೆ ಒಂದೇ ವಾರಕ್ಕೆ ರಾಜ್ಯದಲ್ಲಿ ಕೊರೋನಾ ಪ್ರಕರಣ ಏರಿಕೆಯಾಗಿದೆ. ಇದರ ನಡುವೆ ಡಾ.ದೇವಿ ಶೆಟ್ಟಿ ನೇತೃತ್ವದ ತಜ್ಞ ವೈದ್ಯರ ಸಮಿತಿ ಸರ್ಕಾರಕ್ಕೆ 3ನೇ ಅಲೆ ಕುರಿತ ವರದಿ ಸಲ್ಲಿಸಿದೆ. ಈ ವರದಿ ಪ್ರಕಾರ ಅಂದಾಜು 15.40 ಲಕ್ಷ ಮಂದಿಗೆ 3ನೇ ಅಲೆ ಸೋಂಕು ತಗುಲಲಿದೆ. ಇನ್ನೂ ಮಕ್ಕಳ ಮೇಲಿನ ಪರಿಣಾಮ ಕುರಿತು ವರದಿ ವಿವರಣೆ ನೀಡಿದೆ. ಇದರೊಂದಿಗೆ ಡೆಲ್ಟಾ ಪ್ಲಸ್ ವೈರಸ್, ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ