ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?

ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?

Published : Jan 29, 2026, 11:49 AM IST
ಮಹಾರಾಷ್ಟ್ರ ರಾಜಕಾರಣದ 'ಕಿಂಗ್ ಮೇಕರ್' ಅಜಿತ್ ಪವಾರ್ ದಾರುಣವಾಗಿ ಸಾವನ್ನಪ್ಪಿದ್ದಾರೆ. ಅವರ ಸಾವು ಆಕಸ್ಮಿಕವೋ ಅಥವಾ ವ್ಯವಸ್ಥಿತ ಹತ್ಯೆಯೋ ಎಂಬ ಅನುಮಾನಗಳು ಹುಟ್ಟಿಕೊಂಡಿದ್ದು, ಈ ಸಾವಿನ ಸುತ್ತ ಪಿತೂರಿಯ ನೆರಳು ದಟ್ಟವಾಗಿದೆ. ಈ ಘಟನೆಯು ರಾಷ್ಟ್ರ ರಾಜಕಾರಣದಲ್ಲಿಯೂ ತೀವ್ರ ಕಂಪನ ಸೃಷ್ಟಿಸಿದೆ.

ಅಜಿತ್ ಪವಾರ್ ಅವರ ಸಾವು, ಮಹಾರಾಷ್ಟ್ರದಲ್ಲಿ ಮಾತ್ರವೇ ಅಲ್ಲ.. ರಾಷ್ಟ್ರ ಮಟ್ಟದಲ್ಲೂ ಕಂಪನ ಸೃಷ್ಟಿಸಿದೆ.. ದೊಡ್ಡ ದೊಡ್ಡ ಪಟ್ಟದ ಮೇಲೆ ಕಣ್ಣಿಟ್ಟು ಕಾಯ್ತಾ ಇದ್ದ, ಮಹಾತ್ವಾಕಾಂಕ್ಷಿ ನಾಯಕರ ದುರಂತ, ದೇಶವನ್ನೇ ಬೆಚ್ಚಿಬೀಳಿಸಿದೆ.. ಅಷ್ಟಕ್ಕೂ, ಮಹಾರಾಷ್ಟ್ರ ರಾಜಕಾರಣದಲ್ಲಿ ಇವರ ಪಾತ್ರ ಎಂಥಾದ್ದು ಗೊತ್ತಾ?  ಸರ್ಕಾರದ ಭವಿಷ್ಯವನ್ನೇ ನಿರ್ಧರಿಸಬಲ್ಲ ನಾಯಕ, ಈಗ ಗುರುತೂ ಸಿಗದ ಹಾಗೆ ದಹಿಸಿ ಜೀವ ಬಿಟ್ಟಿದ್ದಾರೆ.. ಅವರ ಸಾವಿನ ಹಿಂದೆ ನಿಗೂಢತೆಯೊಂದು ಅಡಗಿದೆ ಅನ್ನೋ ಮಾತಿದೆ.

ಈ ಮಹಾದುರಂತದ ಬೆನ್ನಲ್ಲೇ, ಇಂಥಾ ಸ್ಫೋಟಕ ಹೇಳಿಕೆ ಅಡಗಿರೋಕೆ ಸಾಧ್ಯ ಅಂತ, ಯಾರಿಗಾದ್ರೂ ಊಹಿಸೋಕ್ಕಾದ್ರೂ ಸಾಧ್ಯವಾ? ಇಲ್ವೇ ಇಲ್ಲ.. ಹಾಗಾದ್ರೆ, ಮಮತಾ ಬ್ಯಾನರ್ಜಿ ಈ ಮಾತು ಹೇಳಿದ್ಯಾಕೆ? ಅಜಿತ್ ಪವಾರ್ ಅವರ ಪವರ್ ಈಗ ಯಾರ ವಶವಾಗಲಿದೆ? ಮಹಾರಾಜಕಾರಣದಲ್ಲಿ ಮುಂದೇನಾಗಲಿದೆ?  ಅಜಿತ್ ಪವಾರ್ ಅವರ ಸಾವಿನ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಅವರು ನೀಡಿರುವ ಹೇಳಿಕೆಗಳು ಈಗ ದೊಡ್ಡ ಸದ್ದು ಮಾಡುತ್ತಿವೆ.. ಅದ್ಯಾಕೆ ಗೊತ್ತಾ?

ಅಜಿತ್ ಪವಾರ್.. ಈ ಹೆಸರು, ಮಹಾರಾಷ್ಟ್ರ ರಾಜಕಾರಣದಲ್ಲಿ ಯಾರೂ ಊಹಿಸೋಕೂ ಸಾಧ್ಯವಾಗದ ಹಾಗೆ ಗಟ್ಟಿಯಾಗಿ ನೆಲೆಯೂರಿತ್ತು.. ಇವರ ಸಹಾಯವಿಲ್ಲದೆ, ಸ್ನೇಹಿತರಿಗೆ ಗೆಲವು ದಕ್ಕುತ್ತಿರಲಿಲ್ಲ.. ಇವರಿಗೆ ಸವಾಲು ಹಾಕಿ, ಶತ್ರುಪಾಳೆಯ ಗೆಲ್ಲೂಕೂ ಆಗ್ತಾ ಇರ್ಲಿಲ್ಲ.. ಅಜಿತ್ ಪವಾರ್ ಯಾರ ಪರ ಇರ್ತಾರೋ, ಅವರ ಕೈಲಿ ಪೊಲಿಟಿಕಲ್ ಪವರ್ ಇರ್ತಾ ಇತ್ತು.. ಆದ್ರೆ, ಇಂಥಾ ಕಿಂಗ್ ಮೇಕರ್, ಈಗ ದಾರುಣವಾಗಿ ಸಾವಿಗೀಡಾಗಿದ್ದಾರೆ.. ಅದೂ ಕೂಡ, ಅತಿ ಭಯಾನಕ ರೀತಿಯಲ್ಲಿ.. ಆ ಸಾವು, ಸಾವಿನ ಸುತ್ತಲೂ ಇರೋ ರಾಜಕೀಯ, ರಾಜಕೀಯದ ಬೆನ್ನಿಗೇ ಅಂಟಿಕೊಂಡಿರೋ ಸಂಚಿನ ಸುರುಳಿ, ಎಲ್ಲವನ್ನೂ ನಿಮ್ಮ ಮುಂದೆ, ಒಂದೊಂದಾಗೇ ಬಿಚ್ಚಿಡ್ತಿದ್ದೀವಿ ನೋಡಿ..

24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
Read more