Farmers Protest in Delhi: ಡ್ರೋನ್ ಮೇಲೆ ಟೆನಿಸ್ ಬಾಲ್ ದಾಳಿ: ಪೊಲೀಸರ ತಂತ್ರಗಳಿಗೆ ಅನ್ನದಾತರ ಪ್ರತಿತಂತ್ರ..!

Farmers Protest in Delhi: ಡ್ರೋನ್ ಮೇಲೆ ಟೆನಿಸ್ ಬಾಲ್ ದಾಳಿ: ಪೊಲೀಸರ ತಂತ್ರಗಳಿಗೆ ಅನ್ನದಾತರ ಪ್ರತಿತಂತ್ರ..!

Published : Feb 16, 2024, 04:48 PM ISTUpdated : Feb 16, 2024, 04:49 PM IST

ಬ್ಯಾರಿಕೇಡ್ಗಳನ್ನ ತೆರವು ಮಾಡೋಕೆ ಕ್ರೇನ್..!
ಟ್ರಾಕ್ಟರ್ ಟೈರ್ಗಳನ್ನ ಸೀಳಿದ ಮೊಳೆ ವ್ಯೂಹ..!
ದಿನೇ ದಿನೇ ಹೆಚ್ಚುತ್ತಿದೆ ರೈರ ಹೋರಾಟದ ಕಿಚ್ಚು..!

ರೈತರ ಹೋರಾಟದ ಕಿಚ್ಚು ದಿನೇ ದಿನೇ ಹೆಚ್ಚಾಗ್ತಾ ಇದೆ. 10 ಬೇಡಿಕೆಗಳನ್ನ ಈಡೇರಿಸಬೇಕು ಅನ್ನೋ ನಿಟ್ಟಿನಲ್ಲಿ ಶುರುವಾಗಿರೋ ಈ ಹೋರಾಟ ಪೊಲೀಸ್(Police) ವರ್ಸಸ್ ರೈತ(Farmers) ಎಂಬಂತಾಗಿದೆ. ಆದ್ರೆ ಪೊಲೀಸರ ವ್ಯೂಹ ಬೇಧಿಸೋಕೆ ರೈತರು ಚಿತ್ರ ವಿಚಿತ್ರ ಪ್ಲಾನ್ಗಳನ್ನ ಮಾಡ್ತಾ ಇದಾರೆ. ಈ ಮಧ್ಯ ಕರ್ನಾಟಕದಿಂದ(Karnataka) ಪ್ರತಿಭಟನೆಗೆ ಹೊರಟಿದ್ದ ಸುಮಾರು 70 ರೈತರನ್ನ ಮಧ್ಯ ಪ್ರದೇಶದಲ್ಲಿ ಬಂಧಿಸಲಾಗಿದೆ. ರೈತರ ಕಿಚ್ಚು ದಿನೇ ದಿನೇ ಹೆಚ್ಚಾಗ್ತಾ ಇದೆ, ಜ್ವಾಲಾಮುಖಿ ಧಗಧಗಿಸ್ತಾ ಇದೆ. ದೆಹಲಿ ಚಲೋ ಹೋರಾಟವನ್ನ ಹತ್ತಿಕ್ಕೋಕೆ ಪೊಲೀಸರು ಹರಸಾಹಸ ಪಡ್ತಾ ಇದಾರೆ. ಪೊಲೀಸರು ಹೂಡುವ ಪ್ರತಿಯೊಂದು ಅಸ್ತ್ರಗಳಿಗೆ ರೈತರು ತಮ್ಮದೇ ಶೈಲಿಯಲ್ಲಿ ಪ್ರತ್ಯಾಸ್ತ್ರವನ್ನ ಪ್ರಯೋಗಿಸ್ತಾ ಇದಾರೆ.ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರನ್ನ ಚದುರಿಸೋಕೆ ಪೊಲೀಸರು ಅಶ್ರವಾಯು ಅಥವಾ ಟಿಯರ್ ಗ್ಯಾಸ್  ಪ್ರಯೋಗ ಮಾಡಿದ್ದರು. ಡ್ರೋನ್ (Drone) ಮೂಲಕ ರೈತರ ಮೇಲೆ ಗ್ಯಾಸ್ ದಾಳಿ ಮಾಡಿದ್ದರು. ಆ ಘಾಟಿಗೆ ರೈತರು ಚದುರಿಹೋಗಿದ್ದರು. ಪ್ರತಿಭಟನಾಕಾರರು ಶಂಭು ಗಡಿಯನ್ನು ತಲುಪಿ ಸ್ಥಳದಿಂದ ಬ್ಯಾರಿಕೇಡ್‌ಗಳನ್ನು ಎತ್ತಿದಾಗ, ಪೊಲೀಸರು ಪ್ರತಿದಾಳಿ ನಡೆಸಿದರು. ಪೊಲೀಸರು ಡ್ರೋನ್‌ಗಳ ಮೂಲಕ ಗಡಿಯ ಇನ್ನೊಂದು ಬದಿಯ ಮೇಲೆ ಕಣ್ಣಿಟ್ಟಿದ್ದರು. ಅದೇ ಸಮಯದಲ್ಲಿ, ಡ್ರೋನ್‌ಗಳಿಂದ ಅಶ್ರುವಾಯು ಶೆಲ್‌ಗಳನ್ನು ಸಹ ಬಿಡುಗಡೆ ಮಾಡಲಾಗಿತ್ತು.

ಇದನ್ನೂ ವೀಕ್ಷಿಸಿ:  Rajya Sabha Election: ನಡೆಯಲಿದ್ಯಾ ಅಡ್ಡ ಮತದಾನ..? ಏನಿದು ಮತ ಸಮೀಕರಣ..?

22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
Read more